Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಆರೋಗ್ಯ

ಮೆದುಳಿನ ನರಕೋಶಗಳನ್ನು ಗುರಿಯಾಗಿಸುವ ಮಾರಕ ಶಿಲೀಂಧ್ರದ ರಹಸ್ಯ ಬಯಲು – ಮಾಹೆ–ಶ್ರೋಡಿಂಗರ್ ಸಂಯುಕ್ತ ಅಧ್ಯಯನದಿಂದ ಮಹತ್ವದ ಸಾಧನೆ..!!

Dhrishya News by Dhrishya News
28/02/2026
in ಆರೋಗ್ಯ
0
ಮೆದುಳಿನ ನರಕೋಶಗಳನ್ನು ಗುರಿಯಾಗಿಸುವ ಮಾರಕ ಶಿಲೀಂಧ್ರದ ರಹಸ್ಯ ಬಯಲು – ಮಾಹೆ–ಶ್ರೋಡಿಂಗರ್ ಸಂಯುಕ್ತ ಅಧ್ಯಯನದಿಂದ ಮಹತ್ವದ ಸಾಧನೆ..!!
0
SHARES
15
VIEWS
Share on FacebookShare on Twitter

ಮಣಿಪಾಲ, ಫೆ.28: ಮಣಿಪಾಲ ಅಕಾಡಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆಯ ಸಂಶೋಧಕರು, ಶ್ವಾಸಕೋಶದ ಮೂಲಕ ಹರಡುವ ಶೀಲೀಂಧ್ರವು ಮೆದುಳಿನ ನಿರ್ದಿಷ್ಟ ಕೋಶಗಳನ್ನು ಹೇಗೆ ಗುರಿಯಾಗಿಸುತ್ತದೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಮಾಹೆಯ ಘಟಕವಾಗಿರುವ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮಣಿಪಾಲದ ಮಾಲಿಕ್ಯೂಲರ್ ನ್ಯೂರೋಸೈನ್ಸರ್ ಕೇಂದ್ರದಲ್ಲಿ ಕೈಗೊಳ್ಳಲಾಗಿರುವ ಈ ಮಹತ್ವದ ಸಂಶೋಧನೆಯು ಫಂಗಲ್ ಮೆನಿಂಜೈಟಿಸ್‌ನ್ನು ಅರ್ಥಮಾಡಿಕೊಳ್ಳಲು ಹಾಗೂ ಪರಿಣಾಮಕಾರಿ ಚಿಕಿತ್ಸೆ ಅಭಿವೃದ್ಧಿಪಡಿಸಲು ಹೊಸ ದಾರಿಗೆ ದಾರಿ ಮಾಡಿಕೊಡುತ್ತದೆ.  

 

ಡಾ. ದಿನೇಶ್ ಉಪಾಧ್ಯ ಅವರ ನೇತೃತ್ವದಲ್ಲಿ ನಡೆದ ಈ ಅಧ್ಯಯನವು, Cryptococcus neoformans ಎಂಬ ಶಿಲೀಂಧ್ರದಿಂದ ಉಂಟಾಗುವ ಮಾರಕ ಮೆನಿಂಜೈಟಿಸ್‌ ರೋಗದ ಮಾಲಿಕ್ಯೂಲುಗಳ (ಆಣ್ವಿಕ) ಕಾರ್ಯವಿಧಾನವನ್ನು ಅನಾವರಣಗೊಳಿಸಿದೆ. ಶ್ರೋಡಿಂಗರ್ ಮೆಟೀರಿಯಲ್ಸ್ ಸೈನ್ಸ್ ತಂಡದ ಸಹಯೋಗದಲ್ಲಿ ನಡೆದ ಈ ಸಂಶೋಧನೆಯು Frontiers in Immunology ಎಂಬ ಅಂತಾರಾಷ್ಟ್ರೀಯ ವಿಜ್ಞಾನ ಜರ್ನಲ್‌ನಲ್ಲಿ ಪ್ರಕಟವಾಗಿದೆ.

ರೋಗದ ಮೂಲ ಕಾರಣ ಏನು?

Cryptococcus neoformans ಮೆದುಳಿಗೆ ಪ್ರವೇಶಿಸಿದಾಗ ‘ಗ್ಲುಕುರೊನಾಕ್ಸಿಲೋಮನ್ನನ್’ (GXM) ಎಂಬ ವಿಷಕಾರಿ ಅಂಶವನ್ನು ಬಿಡುಗಡೆ ಮಾಡುತ್ತದೆ. ಇದು ಮೆದುಳಿಗೆ ಹಾನಿ ಉಂಟುಮಾಡುತ್ತದೆ ಎಂಬುದು ಈಗಾಗಲೇ ತಿಳಿದಿದ್ದರೂ, ಅದು ಯಾವ ಕೋಶಗಳನ್ನು ವಿಶೇಷವಾಗಿ ಗುರಿಯಾಗಿಸುತ್ತದೆ ಎಂಬುದು ಸ್ಪಷ್ಟವಾಗಿರಲಿಲ್ಲ.

ಈ ಪ್ರಶ್ನೆಗೆ ಉತ್ತರ ಹುಡುಕಲು ಸಂಶೋಧಕರು ಮಾನವ ಪ್ಲುರಿಪೊಟೆಂಟ್ ಕಾಂಡಕೋಶಗಳಿಂದ ಅಭಿವೃದ್ಧಿಪಡಿಸಿದ ‘ಬ್ರೇನ್ ಆರ್ಗನಾಯ್ಡ್’ ಮಾದರಿಗಳನ್ನು ಬಳಸಿದರು. ಈ ಮಾದರಿಗಳು ಮಾನವ ಮೆದುಳಿನ ವಾತಾವರಣವನ್ನು ಪ್ರಯೋಗಾಲಯದಲ್ಲಿ ನಿಖರವಾಗಿ ಪುನರ್‌ನಿರ್ಮಿಸಲು ನೆರವಾಯಿತು.

“ಮಾನವ ಕಾಂಡಕೋಶಗಳಿಂದ ನಿರ್ಮಿತ ಮಿದುಳಿನ ಆರ್ಗನಾಯ್ಡ್‌ಗಳು ಜೈವಿಕ ಕಾರ್ಯವಿಧಾನಗಳು ಮತ್ತು ಸೂಕ್ಷ್ಮಜೀವಿ ರೋಗಕಾರಕತೆಯನ್ನು ಅರ್ಥಮಾಡಿಕೊಳ್ಳಲು ಅತ್ಯಂತ ಪರಿಣಾಮಕಾರಿ ಮಾದರಿಗಳಾಗಿವೆ,” ಎಂದು ಡಾ. ದಿನೇಶ್ ಉಪಾಧ್ಯ ತಿಳಿಸಿದ್ದಾರೆ.

 

“ನಮ್ಮ ಅಧ್ಯಯನವು GXM ಇತರ ಕೋಶಗಳಿಗಿಂತ ನರಕೋಶಗಳನ್ನು ಹೆಚ್ಚು ಗುರಿಯಾಗಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸಿದೆ,” ಎಂದು ಅವರು ಹೇಳಿದ್ದಾರೆ.

ನರಕೋಶಗಳೇ ಏಕೆ ಹೆಚ್ಚು ಬಲಿಯಾಗುತ್ತವೆ?

ಈ ಸಂಶೋಧನೆಯ ಪ್ರಮುಖ ಅಂಶವೆಂದರೆ ಉನ್ನತ ಮಟ್ಟದ ಮಾಲಿಕ್ಯೂಲುಗಳ ಮಾದರೀಕರಣ. Schrödinger, Inc. ಸಂಸ್ಥೆಯ ಮೆಟೀರಿಯಲ್ಸ್ ಸೈನ್ಸ್ ಸ್ಯೂಟ್ ಬಳಸಿ, ವಿವಿಧ ಮೆದುಳಿನ ಕೋಶಗಳ ಲಿಪಿಡ್ ಸಂಯೋಜನೆ ಆಧಾರಿತ ಅಣುಮಟ್ಟದ ಮಾದರಿಗಳನ್ನು ನಿರ್ಮಿಸಲಾಯಿತು.

ಅಧ್ಯಯನದಿಂದ ನರಕೋಶಗಳ ಹೊರಪದರದಲ್ಲಿ ‘ಫಾಸ್ಫಾಟಿಡಿಲ್ಕೋಲಿನ್’ (PC) ಎಂಬ ಲಿಪಿಡ್ ಹೆಚ್ಚಿನ ಪ್ರಮಾಣದಲ್ಲಿ ಇರುವುದನ್ನು ಕಂಡುಬಂದಿದೆ. GXM ಈ ಲಿಪಿಡ್‌ನೊಂದಿಗೆ ಬಲವಾದ ಆಕರ್ಷಕ ಸಂವಹನ ತೋರಿಸುವುದರಿಂದ ಅದು ನೇರವಾಗಿ ನರಕೋಶಗಳತ್ತ ಸೆಳೆಯಲ್ಪಡುತ್ತದೆ.

GXM ನರಕೋಶಗಳಿಗೆ ಅಂಟಿಕೊಂಡ ನಂತರ, ನರಕೋಶಗಳ ನಡುವಿನ ಸಂವಹನಕ್ಕೆ ಅಗತ್ಯವಾದ ‘ಸಿನಾಪ್ಟೋಫಿಸಿನ್’ ಪ್ರೋಟೀನ್ ಪ್ರಮಾಣದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಇದರಿಂದ ನರಸಂಪರ್ಕ ವ್ಯವಸ್ಥೆ ಅಸ್ತವ್ಯಸ್ತಗೊಳ್ಳುತ್ತದೆ.

ಚಿಕಿತ್ಸೆಗೆ ಹೊಸ ದಾರಿ

“ನರಕೋಶಗಳಲ್ಲಿ ಹೆಚ್ಚಿರುವ PC ಮಟ್ಟವೇ C. neoformans ನರಕೋಶಗಳನ್ನು ಗುರಿಯಾಗಿಸುವ ಪ್ರಮುಖ ಕಾರಣವೆಂಬುದಕ್ಕೆ ನಮ್ಮ ಅಧ್ಯಯನವು ಪೂರಕ ಸಾಕ್ಷ್ಯ ಒದಗಿಸುತ್ತದೆ,” ಎಂದು ಬಯೋಕೆಮಿಸ್ಟ್ರಿ ವಿಭಾಗದ ಪ್ರೊ. ಡಾ. ವಿಶುಕುಮಾರ್ ತಿಳಿಸಿದ್ದಾರೆ.

ಸಾಂಕ್ರಾಮಿಕ ರೋಗ ವಿಭಾಗದ ಪ್ರೊ. ಡಾ. ಕವಿತಾ ಸರವು ಅವರು, “ಲಿಪಿಡ್-ನಿರ್ದಿಷ್ಟ ಸಂವಹನವನ್ನು ಗುರುತಿಸಿರುವುದು ಫಂಗಲ್ ಮೆನಿಂಜೈಟಿಸ್‌ನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಹಾಗೂ ಮೆದುಳಿನ ಕಾರ್ಯಕ್ಷಮತೆಯನ್ನು ರಕ್ಷಿಸುವ ಗುರಿಪಡಿಸಿದ ಚಿಕಿತ್ಸಾ ವಿಧಾನಗಳ ಅಭಿವೃದ್ಧಿಗೆ ದಾರಿ ತೆರೆದಿದೆ,” ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಸಂಶೋಧನೆ ಮಾನವ ಮಿದುಳಿನ ಆರ್ಗನಾಯ್ಡ್‌ಗಳನ್ನು ಬಳಸಿಕೊಂಡು ಶಿಲೀಂಧ್ರ ಸೋಂಕಿನ ಆಣ್ವಿಕ ಕಾರ್ಯವಿಧಾನಗಳನ್ನು ಅಧ್ಯಯನ ಮಾಡುವಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

Previous Post

ಅಕ್ರಮ ಜಾನುವಾರು ಸಾಗಾಟ: ಕೊಳ್ನಾಡಿನಲ್ಲಿ ವಾಹನ ವಶಕ್ಕೆ…!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಮೆದುಳಿನ ನರಕೋಶಗಳನ್ನು ಗುರಿಯಾಗಿಸುವ ಮಾರಕ ಶಿಲೀಂಧ್ರದ ರಹಸ್ಯ ಬಯಲು – ಮಾಹೆ–ಶ್ರೋಡಿಂಗರ್ ಸಂಯುಕ್ತ ಅಧ್ಯಯನದಿಂದ ಮಹತ್ವದ ಸಾಧನೆ..!!

ಮೆದುಳಿನ ನರಕೋಶಗಳನ್ನು ಗುರಿಯಾಗಿಸುವ ಮಾರಕ ಶಿಲೀಂಧ್ರದ ರಹಸ್ಯ ಬಯಲು – ಮಾಹೆ–ಶ್ರೋಡಿಂಗರ್ ಸಂಯುಕ್ತ ಅಧ್ಯಯನದಿಂದ ಮಹತ್ವದ ಸಾಧನೆ..!!

28/02/2026
ಅಕ್ರಮ ಜಾನುವಾರು ಸಾಗಾಟ: ಕೊಳ್ನಾಡಿನಲ್ಲಿ ವಾಹನ ವಶಕ್ಕೆ…!

ಅಕ್ರಮ ಜಾನುವಾರು ಸಾಗಾಟ: ಕೊಳ್ನಾಡಿನಲ್ಲಿ ವಾಹನ ವಶಕ್ಕೆ…!

28/02/2026
ಮಂಗಳೂರು–ಮಸ್ಕತ್ ನೇರ ವಿಮಾನ ಸೇವೆ ಮಾರ್ಚ್ 1ರಿಂದ ಮರುಪ್ರಾರಂಭ…!

ಮಂಗಳೂರು–ಮಸ್ಕತ್ ನೇರ ವಿಮಾನ ಸೇವೆ ಮಾರ್ಚ್ 1ರಿಂದ ಮರುಪ್ರಾರಂಭ…!

28/02/2026
ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಮಾರ್ಚ್ 1ರಂದು ಕುಲಗುರುಗಳ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಬೃಹತ್ ಸಮಾವೇಶ ಹಾಗೂ ಬೈಕ್ ರ‍್ಯಾಲಿ..!

ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಮಾರ್ಚ್ 1ರಂದು ಕುಲಗುರುಗಳ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಬೃಹತ್ ಸಮಾವೇಶ ಹಾಗೂ ಬೈಕ್ ರ‍್ಯಾಲಿ..!

28/02/2026

Recent News

ಮೆದುಳಿನ ನರಕೋಶಗಳನ್ನು ಗುರಿಯಾಗಿಸುವ ಮಾರಕ ಶಿಲೀಂಧ್ರದ ರಹಸ್ಯ ಬಯಲು – ಮಾಹೆ–ಶ್ರೋಡಿಂಗರ್ ಸಂಯುಕ್ತ ಅಧ್ಯಯನದಿಂದ ಮಹತ್ವದ ಸಾಧನೆ..!!

ಮೆದುಳಿನ ನರಕೋಶಗಳನ್ನು ಗುರಿಯಾಗಿಸುವ ಮಾರಕ ಶಿಲೀಂಧ್ರದ ರಹಸ್ಯ ಬಯಲು – ಮಾಹೆ–ಶ್ರೋಡಿಂಗರ್ ಸಂಯುಕ್ತ ಅಧ್ಯಯನದಿಂದ ಮಹತ್ವದ ಸಾಧನೆ..!!

28/02/2026
ಅಕ್ರಮ ಜಾನುವಾರು ಸಾಗಾಟ: ಕೊಳ್ನಾಡಿನಲ್ಲಿ ವಾಹನ ವಶಕ್ಕೆ…!

ಅಕ್ರಮ ಜಾನುವಾರು ಸಾಗಾಟ: ಕೊಳ್ನಾಡಿನಲ್ಲಿ ವಾಹನ ವಶಕ್ಕೆ…!

28/02/2026
ಮಂಗಳೂರು–ಮಸ್ಕತ್ ನೇರ ವಿಮಾನ ಸೇವೆ ಮಾರ್ಚ್ 1ರಿಂದ ಮರುಪ್ರಾರಂಭ…!

ಮಂಗಳೂರು–ಮಸ್ಕತ್ ನೇರ ವಿಮಾನ ಸೇವೆ ಮಾರ್ಚ್ 1ರಿಂದ ಮರುಪ್ರಾರಂಭ…!

28/02/2026
ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಮಾರ್ಚ್ 1ರಂದು ಕುಲಗುರುಗಳ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಬೃಹತ್ ಸಮಾವೇಶ ಹಾಗೂ ಬೈಕ್ ರ‍್ಯಾಲಿ..!

ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಮಾರ್ಚ್ 1ರಂದು ಕುಲಗುರುಗಳ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಬೃಹತ್ ಸಮಾವೇಶ ಹಾಗೂ ಬೈಕ್ ರ‍್ಯಾಲಿ..!

28/02/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved