ಮಾರ್ಚ್ 31:ಶ್ರೀ ರಾಮನವಮಿ ಮಹೋತ್ಸವದ ನಿಮಿತ್ತ ಪರಮ ಪೂಜ್ಯ ಪುತ್ತಿಗೆ ಶ್ರೀಪಾದರ ಮಾರ್ಗದರ್ಶನದಂತೆ ಲೋಕಕಲ್ಯಾಣಕ್ಕಾಗಿ ಅಮೆರಿಕಾದ ಹೂಸ್ಟನ್ ಮಹಾನಗರದ ಶ್ರೀ ಪುತ್ತಿಗೆ ಮಠದಲ್ಲಿ ಅಖಂಡ ಏಕಾಹ ಭಜನೋತ್ಸವ ಪ್ರಾರಂಭಗೊಂಡಿತು.
ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನಾಚಾರ್ಯ ರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಉದಯಾಸ್ತಮಾನವಾಗಿ ನಡೆಯುವ ಈ ಭಜನೋತ್ಸವದಲ್ಲಿ ತಂಡೋಪತಂಡವಾಗಿ ನೂರಾರು ಭಜನಾ ತಂಡಗಳು ಭಾಗವಹಿಸಿದ್ದು ಸಾಯಂ ಅನೇಕ ಭಕ್ತಜನರ ಸಮ್ಮುಖದಲ್ಲಿ ಪ್ರಧಾನ ಅರ್ಚಕರಾದ ಶ್ರೀ ರಘುರಾಮ್ ಭಟ್ ಅವರ ನೇತುತ್ವದಲ್ಲಿ ವೈಭವದ ಸೀತಾರಾಮಕಲ್ಯಾಣೋತ್ಸವವು ಜರಗುವುದರೊಂದಿಗೆ ಭಜನೋತ್ಸವವು ಸಮಾಪ್ತಿಗೊಂಡಿತು.






