ಉಡುಪಿ, ಮಾ. 20: ಶ್ರೀ ಕೃಷ್ಣ ಮಠದಲ್ಲಿ ವೈಭವದಿಂದ ನಡೆಯುತ್ತಿರುವ ರಾಮೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಅದರ ಭಾಗವಾಗಿ ರಾಜಾಂಗಣದಲ್ಲಿ ಭರತನಾಟ್ಯ ನೃತ್ಯ ಪ್ರದರ್ಶನ ಜರುಗಿತು. ‘ಮೇಘಶ್ಯಾಮ’ ಶೀರ್ಷಿಕೆಯಲ್ಲಿ ಸುಪ್ರಿಯಾ ಕೊಮಂದೂರು ಹಾಗೂ ಅವರ ತಂಡ ಮನಮೋಹಕವಾಗಿ ನೃತ್ಯಾವಳಿ ಪ್ರಸ್ತುತಪಡಿಸಿದರು.


ಸಾಂಪ್ರದಾಯಿಕ ಶೈಲಿ, ಲಯಬದ್ಧ ಹೆಜ್ಜೆಗಳು ಹಾಗೂ ಭಾವಾಭಿನಯಗಳ ಸಮನ್ವಯದಿಂದ ಕಲಾವಿದರು ಪ್ರೇಕ್ಷಕರ ಮನಗೆದ್ದರು. ಕಾರ್ಯಕ್ರಮಕ್ಕೆ ಉಪಸ್ಥಿತರಿದ್ದ ಭಕ್ತರು ಮತ್ತು ರಸಿಕರು ಪ್ರದರ್ಶನವನ್ನು ಕೊಂಡಾಡಿದರು.







