Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಆರೋಗ್ಯ

ಮಣಿಪಾಲದಲ್ಲಿ AHA 2025 CPR ಮಾರ್ಗಸೂಚಿ ಬಿಡುಗಡೆ: ಸಮುದಾಯ ತರಬೇತಿಗೆ ಒತ್ತು..!!

Dhrishya News by Dhrishya News
31/03/2026
in ಆರೋಗ್ಯ, ಮುಖಪುಟ
0
ಮಣಿಪಾಲದಲ್ಲಿ AHA 2025 CPR ಮಾರ್ಗಸೂಚಿ ಬಿಡುಗಡೆ: ಸಮುದಾಯ ತರಬೇತಿಗೆ ಒತ್ತು..!!
0
SHARES
42
VIEWS
Share on FacebookShare on Twitter

ಮಣಿಪಾಲ, ಮಾ.31: ಅಮೆರಿಕನ್ ಹಾರ್ಟ್ ಅಸೋಸಿಯೇಷನ್ (AHA) ಭಾರತದಲ್ಲಿ ಕಾರ್ಡಿಯೋಪಲ್ಮನರಿ ರಿಸಸಿಟೇಶನ್ (CPR) ಮತ್ತು ತುರ್ತು ಕಾರ್ಡಿಯೋವಾಸ್ಕುಲರ್ ಕೇರ್ (ECC) ಗಾಗಿ ತನ್ನ 2025ರ ಮಾರ್ಗಸೂಚಿಗಳನ್ನು ಮಣಿಪಾಲ ಅಕಾಡೆಮಿ ಒಫ್ ಹೈಯರ್ ಎಜುಕೇಶನ್ ಘಟಕವಾದ ಕಸ್ತೂರ್ಭ ಮೆಡಿಕಲ್ ಕಾಲೇಜ್ ನಲ್ಲಿ ಬಿಡುಗಡೆ ಮಾಡಿತು.

“ಪುನರುಜ್ಜೀವನ ವಿಜ್ಞಾನ ಮತ್ತು ತುರ್ತು ಕಾರ್ಡಿಯೋವಾಸ್ಕುಲರ್ ಕೇರ್‌ನಲ್ಲಿ ಅಡ್ವಾನ್ಸಿಂಗ್ ಎಕ್ಸಲೆನ್ಸ್” ಎಂಬ ವಿಷಯದಡಿ ನಡೆದ ಈ ಕಾರ್ಯಕ್ರಮದಲ್ಲಿ ಆರೋಗ್ಯ ತಜ್ಞರು, ಶಿಕ್ಷಣ ವಿದ್ವಾಂಸರು ಮತ್ತು ತುರ್ತು ಆರೈಕೆ ವೃತ್ತಿಪರರು ಭಾಗವಹಿಸಿದರು.

ಕಾರ್ಯಕ್ರಮವನ್ನು ಕೆಎಂಸಿ ಡೀನ್ ಡಾ. ಅನಿಲ್ ಕೆ. ಭಟ್ ಉದ್ಘಾಟಿಸಿ, ಕಾರ್ಯಕ್ರಮದ ಅವಲೋಕನ ನೀಡಿದರು. AHA ಏಷ್ಯಾ ಪೆಸಿಫಿಕ್ ಉಪಾಧ್ಯಕ್ಷ ಜಾನ್ ಕಿಮ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಹೃದಯ ತುರ್ತು ಸಂದರ್ಭಗಳಲ್ಲಿ ಜೀವ ಉಳಿಸಲು ಜಾಗತಿಕ ಸಹಕಾರದ ಅಗತ್ಯತೆಯನ್ನು ಒತ್ತಿ ಹೇಳಿದರು.

AHA ಇಂಡಿಯಾ ಕನ್ಸಲ್ಟೆಂಟ್ ಪ್ರಾದೇಶಿಕ ನಿರ್ದೇಶಕ ಡಾ. ಸಚಿನ್ ವಿ. ಮೆನೋನ್ ಅವರು ಭಾರತೀಯ ಸಂಸ್ಥೆಗಳ ಬೆಂಬಲವನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಾಹೆ ಸಹ ಕುಲಪತಿ (ಆರೋಗ್ಯ ವಿಜ್ಞಾನ) ಡಾ. ಶರತ್ ಕುಮಾರ್ ರಾವ್ ಕೆ, ಸಿಪಿಆರ್ ತರಬೇತಿಯನ್ನು ಆಸ್ಪತ್ರೆಗಳನ್ನು ಮೀರಿ ಸಮುದಾಯ ಮಟ್ಟಕ್ಕೆ ವಿಸ್ತರಿಸುವ ಅಗತ್ಯತೆಯನ್ನು ಒತ್ತಿ ಹೇಳಿದರು. “ಸಿಪಿಆರ್ ವೈದ್ಯರಿಗೆ ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕನಿಗೂ ಅಗತ್ಯವಾದ ಕೌಶಲ್ಯ” ಎಂದು ಅವರು ಹೇಳಿದರು.

ಹೃದಯಾಘಾತದ ತುರ್ತು ಪರಿಸ್ಥಿತಿಯ ಮೊದಲ ಕೆಲವು ನಿಮಿಷಗಳಲ್ಲಿ ನೀಡುವ ತಕ್ಷಣದ ಪ್ರತಿಕ್ರಿಯೆ ಬದುಕುಳಿಯುವಿಕೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ ಎಂದು ಅವರು ಹೇಳಿದರು. ಈ ಹಿನ್ನೆಲೆಯಲ್ಲಿ ಶಾಲೆಗಳು, ಕೆಲಸದ ಸ್ಥಳಗಳು ಮತ್ತು ಸಾರ್ವಜನಿಕ ವಲಯಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ವಿಸ್ತರಿಸಲು ಒತ್ತು ನೀಡಲಾಗಿದೆ.

ಈ ಮಾರ್ಗಸೂಚಿಗಳು ಆಸ್ಪತ್ರೆಗಳು ಮತ್ತು ತರಬೇತಿ ಕೇಂದ್ರಗಳಲ್ಲಿ ಸಿಪಿಆರ್ ವಿಧಾನಗಳನ್ನು ಪ್ರಮಾಣೀಕರಿಸಲು, ತುರ್ತು ಹೃದಯ ಆರೈಕೆಯ ಗುಣಮಟ್ಟವನ್ನು ಸುಧಾರಿಸಲು ಮತ್ತು ಆರೋಗ್ಯ ಸೇವಾ ಪೂರೈಕೆದಾರರ ಸನ್ನದ್ಧತೆಯನ್ನು ಹೆಚ್ಚಿಸಲು ನೆರವಾಗಲಿವೆ ಎಂದು ನಿರೀಕ್ಷಿಸಲಾಗಿದೆ.

ಕೆಎಂಸಿ ತರಬೇತಿ ಕೇಂದ್ರದ ಸಂಯೋಜಕ ಡಾ. ವಿಮಲ್ ಕೃಷ್ಣನ್ ಎಸ್ ಧನ್ಯವಾದ ಅರ್ಪಿಸಿದರು. ಡಾ. ಸುಷ್ಮಾ ಪ್ರಭಾತ್ ಹಾಗೂ ಡಾ. ನಿಶಾ ಸಾರಾ ಮುಂಡಪ್ಪಲ್ಲಿಲ್ ಜಾಕೋಬ್ ಕಾರ್ಯಕ್ರಮವನ್ನು ನಿರೂಪಿಸಿದರು.

Previous Post

ಅಖಂಡ ಭಜನೋತ್ಸವದೊಂದಿಗೆ ಸೀತಾ ರಾಮ ಕಲ್ಯಾಣೋತ್ಸವ

Next Post

ಕೋಟಕ್ ಮಹೀಂದ್ರಾ ಪ್ರೈಮ್ ಲಿಮಿಟೆಡ್‌ ನ ನಾಯಕತ್ವ ಬದಲಾವಣೆ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಕೋಟಕ್ ಮಹೀಂದ್ರಾ ಪ್ರೈಮ್ ಲಿಮಿಟೆಡ್‌ ನ ನಾಯಕತ್ವ ಬದಲಾವಣೆ

ಕೋಟಕ್ ಮಹೀಂದ್ರಾ ಪ್ರೈಮ್ ಲಿಮಿಟೆಡ್‌ ನ ನಾಯಕತ್ವ ಬದಲಾವಣೆ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ನಿಟ್ಟೆ : ಹೋಟೆಲ್‌ನಲ್ಲಿ ಇಸ್ಪೀಟು ಜುಗಾರಿ ಅಡ್ಡೆ ಮೇಲೆ ಪೊಲೀಸ್ ದಾಳಿ: 6 ಮಂದಿ ಬಂಧನ, ನಗದು ಸೇರಿದಂತೆ ವಸ್ತುಗಳ ವಶ..!

ನಿಟ್ಟೆ : ಹೋಟೆಲ್‌ನಲ್ಲಿ ಇಸ್ಪೀಟು ಜುಗಾರಿ ಅಡ್ಡೆ ಮೇಲೆ ಪೊಲೀಸ್ ದಾಳಿ: 6 ಮಂದಿ ಬಂಧನ, ನಗದು ಸೇರಿದಂತೆ ವಸ್ತುಗಳ ವಶ..!

04/08/2026
ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ

ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ

04/08/2026
ಮಾಹೆಯಲ್ಲಿ ಅಂತಾರಾಷ್ಟ್ರೀಯ ‘ನೇಚರ್ ಕಾನ್ಫರೆನ್ಸ್’ : ಸಾಂಕ್ರಾಮಿಕ ರೋಗಗಳ ಸವಾಲು ಎದುರಿಸುವ ಕುರಿತು ಚರ್ಚೆ 

ಮಾಹೆಯಲ್ಲಿ ಅಂತಾರಾಷ್ಟ್ರೀಯ ‘ನೇಚರ್ ಕಾನ್ಫರೆನ್ಸ್’ : ಸಾಂಕ್ರಾಮಿಕ ರೋಗಗಳ ಸವಾಲು ಎದುರಿಸುವ ಕುರಿತು ಚರ್ಚೆ 

04/08/2026
ವಿದ್ಯಾವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯರ ಜೀವನಾಧಾರಿತ ‘ಇಂದು ಏನೆಗೆ ಗೋವಿಂದ’ ಬಯೋಪಿಕ್‌ಗೆ ಅದ್ದೂರಿ ಚಾಲನೆ

ವಿದ್ಯಾವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯರ ಜೀವನಾಧಾರಿತ ‘ಇಂದು ಏನೆಗೆ ಗೋವಿಂದ’ ಬಯೋಪಿಕ್‌ಗೆ ಅದ್ದೂರಿ ಚಾಲನೆ

04/08/2026

Recent News

ನಿಟ್ಟೆ : ಹೋಟೆಲ್‌ನಲ್ಲಿ ಇಸ್ಪೀಟು ಜುಗಾರಿ ಅಡ್ಡೆ ಮೇಲೆ ಪೊಲೀಸ್ ದಾಳಿ: 6 ಮಂದಿ ಬಂಧನ, ನಗದು ಸೇರಿದಂತೆ ವಸ್ತುಗಳ ವಶ..!

ನಿಟ್ಟೆ : ಹೋಟೆಲ್‌ನಲ್ಲಿ ಇಸ್ಪೀಟು ಜುಗಾರಿ ಅಡ್ಡೆ ಮೇಲೆ ಪೊಲೀಸ್ ದಾಳಿ: 6 ಮಂದಿ ಬಂಧನ, ನಗದು ಸೇರಿದಂತೆ ವಸ್ತುಗಳ ವಶ..!

04/08/2026
ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ

ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ

04/08/2026
ಮಾಹೆಯಲ್ಲಿ ಅಂತಾರಾಷ್ಟ್ರೀಯ ‘ನೇಚರ್ ಕಾನ್ಫರೆನ್ಸ್’ : ಸಾಂಕ್ರಾಮಿಕ ರೋಗಗಳ ಸವಾಲು ಎದುರಿಸುವ ಕುರಿತು ಚರ್ಚೆ 

ಮಾಹೆಯಲ್ಲಿ ಅಂತಾರಾಷ್ಟ್ರೀಯ ‘ನೇಚರ್ ಕಾನ್ಫರೆನ್ಸ್’ : ಸಾಂಕ್ರಾಮಿಕ ರೋಗಗಳ ಸವಾಲು ಎದುರಿಸುವ ಕುರಿತು ಚರ್ಚೆ 

04/08/2026
ವಿದ್ಯಾವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯರ ಜೀವನಾಧಾರಿತ ‘ಇಂದು ಏನೆಗೆ ಗೋವಿಂದ’ ಬಯೋಪಿಕ್‌ಗೆ ಅದ್ದೂರಿ ಚಾಲನೆ

ವಿದ್ಯಾವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯರ ಜೀವನಾಧಾರಿತ ‘ಇಂದು ಏನೆಗೆ ಗೋವಿಂದ’ ಬಯೋಪಿಕ್‌ಗೆ ಅದ್ದೂರಿ ಚಾಲನೆ

04/08/2026