ಮಂಗಳೂರು, ಮಾ. 19: ನಗರದ ಕುದ್ರೋಳಿ ಪ್ರದೇಶದಲ್ಲಿ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ಗಳನ್ನು ಸಂಗ್ರಹಿಸಿ ಮರುಪೂರಣ ಕಾರ್ಯ ನಡೆಸಲಾಗುತ್ತಿದ್ದ ಗೋದಾಮಿನ ಮೇಲೆ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ.
ಖಚಿತ ಮಾಹಿತಿ ಆಧಾರವಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರು, ದಿನೇಶ್ ಸಾಲಿಯಾನ್ ಹಾಗೂ ಸುನಿಲ್ ನಾಯಕ್ ಅವರು ಯಾವುದೇ ಮಾನ್ಯ ಪರವಾನಿಗೆ ಇಲ್ಲದೆ ಗ್ಯಾಸ್ ಸಿಲಿಂಡರ್ಗಳನ್ನು ಸಂಗ್ರಹಿಸಿ, ದೊಡ್ಡ ಸಿಲಿಂಡರ್ಗಳಿಂದ ಸಣ್ಣ ಸಿಲಿಂಡರ್ಗಳಿಗೆ ಅನಧಿಕೃತವಾಗಿ ರಿಫಿಲ್ಲಿಂಗ್ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ್ದಾರೆ.
ದಾಳಿಯ ವೇಳೆ ಗೋದಾಮಿನಲ್ಲಿ ಇದ್ದ ಸಿಲಿಂಡರ್ಗಳು ಹಾಗೂ ಸಂಬಂಧಿತ ವಸ್ತುಗಳನ್ನು ವಶಪಡಿಸಿಕೊಂಡು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.







