ಕುಂದಾಪುರ : ಕುಂದಾಪುರ-ಸಿದ್ದಾಪುರ SH-52 ರಸ್ತೆಯಲ್ಲಿ ಶ್ರೀ ಮಾಸ್ತಿ ಯಕ್ಷಿ ಅಮ್ಮನವರ ಸನ್ನಿಧಿ ದೇವಸ್ಥಾನದ ಎದುರು ಎರಡು ಮೋಟಾರ್ ಸೈಕಲ್ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಮೇ 24ರಂದು ರಾತ್ರಿ ನಡೆದಿದೆ.
ಉಳ್ಳೂರು ಕಡೆಯಿಂದ ಮೋಟಾರ್ ಸೈಕಲ್ ಅನ್ನು ರಾಧಾಕೃಷ್ಣ ಅವರು ಸವಾರಿ ಮಾಡಿಕೊಂಡು ಬರುತ್ತಿದ್ದ ವೇಳೆ, ದೇವಸ್ಥಾನದ ಎದುರು ತಲುಪುವಷ್ಟರಲ್ಲಿ ಬೈಕ್ ಅನ್ನು ಅಜಾಗರೂಕತೆಯಿಂದ ಬಲಭಾಗಕ್ಕೆ ತಿರುಗಿಸಿದ್ದಾರೆ ಎನ್ನಲಾಗಿದೆ. ಇದೇ ಸಮಯದಲ್ಲಿ ಬಸ್ರೂರು ಕಡೆಯಿಂದ ಕುಂದಾಪುರದತ್ತ ಮೋಟಾರ್ ಸೈಕಲ್ನಲ್ಲಿ ಕಾರ್ತಿಕ್ ಅತೀವೇಗವಾಗಿ ಬರುತ್ತಿದ್ದ ವೇಳೆ ಎರಡೂ ಬೈಕ್ಗಳು ಮುಖಾಮುಖಿ ಡಿಕ್ಕಿಯಾಗಿವೆ.
ಡಿಕ್ಕಿಯ ಪರಿಣಾಮ ಇಬ್ಬರು ಸವಾರರೂ ಬೈಕ್ಗಳ ಸಮೇತ ರಸ್ತೆಗೆ ಬಿದ್ದಿದ್ದಾರೆ. ರಾಧಾಕೃಷ್ಣ ಅವರಿಗೆ ತಲೆಗೆ ತೀವ್ರ ರಕ್ತಗಾಯವಾಗಿದ್ದು, ಮಾತನಾಡುವ ಸ್ಥಿತಿಯಲ್ಲಿರಲಿಲ್ಲ ಎಂದು ತಿಳಿದುಬಂದಿದೆ. ಕಾರ್ತಿಕ್ ಅವರಿಗೆ ಬಲಕಾಲಿಗೆ ತರಚಿದ ಗಾಯಗಳಾಗಿವೆ.
ಗಾಯಾಳುಗಳನ್ನು ಸತೀಶ ಆಚಾರ್ ಅವರು ಆಂಬ್ಯುಲೆನ್ಸ್ ಮೂಲಕ ಚಿನ್ಮಯಿ ಹಾಸ್ಪಿಟಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ರಾಧಾಕೃಷ್ಣ ಅವರನ್ನು ಹೆಚ್ಚಿನ ಚಿಕಿತ್ಸೆಗೆ KMC ಹಾಸ್ಪಿಟಲ್ಗೆ ಸಂಬಂಧಿಕರು ಕರೆದೊಯ್ದಿದ್ದಾರೆ.
ಈ ಕುರಿತು ಕುಂದಾಪುರ ಟ್ರಾಫಿಕ್ ಪೊಲೀಸ್ ಸ್ಟೇಷನ್ನ ಲ್ಲಿ ಪ್ರಕರಣ ದಾಖಲಾಗಿದೆ.







