ಬೆಂಗಳೂರು: 1ನೇ ತರಗತಿಗೆ ಮಕ್ಕಳ ದಾಖಲಾತಿಗೆ ಆರು ವರ್ಷ ವಯಸ್ಸು ಕಡ್ಡಾಯ ಎಂಬ ನಿಯಮದ ಬಗ್ಗೆ ಪೋಷಕರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ. ಈ ನಿಯಮಕ್ಕೆ ಸಂಬಂಧಿಸಿದಂತೆ 2026–27ನೇ ಶೈಕ್ಷಣಿಕ ಸಾಲಿಗೂ 60 ದಿನಗಳ ಸಡಿಲಿಕೆ ನೀಡಲಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದಾರೆ.
ವಿಧಾನಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಚಿವರು, ಕರ್ನಾಟಕ ಶಿಕ್ಷಣ ಕಾಯ್ದೆ 1993ರ ಅಧ್ಯಾಯ–3, ಸೆಕ್ಷನ್ 20 ಅನ್ವಯ 1ನೇ ತರಗತಿ ದಾಖಲಾತಿ ಸಂಬಂಧ 60 ದಿನಗಳ ವಿನಾಯಿತಿ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ಹೇಳಿದರು.
ಈ ಸಡಿಲಿಕೆಯ ಮೂಲಕ 6 ವರ್ಷ ಪೂರ್ತಿಯಾಗದಿದ್ದರೂ 60 ದಿನಗಳೊಳಗಿನ ಮಕ್ಕಳಿಗೂ 2026–27ನೇ ಸಾಲಿನಲ್ಲಿ 1ನೇ ತರಗತಿಗೆ ದಾಖಲಾತಿ ನೀಡಲು ಅವಕಾಶ ಇರಲಿದೆ.
ಇದರ ಜೊತೆಗೆ ದಾಖಲಾತಿ ಪ್ರಕ್ರಿಯೆಗೆ ಬಳಸುವ ಆನ್ಲೈನ್ ದಾಖಲಾತಿ ತಂತ್ರಾಂಶದಲ್ಲೂ ಅಗತ್ಯ ಬದಲಾವಣೆಗಳನ್ನು ಮಾಡಲಾಗುತ್ತದೆ ಎಂದು ಸಚಿವರು ಸದನಕ್ಕೆ ತಿಳಿಸಿದ್ದಾರೆ.
#Education #Karnataka #SchoolAdmission #MadhuBangarappa #DhrishyaNews 📰






