ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್(CITU)ಉಡುಪಿ ವಲಯ ಸಮಿತಿ ನೇತ್ರತ್ವದಲ್ಲಿ ಇಂದು ವಿದ್ಯುತ್ ಖಾಸಗೀಕರಣ ವಿರೋಧಿಸಿ ಹಾಗೂ ಟಾಟಾ ಕಂಪನಿಗೆ ವಿದ್ಯುತ್ ವಿತರಣಾ ಲೈಸನ್ಸ್ ನೀಡಬಾರದು ಎಂದು ಆಕ್ಷೇಪಣೆ ಪತ್ರವನ್ನು ಉಡುಪಿ ಮೆಸ್ಕಾಂ ಅಧಿಕಾರಿ A.E ಮೂಲಕ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಕಾರ್ಯದರ್ಶಿ ಗಳಿಗೆ ಸಿಐಟಿಯು ಉಡುಪಿ ವಲಯ ಸಮಿತಿ, ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ,ಕಾರ್ಕಳ ತಾಲೂಕು ಬೀಡಿ ಕಾರ್ಮಿಕರ ಸಂಘ,ಉಡುಪಿ ಜಿಲ್ಲಾ ಜನರಲ್ ವರ್ಕ್ಸ್ ಯೂನಿಯನ್, ಬೀಡಿ ಎಂಡ್ ಟೋಬ್ಯಾಕೊ ಲೇಬರ್ ಯೂನಿಯನ್ ನಿಂದ ಮನವಿಗಳನ್ನು ನೀಡಲಾಯಿತು.
ನೀಯೋಗದಲ್ಲಿ ಸಿಐಟಿಯು ಉಡುಪಿ ವಲಯ ಸಂಚಾಲಕರಾದ ಕವಿರಾಜ್. ಎಸ್.ಕಾಂಚನ್,ಉಡುಪಿ ಜಿಲ್ಲಾ ಕಟ್ಟಡ ಸಂಘದ ಅಧ್ಯಕ್ಷರಾದ ಸುಭಾಷ್ ಚಂದ್ರ ನಾಯಕ್,ಪ್ರಧಾನ ಕಾರ್ಯದರ್ಶಿ ಶಶಿಧರ್ ಗೊಲ್ಲ, ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಅಧ್ಯಕ್ಷ ರಾದ ಸಂಜೀವ ಬಲ್ಕೂರು,ಹಾಗೂ ಸಂಘಗಳ ಮುಖಂಡರಾದ ಉಮೇಶ್ ಕುಂದರ್, ಸುನೀತಾ ಶೆಟ್ಟಿ, ನಳಿನಿ.ಎಸ್, ಸರೋಜ ಎಸ್,ಸಾರಿಕಾ,ಶಾರದ,ಶರ್ಮಿಳ,ರಂಗನಾಥ,ಸೀತಾರಾಮ್ ನಾಯಕ್ ರತ್ನಾಕರ್ ಶೆಟ್ಟಿಗಾರ್, ಜಯನಾಯಕ್,ಉಪಸ್ಥಿತರಿದ್ದರು






