ಉಡುಪಿ, ಜು. 27: ಉಡುಪಿಯ ಕುಂಜಿಬೆಟ್ಟುವಿನ ಹಿಮಾಲಯ ಪ್ರೆಸ್ಟೀಜ್ನಲ್ಲಿ ‘ದೊನ್ನೆ ಬಿರಿಯಾನಿ ಗ್ರ್ಯಾಂಡ್’ ರೆಸ್ಟೋರೆಂಟ್ ಇಂದು ಅಧಿಕೃತವಾಗಿ ಭವ್ಯವಾಗಿ ಉದ್ಘಾಟನೆಯಾಯಿತು.


‘Naati Ingredients, Naati Flavour’ ಪರಿಕಲ್ಪನೆಯೊಂದಿಗೆ ಆರಂಭಗೊಂಡಿರುವ ಈ ಹೊಸ ರೆಸ್ಟೋರೆಂಟ್ನಲ್ಲಿ ನಾಟಿ ಸೊಗಡಿನ ರುಚಿಕರ ಬಿರಿಯಾನಿಯನ್ನು ಗ್ರಾಹಕರಿಗೆ ಪರಿಚಯಿಸಲಾಗುತ್ತಿದೆ.
ಉದ್ಘಾಟನಾ ಅಂಗವಾಗಿ ಗ್ರಾಹಕರಿಗಾಗಿ ವಿಶೇಷ ‘2 ಬಿರಿಯಾನಿ ಖರೀದಿಸಿದರೆ 1 ಬಿರಿಯಾನಿ ಉಚಿತ’ (Buy 2 Get 1 Free) ಆಫರ್ ಘೋಷಿಸಲಾಗಿದೆ. ಮೊದಲ ದಿನವೇ ಹಲವಾರು ಆಹಾರ ಪ್ರಿಯರು ಭೇಟಿ ನೀಡಿ ಬಿರಿಯಾನಿಯ ರುಚಿಯನ್ನು ಸವಿದರು.

ಕಾರ್ಯಕ್ರಮ ದಲ್ಲಿ ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ, ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ, ಕಾರ್ಕಳ ಶಾಸಕರಾದ ಸುನಿಲ್ ಕುಮಾರ್, ಮತ್ತು ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಹಾಗೂ ಹಲವು ಗಣ್ಯರು ಭಾಗವಹಿಸಿ ಶುಭ ಹಾರೈಸಿದರು
ಕುಂಜಿಬೆಟ್ಟು ಹಾಗೂ ಸುತ್ತಮುತ್ತಲಿನ ಪ್ರದೇಶದ ಆಹಾರ ಪ್ರಿಯರಿಗೆ ಈ ಹೊಸ ರೆಸ್ಟೋರೆಂಟ್ ಮತ್ತೊಂದು ಉತ್ತಮ ಆಯ್ಕೆಯಾಗಿ ಹೊರಹೊಮ್ಮಿದೆ.







