ಉಡುಪಿ: ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಪಿಂಚಣಿದಾರರ ಉಡುಪಿ ಜಿಲ್ಲಾ 2 ನೇ ಸಮಾವೇಶ ಇಂದು ಉಡುಪಿಯ ಲಿಕೋ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.

ಸಮಾವೇಶ ಉದ್ಘಾಟಿಸಿ ಉಡುಪಿ ಜಿಲ್ಲಾ ಕಟ್ಟಡ ಸಂಘದ ಪ್ರಧಾನ ಕಾರ್ಯದರ್ಶಿ ಮಾತನಾಡಿದರು. ಉಡುಪಿಯಲ್ಲಿ 500 ಕ್ಕೂ ಮಿಕ್ಕಿ ಕಟ್ಟಡ ಪಿಂಚಣಿದಾರರು ಇದ್ದರೆ ಇವತ್ತಿನ ಬೆಲೆ ಏರಿಕೆ ಆಧಾರದಲ್ಲಿ ಪಿಂಚಣಿದಾರರಿಗೆ ಕನಿಷ್ಟ ತಿಂಗಳ ಇವರ 10 ಸಾವಿರ ಪಿಂಚಣಿ ಸಿಗಬೇಕು. ರಾಜ್ಯದಲ್ಲಿ ಸಾವಿರಾರು ಪಿಂಚಣಿದಾರರು ಇದ್ದಾರೆ ರಾಜ್ಯದ ಕಲ್ಯಾಣ ಮಂಡಳಿಯಲ್ಲಿ ಸಾವಿರಾರು ಕೋಟಿ ಹಣ ಇದೆ. ಈ ಹಣ ದುರುಪಯೋಗ ಆಗದೆ ಕಟ್ಟಡ ಕಾರ್ಮಿಕರಿಗೆ ಸಮರ್ಪಕವಾಗಿ ವಿತರಣೆ ಹಾಗಬೇಕು.ಎಲ್ಲಾ ಪಿಂಚಣಿದಾರರಿಗೆ ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸಬೇಕು ಮತ್ತು ಕಾರ್ಮಿಕ ಮರಣ ಹೊಂದಿದಲ್ಲಿ ಅಂತ್ಯಸಂಸ್ಕಾರದ ವೆಚ್ಚ ನೀಡಬೇಕು ಎಂದರು ಸಮಾವೇಶದಲ್ಲಿ ಉಡುಪಿ ಜಿಲ್ಲಾ ಪಿಂಚಣಿದಾರರ ಸಂಘದ ಸಂಚಾಲಕರಾದ ರಾಮ ಕಾರ್ಕಡ, ಸಹಾ ಸಂಚಾಲಕರಾದ ರಾಮ ಸಲ್ಯಾನ್ ಕಾಪು, ಸದಸ್ಯರಾದ ಗಣೇಶ್ ನಾಯಕ್ ,ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕ ಸಂಘದ ಅಧ್ಯಕ್ಷರಾದ ಸುಭಾಷ್ ನಾಯಕ್ ಉಪಾಧ್ಯಕ್ಷ ರಾದ ದಯಾನಂದ ಕೊಟ್ಯಾನ್, ಸೈಯಾದ್ ಅಲಿ, ಕೋಶಾಧಿಕಾರಿ ಯಾದ ವಾಮನ ಪೂಜಾರಿ , ಸಿಐಟಿಯು ಉಡುಪಿ ವಲಯ ಸಂಚಾಲಕರಾದ ಕವಿರಾಜ್, ಎಸ್.ಕಾಂಚನ್, ಉಪಸ್ಥಿತರಿದ್ದರು .







