ಬ್ರಹ್ಮಾವರ:ಬ್ರಹ್ಮಾವರ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷರಾಗಿ ಸಚಿನ್ ಪೂಜಾರಿ ಆಯ್ಕೆಗೊಂಡರು. ಭಾನುವಾರ ಬ್ರಹ್ಮಾವರ ನಾರಾಯಣ ಗುರು ಸಭಾ ಭವನದಲ್ಲಿ ಬ್ರಹ್ಮಾವರ ಬಿಲ್ಲವ ಸಂಘದ ಬಿಎನ್ ಶಂಕರ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಬ್ರಹ್ಮಾವರ ಭಾಗದ 8 ಗ್ರಾಮಗಳ ಬಿಲ್ಲವ ಯುವಕರ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಂಘಟನೆಗಾಗಿ ರಚಿಸಲಾದ ಯುವ ವೇದಿಕೆಯ ಉಪಾಧ್ಯಕ್ಷರಾಗಿ ಮಿಥುನ್ ಅಮೀನ್, ಪ್ರಧಾನ ಕಾರ್ಯದರ್ಶಿಯಾಗಿ ಹಾರಾಡಿ ಸುಶಾಂತ್ ಪೂಜಾರಿಯವರನ್ನು ಆಯ್ಕೆಮಾಡಿ ಸಂಘಟನೆಯನ್ನು ಗ್ರಾಮ ಮಟ್ಟದಲ್ಲಿ ವಿಸ್ತರಿಸಿ ಬಲಪಡಿಸುವ ಹೊಣೆಗಾರಿಕೆ ನೀಡಲಾಯಿತು.
ಮಾತೃ ಸಂಘದ ಗೌರವ ಅಧ್ಯಕ್ಷ ನರಸಿಂಹ ಪೂಜಾರಿ, ಉಪಾಧ್ಯಕ್ಷರುಗಳಾದ ರಾಘು ಪೂಜಾರಿ ಹೇರೂರು, ಅಶೋಕ ಪೂಜಾರಿ ಹಾರಾಡಿ, ರಾಜು ಪೂಜಾರಿ ಉಪ್ಪೂರು, ಸಂತೋಷ್ ಪೂಜಾರಿ ಬಿರ್ತಿ, ಕಾರ್ಯದರ್ಶಿ ಶೇಖರ್ ಪೂಜಾರಿ, ಖಜಾಂಚಿ ಮೋಹನ್ ಪೂಜಾರಿ, ಜತೆ ಕಾರ್ಯದರ್ಶಿಗಳಾದ ಅಶೋಕ ಪೂಜಾರಿ, ಉಮೇಶ್ ಪೂಜಾರಿ ಬಿರ್ತಿ, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಕುಂದರ್ ಜೆ. ಬಿ, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಪೂಜಾರಿ, ಕಾರ್ಯದರ್ಶಿ ಶ್ರೀಮತಿ ಶೈಲಾ ಹೇರೂರು ಉಪಸ್ಥಿತರಿದ್ದರು.
ಸಚಿನ್ರವರು ನಾನಾ ಸಾರ್ವಜನಿಕ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು ಉಡುಪಿಯನ್ ಕ್ರೇಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರೂ ಆಗಿದ್ದಾರೆ.







