ಬ್ರಹ್ಮಾವರ: ಬ್ರಹ್ಮಾವರ ಬಳಿಯ ಕೊಳಲಗಿರಿಯಲ್ಲಿ ಸ್ವರ್ಗ ಆಶ್ರಮ ದಲ್ಲಿ ಆಶ್ರಯ ಪಡೆದುಕೊಂಡಿರುವ ಪುರುಷೋತ್ತಮ ಶೆಟ್ಟಿ 69 ವರ್ಷದ ವ್ಯಕ್ತಿ 25-07-2026ರಂದು ಆಶ್ರಮದ ಮೇಲ್ಚಾವಣಿಯ ಹಂಚು ತೆಗೆದುಕೊಂಡು ತಪ್ಪಿಸಿಕೊಂಡಿದ್ದಾರೆ ಎಂದು ಆಶ್ರಮದ ಮುಖ್ಯಸ್ಥ ಡಾ, ಶಶಿಕಿರಣ್ ಶೆಟ್ಟಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
5 ಅಡಿ 3 ಇಂಚು ಎತ್ತರ, ಎಣ್ಣೆ ಕಪ್ಪು ಮೈಬಣ್ಣ ಹೊಂದಿದ್ದು ಕಪ್ಪು ಬಿಳಿ ಮಿಶ್ರಿತ ತಲೆ ಕೂದಲು, ಬೂದುಬಣ್ಣದ ಅಂಗಿ, ಬರ್ಮೋಡಾ ಧರಿಸಿದ್ದು ಇಂತಹ ವ್ಯಕ್ತಿಯನ್ನು ಕಂಡವರು ಪೊಲೀಸ್ ಕಂಟ್ರೋಲ್ ರೂ ನಂ 0820-2526444 ಅಥವಾ ಬ್ರಹ್ಮಾವರ ಪೊಲೀಸ್ವೃತ್ತ ನಿರೀಕ್ಷಕರ ಕಛೇರಿಯ 0820-2561966 ಮತ್ತು ಮೊಬೈಲ್ ಸಂಖ್ಯೆ9480805432 ಗೆ ತಿಳಿಸುವಂತೆ ಕೋರಲಾಗಿದೆ.






