ಶಿರ್ವ: ಪಿಲಾರು ಗ್ರಾಮದ ಹಲಸಿನಕಟ್ಟೆ ನಿವಾಸಿ ಮಂಜುಳಾ ಆಚಾರ್ಯ (40) ಅವರ ಪತಿ ಗಿರೀಶ್ ಆಚಾರ್ಯ ಅವರು ಕಾಣೆಯಾಗಿರುವ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಿರೀಶ್ ಆಚಾರ್ಯ ಅವರು ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಮಾರ್ಚ್ 4, 2026ರಂದು ಊರಿಗೆ ಆಗಮಿಸಿದ್ದರು. ಬಳಿಕ ಕುಟುಂಬದೊಂದಿಗೆ ಸಾಮಾನ್ಯವಾಗಿ ಇದ್ದ ಅವರು, ಮಾರ್ಚ್ 7ರಂದು ಸಂಜೆ ಸುಮಾರು 7:15 ಗಂಟೆಯ ಸುಮಾರಿಗೆ ಗುಜರಾತ್ನಲ್ಲಿರುವ ಕಂಪೆನಿಗೆ ತೆರಳುವುದಾಗಿ ತಿಳಿಸಿ, ಮನೆಯಿಂದ ಹೊರಟಿದ್ದಾರೆ. ಈ ವೇಳೆ ಪತ್ನಿಯಿಂದ ಚಿನ್ನದ ಸರವನ್ನು ಪಡೆದುಕೊಂಡು ಹೋಗಿರುವುದಾಗಿ ತಿಳಿದುಬಂದಿದೆ.
ರಾತ್ರಿ ಸುಮಾರು 8:00 ಗಂಟೆಗೆ ಪತ್ನಿ ಕರೆ ಮಾಡಿದಾಗ ತಾವು ಮಂಗಳೂರು ತಲುಪಿರುವುದಾಗಿ ತಿಳಿಸಿದ್ದಾರೆ. ನಂತರ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಸಂಪರ್ಕ ಸಾಧ್ಯವಾಗಿಲ್ಲ. ಇದರಿಂದ ಆತಂಕಗೊಂಡ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಾಣೆಯಾದವರ ವಿವರ:
ಹೆಸರು: ಗಿರೀಶ್ ಆಚಾರ್ಯ
ಮೈಬಣ್ಣ: ಬಿಳಿ
ಶರೀರ: ದೃಢ
ಎತ್ತರ: 5 ಅಡಿ 10 ಇಂಚು
ಉಡುಪು: ಪಿಂಕ್ ಬಣ್ಣದ ಅರ್ಧ ತೋಳಿನ ಶರ್ಟ್, ಕಪ್ಪು ಪ್ಯಾಂಟ್
ಮಾತನಾಡುವ ಭಾಷೆಗಳು: ಕನ್ನಡ, ಹಿಂದಿ, ತುಳು, ತಮಿಳು
ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಗಂಡಸು ಕಾಣೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.







