ಉಡುಪಿ, ಮಾ.3: 2026-27ನೇ ಶೈಕ್ಷಣಿಕ ಸಾಲಿನ ಆರ್ಟಿಇ (Right to Education) ದಾಖಲಾತಿ ಪ್ರಕ್ರಿಯೆಗೆ ಸಂಬಂಧಿಸಿ ಶಾಲಾ ಶಿಕ್ಷಣ ಇಲಾಖೆ ವಿಶೇಷ ಹೆಲ್ಪ್ ಡೆಸ್ಕ್ನ್ನು ಆರಂಭಿಸಿದೆ. ದಾಖಲಾತಿ ಕುರಿತ ಮಾಹಿತಿಗಳು, ಮಾರ್ಗದರ್ಶನ ಹಾಗೂ ಸಮಸ್ಯೆಗಳ ನಿವಾರಣೆಗೆ ಪೋಷಕರು ಮತ್ತು ಸಾರ್ವಜನಿಕರು ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಇಲಾಖೆ ತಿಳಿಸಿದೆ.
ಜಿಲ್ಲಾ ಉಪನಿರ್ದೇಶಕರ ಕಚೇರಿಯಲ್ಲಿ ನೋಡೆಲ್ ಅಧಿಕಾರಿಯಾಗಿ ಜ್ಯೋತಿ ಬಿ (ಮೊ. 7259359707) ಹಾಗೂ ವಿಷಯ ನಿರ್ವಾಹಕಿಯಾಗಿ ಸ್ವಾತಿ ಎಸ್ (ಮೊ. 7353552827) ಕಾರ್ಯನಿರ್ವಹಿಸಲಿದ್ದಾರೆ.
ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ನೋಡೆಲ್ ಅಧಿಕಾರಿ ಅಶ್ವಿನಿ (ಮೊ. 9743280418) ಮತ್ತು ವಿಷಯ ನಿರ್ವಾಹಕಿ ಸ್ವಾತಿ ಸಾಗರ್ (ಮೊ. 8310670380) ಸಂಪರ್ಕಕ್ಕೆ ಲಭ್ಯರಾಗಿದ್ದಾರೆ.
ಬ್ರಹ್ಮಾವರ ವಲಯ ಕಚೇರಿಯಲ್ಲಿ ನೋಡೆಲ್ ಅಧಿಕಾರಿ ಪ್ರಮೀಳ ಕುಮಾರಿ (ಮೊ. 9164225346) ಹಾಗೂ ವಿಷಯ ನಿರ್ವಾಹಕ ರಾಘವೇಂದ್ರ ಪಡಿಯಾರ್ (ಮೊ. 9448428348) ಸೇವೆ ನೀಡಲಿದ್ದಾರೆ.
ಕುಂದಾಪುರ ವಲಯದಲ್ಲಿ ನೋಡೆಲ್ ಅಧಿಕಾರಿ ನಾರಾಯಣ ಮರಾಠಿ (ಮೊ. 9900519333) ಮತ್ತು ವಿಷಯ ನಿರ್ವಾಹಕ ಸುರೇಶ್ ಬಾಯರಿ (ಮೊ. 8861034028) ಸಂಪರ್ಕಿಸಬಹುದಾಗಿದೆ.
ಕಾರ್ಕಳ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ನೋಡೆಲ್ ಅಧಿಕಾರಿ ರವಿಕುಮಾರ್ (ಮೊ. 9481502159) ಹಾಗೂ ವಿಷಯ ನಿರ್ವಾಹಕ ಕಾರ್ತಿಕೇಶ್ (ಮೊ. 9945676922) ಕಾರ್ಯನಿರ್ವಹಿಸಲಿದ್ದಾರೆ.
ಇದಲ್ಲದೆ, ಬೈಂದೂರು ವಲಯದಲ್ಲಿ ನೋಡೆಲ್ ಅಧಿಕಾರಿ ರಾಜೇಶ್ ಕುಮಾರ್ (ಮೊ. 6361257728) ಮತ್ತು ವಿಷಯ ನಿರ್ವಾಹಕ ಉದಯ್ ಡಿ.ಆರ್ (ಮೊ. 9739353416) ಅವರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







