ಕುಂದಾಪುರ : ಚಿರಾಯು ಕನ್ನಡ ವಾಹಿನಿ, ಪ್ರತಿಫಲ ಫೌಂಡೇಶನ್(ರಿ), ಧಾರವಾಡ ಇವರ ಸಂಯೋಗದಲ್ಲಿ ಪ್ರಥಮ ರಾಷ್ಟ್ರೀಯ ಚಿತ್ರಕಲಾ ಸಮ್ಮೇಳನ-2026 ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭ ಆಲೂರು ವೆಂಕಟರಾಮ್ ಸಭಾಭವನ ಧಾರವಾಡದಲ್ಲಿ ನಡೆಯಿತು.
ಪ್ರಥಮ ಚಿತ್ರಕಲಾ ಸಮ್ಮೇಳನ ಸಮಾರಂಭದಲ್ಲಿ ಕುಂದಾಪುರದ ಖ್ಯಾತ ಗಾಯಕಿ ಹೇಮಾ ಹೆಬ್ಬಾರ್ ಇವರಿಗೆ ಸಂಗೀತ ಕಲಾ ರತ್ನ
ಪ್ರಶಸ್ತಿ ನೀಡಿ ಗೌರವಿಸಿದರು.
ಹಿರಿಯ ಕಲಾವಿದ ಮಹಾದೇವಪ್ಪ ಗುರುನಾಥಪ್ಪ ಕಮ್ಮಾರ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ದಿಗ್ಗೇವಾಡಿ ದುರ್ಗಾಪರಮೇಶ್ವರಿ ಶ್ರೀ ಕಾಳಿಕಾದೇವಿಯ ಆರಾಧಕರು ಮತ್ತು ಧರ್ಮಾಧಿಕಾರಿ ವೇದಮೂರ್ತಿ ಡಾ ಕಾಡಯ್ಯಾ ಶಿವಮೂರ್ತಿ ಹಿರೇಮಠ ಸ್ವಾಮೀಜಿ, ಚಿರಾಯು ಕನ್ನಡ ವಾಹಿನಿಯ ಮುಖ್ಯಸ್ಥ ಮಂಜುನಾಥ್ ಶಿವಕ್ಕನವರ್, ಪ್ರತಿಫಲ ಫೌಂಡೇಶನ್ ರಿ ಧಾರವಾಡ ಸ್ಥಾಪಕಾಧ್ಯಕ್ಷೆ ಕು|| ಪೂಜಾ ಹನುಮಂತಪ್ಪ ಬಡಿಗೇರ್, ಹಾಗೂ ಮೊದಲಾದವರು ವೇದಿಕೆಯಲ್ಲಿ ಇದ್ದರು.







