Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಯಕ್ಷಗಾನಕ್ಕೂ ಅಕಾಡೆಮಿಕ್ ಪರೀಕ್ಷೆ? ಮಂಗಳೂರು ವಿವಿಯಲ್ಲಿ ಚರ್ಚೆ…!

Dhrishya News by Dhrishya News
28/02/2026
in ಕರಾವಳಿ, ಸುದ್ದಿಗಳು
0
ಯಕ್ಷಗಾನಕ್ಕೂ ಅಕಾಡೆಮಿಕ್ ಪರೀಕ್ಷೆ? ಮಂಗಳೂರು ವಿವಿಯಲ್ಲಿ ಚರ್ಚೆ…!
0
SHARES
3
VIEWS
Share on FacebookShare on Twitter

ಮಂಗಳೂರು, ಫೆ. 28: ಸಂಗೀತ ಹಾಗೂ ನೃತ್ಯಗಳಿಗೆ ಇರುವಂತೆ ಯಕ್ಷಗಾನಕ್ಕೂ ವ್ಯವಸ್ಥಿತ ಪರೀಕ್ಷಾ ಕ್ರಮ ಜಾರಿಗೆ ತರಲು ಮಂಗಳೂರು ವಿಶ್ವವಿದ್ಯಾಲಯ ಚಿಂತನೆ ಆರಂಭಿಸಿದೆ. ಈ ಕುರಿತು ಪ್ರಾಥಮಿಕ ಹಂತದ ಮಾತುಕತೆಗಳು ನಡೆದಿದ್ದು, ಅಂತಿಮ ನಿರ್ಧಾರ ಇನ್ನಷ್ಟೇ ಕೈಗೊಳ್ಳಬೇಕಾಗಿದೆ.

ಯಕ್ಷಗಾನದ ಹುಟ್ಟೂರಾದ ಕರಾವಳಿಯಲ್ಲಿಯೇ ಈ ಕಲೆಗೆ ಅಕಾಡೆಮಿಕ್ ಮಾನ್ಯತೆ ನೀಡುವುದು ಸೂಕ್ತ ಎಂಬ ಅಭಿಪ್ರಾಯದಿಂದ ವಿವಿ ಮುಂದಾಗಿದೆ. ಹಿರಿಯ ಯಕ್ಷಗಾನ ಕಲಾವಿದರು ಹಾಗೂ ಕ್ಷೇತ್ರದ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿ ಕಾರ್ಯಯೋಜನೆ ರೂಪಿಸುವ ಪ್ರಕ್ರಿಯೆ ಸಾಗುತ್ತಿದೆ. ಕರಾವಳಿ ಭಾಗದಲ್ಲಿ 50ಕ್ಕೂ ಅಧಿಕ ವೃತ್ತಿಪರ ಮೇಳಗಳು ಸಕ್ರಿಯವಾಗಿದ್ದು, ಅನೇಕ ಹವ್ಯಾಸಿ ಬಳಗಗಳು, ಶಾಲಾ-ಕಾಲೇಜುಗಳಲ್ಲಿನ ತರಬೇತಿ ಕೇಂದ್ರಗಳು ಹಾಗೂ ಯಕ್ಷಗುರುಗಳ ಮಾರ್ಗದರ್ಶನದಲ್ಲಿನ ಕಲಿಕಾ ವ್ಯವಸ್ಥೆ ಈಗಾಗಲೇ ಇದೆ. ಈ ಹಿನ್ನಲೆಯಲ್ಲಿ ಶಿಸ್ತಿನ ಪಠ್ಯಕ್ರಮ ಮತ್ತು ಪರೀಕ್ಷಾ ಮಾದರಿ ರೂಪಿಸಲು ಸಾಧ್ಯತೆಗಳ ಪರಿಶೀಲನೆ ನಡೆಯುತ್ತಿದೆ.

ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ, ನೃತ್ಯ ಮತ್ತು ತಾಳವಾದ್ಯ ವಿಶ್ವವಿದ್ಯಾಲಯದಲ್ಲಿ ಜಾರಿಯಲ್ಲಿರುವ ಪರೀಕ್ಷಾ ಪದ್ಧತಿಯನ್ನು ಮಾದರಿಯಾಗಿ ತೆಗೆದುಕೊಂಡು, ಯಕ್ಷಗಾನಕ್ಕೆ ವಿಶೇಷ ಕೋರ್ಸ್ ಹಾಗೂ ಹಂತವಾರು ಪರೀಕ್ಷೆ ನಡೆಸುವ ಆಲೋಚನೆ ಇದೆ. ಮಂಗಳೂರು ವಿವಿಯ ಯಕ್ಷಗಾನ ಅಧ್ಯಯನ ಕೇಂದ್ರದ ವ್ಯಾಪ್ತಿಯಲ್ಲಿ ಈ ಯೋಜನೆ ಜಾರಿಯಾಗುವ ಸಾಧ್ಯತೆ ವ್ಯಕ್ತವಾಗಿದೆ.

ಸಂಗೀತ-ನೃತ್ಯಗಳಂತೆ ಜೂನಿಯರ್, ಸೀನಿಯರ್, ವಿದ್ವತ್ ಪೂರ್ವ ಹಾಗೂ ವಿದ್ವತ್ ಹಂತಗಳಲ್ಲಿ ಪಠ್ಯಕ್ರಮ ರೂಪಿಸಿ ಪರೀಕ್ಷೆ ನಡೆಸುವ ಪ್ರಸ್ತಾವನೆ ಚರ್ಚೆಯಲ್ಲಿದೆ. ಇದಕ್ಕೂ ಮೊದಲು ಕುಂಬ್ಳೆ ಸುಂದರ್‌ರಾವ್ ಅವರು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಇಂತಹ ಪ್ರಯತ್ನ ಕೈಗೆತ್ತಿಕೊಳ್ಳಲಾಗಿತ್ತು. ಪಠ್ಯ ರೂಪಿಸುವ ಹಂತವರೆಗೂ ಕೆಲಸ ನಡೆದರೂ, ಅಂತಿಮವಾಗಿ ಅದು ಜಾರಿಗೆ ಬರಲಿಲ್ಲ. ಈ ಬಾರಿ ಮಾತ್ರ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ದಿಟ್ಟ ಮನಸ್ಸಿನಿಂದ ವಿವಿ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. 

Previous Post

ಹೈದರಾಬಾದ್‌ನಲ್ಲಿ ಕುಳಿತು ಸೈಬರ್ ವಂಚನೆ: ಆರು ಮಂದಿ ಅರೆಸ್ಟ್…!

Next Post

ಪುತ್ತೂರು ಗಡಿ ಭಾಗದಲ್ಲಿ ಕಾಡಾನೆ ಕಾಟ ತೀವ್ರ: ರೈತರಲ್ಲಿ ಆತಂಕ…!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಪುತ್ತೂರು ಗಡಿ ಭಾಗದಲ್ಲಿ ಕಾಡಾನೆ ಕಾಟ ತೀವ್ರ: ರೈತರಲ್ಲಿ ಆತಂಕ…!

ಪುತ್ತೂರು ಗಡಿ ಭಾಗದಲ್ಲಿ ಕಾಡಾನೆ ಕಾಟ ತೀವ್ರ: ರೈತರಲ್ಲಿ ಆತಂಕ...!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಮೆದುಳಿನ ನರಕೋಶಗಳನ್ನು ಗುರಿಯಾಗಿಸುವ ಮಾರಕ ಶಿಲೀಂಧ್ರದ ರಹಸ್ಯ ಬಯಲು – ಮಾಹೆ–ಶ್ರೋಡಿಂಗರ್ ಸಂಯುಕ್ತ ಅಧ್ಯಯನದಿಂದ ಮಹತ್ವದ ಸಾಧನೆ..!!

ಮೆದುಳಿನ ನರಕೋಶಗಳನ್ನು ಗುರಿಯಾಗಿಸುವ ಮಾರಕ ಶಿಲೀಂಧ್ರದ ರಹಸ್ಯ ಬಯಲು – ಮಾಹೆ–ಶ್ರೋಡಿಂಗರ್ ಸಂಯುಕ್ತ ಅಧ್ಯಯನದಿಂದ ಮಹತ್ವದ ಸಾಧನೆ..!!

28/02/2026
ಅಕ್ರಮ ಜಾನುವಾರು ಸಾಗಾಟ: ಕೊಳ್ನಾಡಿನಲ್ಲಿ ವಾಹನ ವಶಕ್ಕೆ…!

ಅಕ್ರಮ ಜಾನುವಾರು ಸಾಗಾಟ: ಕೊಳ್ನಾಡಿನಲ್ಲಿ ವಾಹನ ವಶಕ್ಕೆ…!

28/02/2026
ಮಂಗಳೂರು–ಮಸ್ಕತ್ ನೇರ ವಿಮಾನ ಸೇವೆ ಮಾರ್ಚ್ 1ರಿಂದ ಮರುಪ್ರಾರಂಭ…!

ಮಂಗಳೂರು–ಮಸ್ಕತ್ ನೇರ ವಿಮಾನ ಸೇವೆ ಮಾರ್ಚ್ 1ರಿಂದ ಮರುಪ್ರಾರಂಭ…!

28/02/2026
ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಮಾರ್ಚ್ 1ರಂದು ಕುಲಗುರುಗಳ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಬೃಹತ್ ಸಮಾವೇಶ ಹಾಗೂ ಬೈಕ್ ರ‍್ಯಾಲಿ..!

ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಮಾರ್ಚ್ 1ರಂದು ಕುಲಗುರುಗಳ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಬೃಹತ್ ಸಮಾವೇಶ ಹಾಗೂ ಬೈಕ್ ರ‍್ಯಾಲಿ..!

28/02/2026

Recent News

ಮೆದುಳಿನ ನರಕೋಶಗಳನ್ನು ಗುರಿಯಾಗಿಸುವ ಮಾರಕ ಶಿಲೀಂಧ್ರದ ರಹಸ್ಯ ಬಯಲು – ಮಾಹೆ–ಶ್ರೋಡಿಂಗರ್ ಸಂಯುಕ್ತ ಅಧ್ಯಯನದಿಂದ ಮಹತ್ವದ ಸಾಧನೆ..!!

ಮೆದುಳಿನ ನರಕೋಶಗಳನ್ನು ಗುರಿಯಾಗಿಸುವ ಮಾರಕ ಶಿಲೀಂಧ್ರದ ರಹಸ್ಯ ಬಯಲು – ಮಾಹೆ–ಶ್ರೋಡಿಂಗರ್ ಸಂಯುಕ್ತ ಅಧ್ಯಯನದಿಂದ ಮಹತ್ವದ ಸಾಧನೆ..!!

28/02/2026
ಅಕ್ರಮ ಜಾನುವಾರು ಸಾಗಾಟ: ಕೊಳ್ನಾಡಿನಲ್ಲಿ ವಾಹನ ವಶಕ್ಕೆ…!

ಅಕ್ರಮ ಜಾನುವಾರು ಸಾಗಾಟ: ಕೊಳ್ನಾಡಿನಲ್ಲಿ ವಾಹನ ವಶಕ್ಕೆ…!

28/02/2026
ಮಂಗಳೂರು–ಮಸ್ಕತ್ ನೇರ ವಿಮಾನ ಸೇವೆ ಮಾರ್ಚ್ 1ರಿಂದ ಮರುಪ್ರಾರಂಭ…!

ಮಂಗಳೂರು–ಮಸ್ಕತ್ ನೇರ ವಿಮಾನ ಸೇವೆ ಮಾರ್ಚ್ 1ರಿಂದ ಮರುಪ್ರಾರಂಭ…!

28/02/2026
ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಮಾರ್ಚ್ 1ರಂದು ಕುಲಗುರುಗಳ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಬೃಹತ್ ಸಮಾವೇಶ ಹಾಗೂ ಬೈಕ್ ರ‍್ಯಾಲಿ..!

ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಮಾರ್ಚ್ 1ರಂದು ಕುಲಗುರುಗಳ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಬೃಹತ್ ಸಮಾವೇಶ ಹಾಗೂ ಬೈಕ್ ರ‍್ಯಾಲಿ..!

28/02/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved