ಬೈಂದೂರು: ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕನಿಗೆ ಟಿಪ್ಪರ್ ಹಿಂಬದಿ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಚಂದ್ರ ದೇವಾಡಿಗ (41), ಅಂಬಾಗಿಲು ಉಪ್ಪುಂದ ಗ್ರಾಮದವರು ನೀಡಿದ ದೂರಿನ ಪ್ರಕಾರ, ಅವರು ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರು. ದಿನಾಂಕ 02/04/2026 ರಂದು ಬೆಳಿಗ್ಗೆ 09:00 ಗಂಟೆಗೆ ಕಾಲ್ತೋಡು ಗ್ರಾಮದ ಯಡೇರಿ ಪ್ರದೇಶದಲ್ಲಿರುವ ರಘುರಾಮ ಶೆಟ್ಟಿರವರ ನಿರ್ಮಾಣ ಹಂತದ ಮನೆಯ ಸ್ಲ್ಯಾಬ್ ಕೆಲಸ ಮುಗಿಸಿ, ಕಬ್ಬಿಣದ ಶೀಟ್ ಹಾಗೂ ಮರದ ಕಂಬಿಗಳನ್ನು ಬಿಚ್ಚಿ ರಿಷಿ ಕುಮಾರ ಮತ್ತು ರಾಜು ದೇವಾಡಿಗರ ಜೊತೆ ಟಿಪ್ಪರ್ ಗೆ ತುಂಬಿಸುತ್ತಿದ್ದರು.
ಈ ವೇಳೆ ಟಿಪ್ಪರ್ ಚಾಲಕ ಪರಶುರಾಮ ಯಾವುದೇ ಸೂಚನೆ ನೀಡದೆ ನಿರ್ಲಕ್ಷ್ಯದಿಂದ ಏಕಾಏಕಿ ವಾಹನವನ್ನು ಹಿಂದಕ್ಕೆ ಚಲಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ. ಪರಿಣಾಮವಾಗಿ, ಹಿಂಬದಿ ಲೋಡ್ ಮಾಡುತ್ತಿದ್ದ ರಿಷಿ ಕುಮಾರ ಅವರಿಗೆ ಟಿಪ್ಪರ್ನ ತೆರೆದ ಕಬ್ಬಿಣದ ಬಾಗಿಲು ತೊಡೆಗಳ ಮಧ್ಯ ಭಾಗಕ್ಕೆ ಬಡಿದು ಗಂಭೀರ ಒಳನೋವು ಉಂಟಾಗಿದೆ.
ಗಾಯಗೊಂಡ ರಿಷಿ ಕುಮಾರ ಅವರನ್ನು ತಕ್ಷಣ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 36/2026 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 125(b) ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ.






