ಕಾರ್ಕಳ : ಕಾರ್ಕಳ ನಿಟ್ಟೆ ಬ್ರಹ್ಮಕುಮಾರಿಸ್ ವೃ0ದವನ ಧ್ಯಾನ ಕೇಂದ್ರದಲ್ಲಿ ಯೋಗ ದಿನಾಚರಣೆ ಸಮಾರಂಭ ನಡೆಯಿತು. ರಾಜಯೋಗ ಧ್ಯಾನ ವನ್ನು ಬಿ. ಕೆ. ಯಶೋದ ಅಭ್ಯಾಸ ಮಾಡಿಸಿದರು,
ರಾಜಯೋಗದ ಅಭ್ಯಾಸ ದಿಂದ ಆಗುವ ಪ್ರಯೋಜನ ವನ್ನು ಬಿ. ಕೆ. ಮನೋಹರ್ ತಿಳಿಸಿದರು. ಯೋಗ ಶಿಕ್ಷಕಿ ನಾಜಿಯಾ ಎಲ್ಲರಿಗೂ ಯೋಗ ಅಭ್ಯಾಸ ಮಾಡಿಸಿದರು.
ಸಿದ್ದಕಟ್ಟೆ ರಾಘವೇಂದ್ರ ರಾವ್, ನಿವೃತ ಶಿಕ್ಷಕರು, ನಿಟ್ಟೆ ಸ್ವ ಸಹಾಯ ಸಂಘ ದ ಅಧ್ಯಕ್ಷೆ ರತ್ನ ಶೆಟ್ಟಿ, ಇನ್ನಿತರ ಗಣ್ಯರು ಉಪಸ್ಥಿರಿದ್ದರು. ಯೋಗ ಶಿಕ್ಷೆಕಿ ನಾಜಿಯಾ, ಪ್ರಮೀಳಾ, ರಶ್ಮಿ, ಬಬೀತಾ ಇವರನ್ನು ಸನ್ಮಾನಿಸಲಾಯಿತು. ಬಿ. ಕೆ. ಶಶಿಕಾಂತ್ ಸಂಸ್ಥೆಯ ಪರಿಚಯ ನೀಡಿದರು. ಬಿ.ಕೆ. ಶಂಕರಣ್ಣ ಸ್ವಾಗತಿಸಿ ದರು. ಬಿ. ಕೆ. ಖುಷಿ ಧನ್ಯವಾದ ಅರ್ಪಿಸಿದರು.








