ದೂಪದ ಕಟ್ಟೆ, ಮಾ. 26:ಶ್ರೀ ಮಹಾ ಗಣಪತಿ ದೇವಸ್ಥಾನ ದೂಪದ ಕಟ್ಟೆಯಲ್ಲಿ ಮಾರ್ಚ್ 25ರ ಬುಧವಾರ ಸಂಜೆ ಪರಿವಾರ ದೈವಗಳಾದ ಒಂಟಿ ಪಂಜುರ್ಲಿ, ಗುಳಿಗ, ಚಾಮುಂಡಿ ಹಾಗೂ ವರ್ತೆ ಪಂಜುರ್ಲಿ ದೈವಗಳ ಸಿರಿ ಸಿಂಗಾರದ ನೇಮೋತ್ಸವ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸುರೇಂದ್ರ ತಂತ್ರಿ ಹಾಗೂ ದೇವಸ್ಥಾನದ ಅರ್ಚಕರಾದ ಲಕ್ಷ್ಮಣ್ ಕುಡ್ವ, ಗಜಾನನ ಕುಡ್ವ ಉಪಸ್ಥಿತರಿದ್ದು, ವ್ಯವಸ್ಥಾಪಕರು ಮತ್ತು ಕುಟುಂಬಸ್ಥರೊಂದಿಗೆ ಸೇರಿ ದೈವಗಳ ಸಿರಿ ಮುಡಿ ಗಂಧ ಪ್ರಸಾದವನ್ನು ಭಕ್ತಿಭಾವದಿಂದ ಸ್ವೀಕರಿಸಿದರು.

ಉತ್ಸವದ ಸಂದರ್ಭದಲ್ಲಿ ಭಕ್ತರ ಸಂಭ್ರಮ, ಭಕ್ತಿಭಾವ ಹಾಗೂ ಸಂಪ್ರದಾಯಗಳ ವೈಭವ ಗಮನಸೆಳೆಯಿತು.
ವರದಿ,
ಅರುಣ್ ಭಟ್, ಕಾರ್ಕಳ







