ಮಣಿಪಾಲ, ಮಾ. 3: ಕಡಲು ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ “ಕವರ್ ಸ್ಟೋರಿ” ಎಂಬ ಕನ್ನಡ ಕಿರುಚಿತ್ರದ ಮುಹೂರ್ತ ಕಾರ್ಯಕ್ರಮ ಮಣಿಪಾಲದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ನೆರವೇರಿತು.
ಚಿತ್ರವನ್ನು ಶ್ರೀ ತುಕಾರಾಮ ಬಾಯಾರು ನಿರ್ದೇಶಿಸುತ್ತಿದ್ದು, ಧಾರ್ಮಿಕ ವಿಧಿವಿಧಾನಗಳನ್ನು ಪಡುಕುತ್ಯಾರು ಶ್ರೀ ಆನೆಗುಂದಿ ಮಹಾಸಂಸ್ಥಾನದ ಪ್ರಧಾನ ಪುರೋಹಿತರಾದ ಶ್ರೀ ಅಕ್ಷಯ ಶರ್ಮಾ ತಂತ್ರಿ, ಕಟಪಾಡಿ ಅವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ನಿರ್ದೇಶಕ ತುಕಾರಾಮ ಬಾಯಾರು, ಸ್ವರ್ಣೋದ್ಯಮಿ ರವಿರಾಜ್ ಆಚಾರ್ಯ (ಪರ್ಕಳ), ನಾಯಕ ಪ್ರಭು ಆಚಾರ್ಯ (ಕುಕ್ಕಿಕಟ್ಟೆ), ನಾಯಕಿ ತೇಜಸ್ವಿನಿ ಬಂಗೇರ (ಬ್ರಹ್ಮಾವರ), ನಿರ್ಮಾಪಕ ನಾಣಿ (ಉಪ್ಪಿನಂಗಡಿ), ಶಶಿಕಾಂತ ವಿ. ಆಚಾರ್ಯ (ಎಡ್ಮೇರು), ಛಾಯಾಗ್ರಾಹಕ ಸತೀಶ್ ಆಚಾರ್ಯ (ಉಡುಪಿ), ಭಾರತಿ ಟಿ.ಕೆ. (ಕುದ್ರು), ಅರುಣ್ ಎಸ್. ಕುಂದರ್ (ಬೆಳ್ಳೆ) ಹಾಗೂ ಶ್ರೀಲತಾ (ಬ್ರಹ್ಮಾವರ) ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಚಿತ್ರದ ಶೂಟಿಂಗ್ ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎಂದು ಚಿತ್ರತಂಡ ತಿಳಿಸಿದೆ.







