ಬ್ರಹ್ಮಾವರ: ಬ್ರಹ್ಮಾವರ ಅಂಚೆ ಕಚೇರಿಯಲ್ಲಿದ್ದು 36 ವರ್ಷ ವಿವಿಧ ಅಂಚೆ ಕಚೇರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಚಂದ್ರಶೇಖರ್ ಶೆಟ್ಟಿಗಾರ್ ಮತ್ತು ಪತ್ನಿ ವಿಜಯಲಕ್ಷ್ಮೀ ಇವರನ್ನು ಬ್ರಹ್ಮಾವರ ಅಂಚೆ ಮನೋರಂಜನಾ ಕೂಟದ ವತಿಯಿಂದಪೋಸ್ಟ್ ಮಾಸ್ಟರ್ ಗಾಯತ್ರೀ ರಾವ್ ಅಧ್ಯಕ್ಷತೆಯಲ್ಲಿ ಬ್ರಹ್ಮಾವರ ಅಂಚೆಕಛೇರಿಯಲ್ಲಿ ಗುರುವಾರ ಸನ್ಮಾನಿಸಿ ಬೀಳ್ಕೊಡಲಾಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ವಿಭಾಗದ ಅಂಚೆ ಅಧೀಕ್ಷಕ ರಮೇಶ್ ಪ್ರಭು, ನಿವೃತ್ತ ಪೋಸ್ಟ್ ಮಾಸ್ಟರ್ ಎನ್ ದಯಾನಂದ್ ಉಪಸ್ಥಿತರಿದ್ದರು.ಬ್ರಹ್ಮಾವರ ಅಂಚೆ ಕಚೇರಿಯ ಮತ್ತು ಶಾಖಾ ಅಂಚೆ ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ವರ್ಗಾವಣೆಗೊಳ್ಳಲಿರುವ ಉಡುಪಿ ಉತ್ತರ ವಿಭಾಗದ ಅಂಚೆ ನಿರೀಕ್ಷರಾದಶಂಕರ್ ಲಮಾಣಿ ಇವರನ್ನು ಸನ್ಮಾನಿಸಲಾಯಿತು. ಅಂಚೆ ಕಚೇರಿಯ ಮಹಿಳಾ ಅಂಚೆಪೇದೆ ಸುಮಿತ್ರಾ ಎಸ್ ಬಿ ಕಾರ್ಯಕ್ರಮ ನಿರೂಪಿಸಿದರು,






