ಕಾರ್ಕಳ: ಮಾರ್ಚ್ 24ರಂದು ಮಂಗಳವಾರ ವರ್ಷಂಪ್ರತಿ ನಡೆಯುವ ಗುತ್ತು ಪಂಜುರ್ಲಿ ಧರ್ಮನೇಮ ಹಾಗೂ ಮಾರಿ ಪೂಜೆ ವಿಜೃಂಭಣೆಯಿಂದ ನೆರವೇರಿತು. ಧಾರ್ಮಿಕ ಭಕ್ತಿ ಮತ್ತು ಸಾಂಪ್ರದಾಯಿಕ ವೈಭವದಿಂದ ಕೂಡಿದ ಈ ನೇಮೋತ್ಸವದಲ್ಲಿ ಭಕ್ತರ ಅಪಾರ ಸಂಖ್ಯೆ ಭಾಗವಹಿಸಿ ದೈವದ ಆಶೀರ್ವಾದ ಪಡೆದುಕೊಂಡರು.
ಈ ಸಂದರ್ಭದಲ್ಲಿ ಅರ್ಚಕರಾದ ಗೋಪಾಲ ಕೃಷ್ಣ ಭಟ್ ಅವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ಶಾಸ್ತ್ರೋಕ್ತವಾಗಿ ನಡೆಯಿತು. ಎಳ್ನಾಡು ಗುತ್ತು ಕಾಬೆಟ್ಟು ಸುಂದರ ಹೆಗ್ಡೆ ಗುರಿಕಾರರ ಸಹಕಾರದೊಂದಿಗೆ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು.
ನೇಮೋತ್ಸವದಲ್ಲಿ ಏಳ್ನಾಡು ಗುತ್ತು ಕುಟುಂಬಸ್ಥರು ಸೇರಿದಂತೆ ಊರ ಹತ್ತು ಸಮಸ್ತರು ಮತ್ತು ಗ್ರಾಮಸ್ಥರು ಭಾಗವಹಿಸಿ ದೈವಗಳ ಸಿರಿ-ಸಿಂಗಾರದ ದರ್ಶನ ಪಡೆದು ಭಕ್ತಿ ಭಾವದಿಂದ ಪಾಲ್ಗೊಂಡರು. ಈ ಹಬ್ಬವು ಗ್ರಾಮೀಣ ಸಂಸ್ಕೃತಿ ಮತ್ತು ಪರಂಪರೆಯ ಮಹತ್ವವನ್ನು ಮತ್ತೊಮ್ಮೆ ಪ್ರತಿಬಿಂಬಿಸಿತು.
ವರದಿ ಅರುಣ್ ಭಟ್ ಕಾರ್ಕಳ







