Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 20 ಗುರುವಾರ )

Dhrishya News by Dhrishya News
20/05/2026
in ಸುದ್ದಿಗಳು
0
ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 20 ಗುರುವಾರ )
0
SHARES
50
VIEWS
Share on FacebookShare on Twitter

ಉಡುಪಿ: ಮೇ 20:ಇಂದಿನ ದಿನವು ದ್ವಾದಶ ರಾಶಿಗಳವರಿಗೂ ವಿಭಿನ್ನ ಫಲಿತಾಂಶಗಳನ್ನು ತರಲಿದೆ. ಗ್ರಹಗಳ ಚಲನೆ ಮತ್ತು ನಕ್ಷತ್ರಗಳ ಪ್ರಭಾವದ ಹಿನ್ನೆಲೆಯಲ್ಲಿ, ಕೆಲವರಿಗೆ ಯಶಸ್ಸಿನ ಸೂಚನೆಗಳು ಕಂಡುಬಂದರೆ, ಇನ್ನೂ ಕೆಲವರಿಗೆ ಎಚ್ಚರಿಕೆ ಅಗತ್ಯವಿದೆ. ನಿಮ್ಮ ರಾಶಿಗೆ ಇಂದು ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ ಮತ್ತು ದಿನವನ್ನು ಉತ್ತಮವಾಗಿ ರೂಪಿಸಿಕೊಳ್ಳಿ.

*01,🐏ಮೇಷರಾಶಿ🐏*
🦢,ಈರಾಶಿಯವರಿಗೆಯಾವುದೂ ಕಷ್ಟವಲ್ಲ. ಆದರೆ ಯಾಕೋ ತಿಳಿದಷ್ಟು ವೇಗದಿಂದ ಮುಂದೆ ಸಾಗಲಾರದು ಎಂಬ ತಳಮಳ ನಿಮ್ಮನ್ನು ಬಾಧಿಸುವುದು. ಆದರೆ ಪೂರ್ವ ತಯಾರಿ ಸೂಕ್ತವಾಗಿ ಮಾಡಿಕೊಂಡಲ್ಲಿ ನಿಶ್ಚಿತವಾದ ಗುರಿಯನ್ನು ತಲುಪುವಿರಿ. ಆದಾಯ ಖರ್ಚನ್ನು ಸೂಕ್ಷ್ಮವಾಗಿ ಪರಿಶೀಲಿಸಿ,
ಗಮನಿಸಿ:-ಕೆಲವು ಘಟನೆಗಳು ನಿಮ್ಮನ್ನಿಂದು ಭಾವಪರವಶರನ್ನಾಗಿಸುವವು,
ಪರಿಹಾರ:- ಇಂದು ಸಂಜೆ ಶಿವಾಲಯಕ್ಕೆ ಹೋಗಿ


*02,🐂ವೃಷಭರಾಶಿ🐂*
🦢,ಈರಾಶಿಯವರಿಗೆ
ಕೋರ್ಟು ಕಚೇರಿಯ ಕೆಲಸಗಳು ಸರಾಗವಾಗಿ ನಡೆಯುವವು. ತೀರ್ಪು ಕೂಡಾ ನಿಮ್ಮ ಪರವಾಗಿ ಬರುವುದರಿಂದ ಮನಸ್ಸಿಗೆ ಸಂತಸವಾಗುವುದು. ಇದರಿಂದ ಒಳಿತನ್ನು ಕಾಣುವಿರಿ. ಪ್ರಯಾಣದಲ್ಲಿ ಎಚ್ಚರ ಇರಲಿ. ಹಣ್ಣು-ಐಸ್ ಕ್ರೀಮ್-ಹೂವು-ನೀರಿಗೆ ಸಂಬಂಧಿಸಿದ ವ್ಯಾಪಾರಿಗಳಿಗೆ ಇಂದು ವಿಶೇಷ ಲಾಭವಾಗುವುದು,
ಗಮನಿಸಿ:- ಇಂದು ಹಣದ ವಿಷಯದಲ್ಲಿ ಜಾಗರೂಕರಾಗಿರಿ,
ಪರಿಹಾರ:-ಬಡವರಿಗೆ ಸಹಾಯ ಮಾಡಿ,


*03,👥ಮಿಥುನ ರಾಶಿ👥*
🦢, ಈ ರಾಶಿಯವರಿಗೆ ಇಂದು ಅವಸರದ ಕೆಲಸಗಳು ಅವ್ಯವಸ್ಥೆಯನ್ನು ಉಂಟು ಮಾಡುವುದು. ಯಾವಾಗಲೂ ಕ್ರಮಬದ್ಧವಾಗಿ ಯೋಚಿಸುವ ನೀವು ಇಂದೇಕೋ ತಾಳ್ಮೆಯನ್ನು ಕಳೆದು ಕೊಳ್ಳುವಿರಿ. ತಂದೆಯವರಿಗೆ ಅಗತ್ಯವಿದ್ದಲ್ಲಿ ಸಹಾಯ ಮಾಡಿ, ನಿಮ್ಮ ಕೈಕೆಳಗೆ ಕೆಲಸ ಮಾಡುವವರು ಇಂದು ನಿಮ್ಮ ಆಜ್ಞೆಯನ್ನು ತಿರಸ್ಕರಿಸಬಹುದು,
ಗಮನಿಸಿ:- ಇಂದು ನಿಮ್ಮ ಸಹೋದ್ಯೋಗಿಗಳ ಬಗ್ಗೆ ಜಾಗರೂಕರಾಗಿರಿ,
ಪರಿಹಾರ:- ಗ್ರಾಮ ದೇವತೆಗೆ ನಿಂಬೆಹಣ್ಣಿನ ದೀಪ ಹಚ್ಚಿ,


*04,🦀ಕಟಕ ರಾಶಿ🦀*
🦢, ಈ ರಾಶಿಯವರು ಇಂದು ಕನಸುಗಳನ್ನು ಕಾಣುವಿರಿ. ಆದರೆ ನನಸಾಗುವ ಘಟ್ಟ ತಲುಪಿದಾಗ ನಿಮಗೆ ನಿರಾಶೆ ಕಾಣುವುದು. ನಿಮಗೆ ಅನುಭವ ಇರುವ ಕೆಲಸವನ್ನು ಹುಡುಕಿ ಮಾಡಿದಲ್ಲಿ ಯಶಸ್ಸನ್ನು ಹೊಂದಲು ಸಹಕಾರಿಯಾಗುವುದು. ಗಟ್ಟಿಯಾದ ಮನೋಸ್ಥಿತಿ ರೂಪಿಸಿಕೊಳ್ಳಿ,ಖರೀದಿ-ಮಾರಾಟ ಮತ್ತು ಸಾಲಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಕೈಗೊಳ್ಳುವಾಗ ಜಾಗೂರುಕರಾಗಿರಿ,
ಗಮನಿಸಿ:-ಸಂಬಂಧಿಕರಿಂದ ಜಾಗರೂಕರಾಗಿರಿ,
ಪರಿಹಾರ:-ನಿಮ್ಮ ಮನೆದೇವರ ಪ್ರಾರ್ಥನೆ ಮಾಡಿ,


*05,🦁ಸಿಂಹ ರಾಶಿ🦁*
🦢, ಈ ರಾಶಿಯವರು ಇಂದು ಕೆಲವು ಅಪರೂಪದ ಶಕ್ತಿ, ಸಾಹಸ, ಪ್ರತಿಭೆಗಳನ್ನು ಹೊಂದಿರುವುದರಿಂದ ಅವೆಲ್ಲವೂ ನಿಮ್ಮ ಉಪಯೋಗಕ್ಕೆ ಬರುತ್ತವೆ, ಇದರಿಂದ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲರಾಗುವಿರಿ. ಮನಸ್ತಾಪ ಮತ್ತು ಜಗಳಗಳಿಗೆ ಈ ದಿನ ಅವಕಾಶ ಕೊಡದಿರಿ, ನಿಮ್ಮ ಮೇಲೆ ಸುಳ್ಳು ಆಪಾದನೆಗಳು ಬರುವ ಸಾಧ್ಯತೆ ಇದೆ,
ಗಮನಿಸಿ:- ಆಹಾರ ಸೇವನೆಯಲ್ಲಿ ಜಾಗೂರುಕತೆ ವಹಿಸಿ,
ಪರಿಹಾರ:-ಶ್ರೀ ಆಂಜನೇಯ ಸ್ವಾಮಿಯ ಮಂತ್ರವನ್ನು ಪಠಿಸಿ,


*06,👩‍🦳ಕನ್ಯಾ ರಾಶಿ👩‍🦳*
🦢, ಈ ರಾಶಿಯವರು ಶ್ರಮಪಟ್ಟರೆ ಕೆಲವು ಸಿದ್ಧಿಗಳನ್ನು ಸಂಪಾದಿಸಿಕೊಳ್ಳಲು ಸಾಧ್ಯವಿದೆ ಈಗ ನಿಮಗೆ ದೈವಾನುಕೂಲವಿದೆ. ನಿಮ್ಮ ಮಾತುಗಳನ್ನು ನಿಯಂತ್ರಿಸಿಕೊಳ್ಳಿ. ಸಂಕಲ್ಪಿತ ಗುರಿ ಈಡೇರಿಸಿಕೊಳ್ಳುವವರೆಗೂ ನಿಮ್ಮ ಯೋಜನೆಗಳನ್ನು ಅನ್ಯರ ಬಳಿಯಲ್ಲಿ ಬಹಿರಂಗಗೊಳಿಸದಿರಿ,
ಗಮನಿಸಿ:- ಇಂದು ನಿಮ್ಮ ಬಂಧು ಮಿತ್ರರೊಂದಿಗೆ ಸಂಬಂಧ ಉತ್ತಮಗೊಳ್ಳುವುದು,
ಪರಿಹಾರ:- ಶಿವನ ನಾಮಸ್ಮರಣೆ ಮಾಡಿ,


*07,⚖️ತುಲಾ ರಾಶಿ⚖️*
🦢, ಈ ರಾಶಿಯವರಿಗೆ ಇಂದು ಶತ್ರುಗಳು ನಿಮ್ಮ ಯೋಜನೆ ತಿಳಿಯಲು ಪ್ರಯತ್ನಿಸುವರು. ಹಾಗಾಗಿ ನೀವು ನಿಮ್ಮ ಮನೆಯ ಸದಸ್ಯರೊಂದಿಗೆ ಭಿನ್ನಾಭಿಪ್ರಾಯವನ್ನು ತಂದುಕೊಳ್ಳದಿರಿ. ಮತ್ತು ಮನೆಯ ಗುಟ್ಟನ್ನು ಹೊರಗೆ ಹಾಕದಿರಿ. ಕೆಲಸ ಮಾಡುವಾಗ ಗಾಯಗೊಳ್ಳುವ ಸಂಭವವಿದೆ, ಗಮನಿಸಿ:-ಇಂದು ನಿಮ್ಮ ಹಣ ಕಾಸಿನ ವಿಷಯದಲ್ಲಿ ಜಾಗ್ರತೆ ವಹಿಸಿ,
ಪರಿಹಾರ:- ಇಂದು ಸಂಜೆ ನವಗ್ರಹ ದೇವಸ್ಥಾನಕ್ಕೆ ಭೇಟಿ ಕೊಡಿ,
*08,🦂ವೃಶ್ಚಿಕ ರಾಶಿ🦂*
🦢, ಈ ರಾಶಿಯವರು ಇಂದು ಮನಸ್ಸನ್ನು ಗೊಂದಲ ಮಾಡಿಕೊಂಡು ಕಾರ್ಯ ಪ್ರವೃತ್ತರಾದಲ್ಲಿ ಯಶಸ್ಸು ದೊರೆಯುವುದು ನಿಧಾನವಾಗುವುದು. ಚಿಕ್ಕ ವಿಷಯಗಳಿಗೆ ಮನೆಯಲ್ಲೇ ಮನಸ್ತಾಪ ಭುಗಿಲೇಳುವ ಸಾಧ್ಯತೆ ಇದೆ. ಆಹಾರ ಸೇವನೆಯ ಕಡೆಗೆ ವಿಶೇಷ ಗಮನ ಅಗತ್ಯ,
ಗಮನಿಸಿ:- ಇಂದು ನಿಮ್ಮ ಅಜಾಗರೂಕತೆಯಿಂದ ಅರೋಗ್ಯ ಕೆಡಬಹುದು,
ಪರಿಹಾರ:- ನಿಮ್ಮ ಕುಲ ದೇವರ ಪ್ರಾರ್ಥನೆ ಮಾಡಿ,


*09,🏹ಧನುಸ್ಸು ರಾಶಿ🏹*
🦢, ಈ ರಾಶಿಯವರಿಗೆ ಇಂದು ಮಕ್ಕಳ ವಿಚಾರಧಾರೆಗಳು ನಿಮ್ಮ ಮನಸಿಗೆ ಘಾಸಿ ಮಾಡುವ ಸಂಭವವಿದೆ. ಅವರಿಗೆ ಗುರು ಹಿರಿಯರ ಮೂಲಕ ಬುದ್ಧಿಮಾತನ್ನು ಹೇಳಿಸಿ. ಸಾಲ, ಆರ್ಥಿಕ ಬಂಡವಾಳ ಹೂಡಿಕೆ ಮತ್ತು ಖರೀದಿ-ಮಾರಾಟ ವ್ಯವಹಾರಗಳನ್ನು ಈ ದಿನ ಮಾಡದಿರಿ,
ಗಮನಿಸಿ:- ಇಂದು ವಾಹನ ಚಾಲನೆ ಮಾಡುವಾಗ ಜಾಗ್ರತೆ ವಹಿಸಿ,
ಪರಿಹಾರ:- ಶಿವ ಪಂಚಾಕ್ಷರಿ ಮಂತ್ರವನ್ನು ಪಠಿಸಿ,


*10,🐊ಮಕರ ರಾಶಿ🐊*
🦢, ಈ ರಾಶಿಯವರಿಗೆ ಇಂದು ಕಾರಣವಿಲ್ಲದೆ ಶತ್ರುಗಳ ಸಂಖ್ಯೆ ಜಾಸ್ತಿಯಾಗುವ ಸಂಭವವಿದೆ. ಆದರೆ ಅವರನ್ನು ನಿಗ್ರಹಿಸುವುದು ನಿಮ್ಮ ಕೈಯಲ್ಲಿಲ್ಲ ಎನ್ನುವ ಸತ್ಯವನ್ನು ಅರಿಯುವಿರಿ. ನಿಮಗೆ ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎಂಬುದು ದೊಡ್ಡ ಸಮಸ್ಯೆಯಾಗಿ ಈ ದಿನ ಕಾಡಬಹುದು,
ಗಮನಿಸಿ:-ಈ ದಿನ ಶುಭ ವಾರ್ತೆಯೊಂದನ್ನು ಕೇಳುವಿರಿ.
ಪರಿಹಾರ:-ಶ್ರೀ ದುರ್ಗಾ ದೇವಿಯನ್ನು ಪ್ರಾರ್ಥಿಸಿ,


*11,⚱️ಕುಂಭ ರಾಶಿ⚱️*
🦢, ಈ ರಾಶಿಯವರಿಗೆ ಗ್ರಹಗತಿಗಳು ವಿಮುಖ ವಾಗಿರುವುದರಿಂದ.ಸಣ್ಣ ಕೆಲಸವು ದೀರ್ಘಾವಧಿಯನ್ನು ತೆಗೆದುಕೊಳ್ಳುವುದು. ಇದಕ್ಕಾಗಿ ಆತಂಕ ಪಡದೆ ಕೆಲಸ ಆಗುವವರೆಗೂ ತಾಳ್ಮೆಯಿಂದ ಇರುವುದು ಒಳ್ಳೆಯದು. ಈ ದಿನ ಒಂದು ಅನಿರೀಕ್ಷಿತ ಸಂತೋಷಕರ ಘಟನೆ ನಿಮ್ಮ ಜೀವನದಲ್ಲಿ ನಡೆಯಬಹುದು,
ಗಮನಿಸಿ:- ಇಂದು ಶಾಂತ ರೀತಿಯಿಂದ ವರ್ತಿಸಿ,
ಪರಿಹಾರ:- ಶನಿಮಂತ್ರವನ್ನು ಪಠಿಸಿ,


*12,🐋ಮೀನ ರಾಶಿ🐋*
🦢, ಈ ರಾಶಿಯವರಿಗೆ ಇಂದು ಒದಗಿದ ಅನೇಕ ಬಿಕ್ಕಟ್ಟುಗಳು ದೈವಕೃಪೆಯಿಂದ ಸಡಿಲಗೊಳ್ಳುವುವು. ಮತ್ತು ನಿಮ್ಮ ಬಹುದಿನದ ಬಯಕೆಗಳು ಗರಿಕೆದರಿ ಕುಣಿದಾಡುವುವು. ಸದ್ಯದರಲ್ಲೇ ಇನ್ನು ಹೆಚ್ಚು ಸಂತಸ ನೀಡುವ ವಾರ್ತೆಯನ್ನು ಕೇಳುವಿರಿ, ನಿಮ್ಮ ಸಕಾರಾತ್ಮಕ ಮನಸ್ಸಿನ ಜೊತೆ ನಿಮ್ಮ ಸಾಮರ್ಥ್ಯ ಹಾಗು ಜ್ಞಾನವನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸಿಕೊಳ್ಳಿ,
ಗಮನಿಸಿ:- ಇಂದು ಸಫಲತೆ ಕಾಣುವಿರಿ,
ಪರಿಹಾರ:-ಗಣಪತಿಯ ಪ್ರಾರ್ಥನೆ ಮಾಡಿ,


ಇವು ಇಂದಿನ ದ್ವಾದಶ ರಾಶಿಗಳ ದಿನಭವಿಷ್ಯ. ಗ್ರಹಗಳ ಪ್ರಭಾವವು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂಬ ನಂಬಿಕೆಯಲ್ಲಿ, ಈ ಮಾಹಿತಿಯನ್ನು ಮಾರ್ಗದರ್ಶನವಾಗಿ ಪಡೆದುಕೊಳ್ಳಿ. ನಾಳೆಯ ದಿನಭವಿಷ್ಯಕ್ಕಾಗಿ ದ್ರಶ್ಯ ನ್ಯೂಸ್  ವೆಬ್ ಸೈಟ್ ಭೇಟಿ ನೀಡುವುದನ್ನು ಮರೆಯಬೇಡಿ. ಶುಭ ದಿನ! 🌟

ಮೂಲ :ಪ್ರಾಚೀನ ಶಾಸ್ತ್ರಾಸಕ್ತ,ಎಲ್ ವಿವೇಕಾನಂದ ಆಚಾರ್ಯ 

Previous Post

ಕಾರ್ಕಳದಲ್ಲಿ ಗೋವಿಗೆ ರಾಷ್ಟ್ರಮಾತೆಯ ಸ್ಥಾನಕ್ಕಾಗಿ ಮನವಿ

Next Post

ಕ್ಲಿಯರ್‌ ಟ್ರಿಪ್‌ ನಲ್ಲಿ ಇನ್ಮುಂದೆ ರೈಲು ಟಿಕೆಟ್ ಬುಕಿಂಗ್ ಸೌಲಭ್ಯ ಲಭ್ಯ: ಐಆರ್‌ಸಿಟಿಸಿ ಜೊತೆ ಕೈಜೋಡಿಸಿದ ಫ್ಲಿಪ್‌ ಕಾರ್ಟ್ ಅಂಗಸಂಸ್ಥೆ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಕ್ಲಿಯರ್‌ ಟ್ರಿಪ್‌ ನಲ್ಲಿ ಇನ್ಮುಂದೆ ರೈಲು ಟಿಕೆಟ್ ಬುಕಿಂಗ್ ಸೌಲಭ್ಯ ಲಭ್ಯ: ಐಆರ್‌ಸಿಟಿಸಿ ಜೊತೆ ಕೈಜೋಡಿಸಿದ ಫ್ಲಿಪ್‌ ಕಾರ್ಟ್ ಅಂಗಸಂಸ್ಥೆ

ಕ್ಲಿಯರ್‌ ಟ್ರಿಪ್‌ ನಲ್ಲಿ ಇನ್ಮುಂದೆ ರೈಲು ಟಿಕೆಟ್ ಬುಕಿಂಗ್ ಸೌಲಭ್ಯ ಲಭ್ಯ: ಐಆರ್‌ಸಿಟಿಸಿ ಜೊತೆ ಕೈಜೋಡಿಸಿದ ಫ್ಲಿಪ್‌ ಕಾರ್ಟ್ ಅಂಗಸಂಸ್ಥೆ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸದಸ್ಯತ್ವದ ಕಾರ್ಡ್ ವಿತರಣೆ

ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸದಸ್ಯತ್ವದ ಕಾರ್ಡ್ ವಿತರಣೆ

24/06/2026
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಮಕ್ಕಳ ಮೂಳೆ ಮಜ್ಜೆ ಕಸಿ ಮತ್ತು ಜೀವಕೋಶ ಚಿಕಿತ್ಸಾ ಘಟಕ (BHIM) ಉದ್ಘಾಟನೆ

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಮಕ್ಕಳ ಮೂಳೆ ಮಜ್ಜೆ ಕಸಿ ಮತ್ತು ಜೀವಕೋಶ ಚಿಕಿತ್ಸಾ ಘಟಕ (BHIM) ಉದ್ಘಾಟನೆ

24/06/2026
“ಆರೋಗ್ಯಪೂರ್ಣ ಆಹಾರ ಪದ್ಧತಿ” ಕಾರ್ಯಗಾರ

“ಆರೋಗ್ಯಪೂರ್ಣ ಆಹಾರ ಪದ್ಧತಿ” ಕಾರ್ಯಗಾರ

24/06/2026
ಉಡುಪಿ : ಜುಲೈ 5ರಂದು ಮೆಹೆಂದಿ ಸ್ಪರ್ಧೆ..!

ಉಡುಪಿ : ಜುಲೈ 5ರಂದು ಮೆಹೆಂದಿ ಸ್ಪರ್ಧೆ..!

24/06/2026

Recent News

ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸದಸ್ಯತ್ವದ ಕಾರ್ಡ್ ವಿತರಣೆ

ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸದಸ್ಯತ್ವದ ಕಾರ್ಡ್ ವಿತರಣೆ

24/06/2026
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಮಕ್ಕಳ ಮೂಳೆ ಮಜ್ಜೆ ಕಸಿ ಮತ್ತು ಜೀವಕೋಶ ಚಿಕಿತ್ಸಾ ಘಟಕ (BHIM) ಉದ್ಘಾಟನೆ

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಮಕ್ಕಳ ಮೂಳೆ ಮಜ್ಜೆ ಕಸಿ ಮತ್ತು ಜೀವಕೋಶ ಚಿಕಿತ್ಸಾ ಘಟಕ (BHIM) ಉದ್ಘಾಟನೆ

24/06/2026
“ಆರೋಗ್ಯಪೂರ್ಣ ಆಹಾರ ಪದ್ಧತಿ” ಕಾರ್ಯಗಾರ

“ಆರೋಗ್ಯಪೂರ್ಣ ಆಹಾರ ಪದ್ಧತಿ” ಕಾರ್ಯಗಾರ

24/06/2026
ಉಡುಪಿ : ಜುಲೈ 5ರಂದು ಮೆಹೆಂದಿ ಸ್ಪರ್ಧೆ..!

ಉಡುಪಿ : ಜುಲೈ 5ರಂದು ಮೆಹೆಂದಿ ಸ್ಪರ್ಧೆ..!

24/06/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved