ಮಣಿಪಾಲ: ಮೇ 22: ಕ್ಷುಲ್ಲಕ ವಿಚಾರಕ್ಕೆ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಘಟನೆ ಮಣಿಪಾಲ ಜ್ಞಾನಸುಧಾ ಕಾಲೇಜು ಸಮೀಪ ನಡೆದಿದೆ.
ಯಕ್ಷತ್ ಕುಮಾರ್ (20) ಅವರು ತಮ್ಮ ಗೆಳೆಯ ಶ್ರೀಧರ ಅವರ ಮೋಟಾರ್ ಸೈಕಲ್ನಲ್ಲಿ ಸಹಸವಾರನಾಗಿ ಇಂದ್ರಾಳಿಯಿಂದ ಇಂಡಸ್ಟ್ರಿಯಲ್ ಏರಿಯಾ ಕಡೆಗೆ ತೆರಳುತ್ತಿದ್ದರು. ಮಧ್ಯಾಹ್ನ 2:05ರ ಸುಮಾರಿಗೆ ಜ್ಞಾನಸುಧಾ ಕಾಲೇಜು ಬಳಿ ಹಿಂಬದಿಯಿಂದ ನಾಯಿಯೊಂದು ಅಟ್ಟಿಸಿಕೊಂಡು ಬರುತ್ತಿದ್ದುದನ್ನು ಗಮನಿಸುತ್ತಾ ಸಾಗುತ್ತಿದ್ದ ವೇಳೆ, ಸೈಕಲ್ನಲ್ಲಿ ಹಿಂಬದಿಯಿಂದ ಬಂದ ವ್ಯಕ್ತಿಯೊಬ್ಬ ನಂಬರ್ ಪ್ಲೇಟ್ ಇಲ್ಲದ ಬೈಕ್ನಲ್ಲಿ ಬಂದು ದಾರಿ ಅಡ್ಡಗಟ್ಟಿದ್ದಾನೆ ಎನ್ನಲಾಗಿದೆ.
ನಂತರ “ನನ್ನನ್ನು ಯಾಕೆ ಗುರಾಯಿಸಿ ನೋಡುತ್ತಿದ್ದೀಯಾ” ಎಂದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಕೆನ್ನೆಗೆ ಹೊಡೆದು, ಚೂರಿಯಿಂದ ಚುಚ್ಚಿ ಬಿಡುವುದಾಗಿ ಜೀವ ಬೆದರಿಕೆ ಹಾಕಿ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಯಕ್ಷತ್ ಕುಮಾರ್ ನೀಡಿದ ದೂರಿನ ಮೇರೆಗೆ ಮಣಿಪಾಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.







