ಕುಂದಾಪುರ: ಅಂಕದಕಟ್ಟೆ ಗೋಪಾಲಾಡಿ ನಿವಾಸಿ ರಮೇಶ್ (35) ಅವರ ದೊಡ್ಡಪ್ಪನ ಮಗ ರಾಘವೇಂದ್ರ (41) ಅವರು ಬಿಪಿ ಸಮಸ್ಯೆ ಹಾಗೂ ದೀರ್ಘಕಾಲದ ನಿದ್ರಾಹೀನತೆಯಿಂದ ಬಳಲುತ್ತಿದ್ದು, ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ದಿನಾಂಕ 22-05-2026ರಂದು ಬೆಳಿಗ್ಗೆ 08:30ರಿಂದ 08:45ರ ನಡುವಿನ ಅವಧಿಯಲ್ಲಿ ಹಂಗಳೂರು ಗ್ರಾಮದ ನೇರಂಬಳ್ಳಿ ಗೋವೆಬೆಟ್ಟು ಪ್ರದೇಶದಲ್ಲಿರುವ ತಮ್ಮ ಹಳೆಯ ಮನೆಯಲ್ಲಿ ಮನೆಯ ಮಾಡಿನ ಪಖಾಸಿಗೆ ನೈಲಾನ್ ಹಗ್ಗ ಕಟ್ಟಿ, ಅದರ ಇನ್ನೊಂದು ತುದಿಯನ್ನು ಕುತ್ತಿಗೆಗೆ ಬಿಗಿದುಕೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.







