ಮಲ್ಪೆ, ಫೆ. 24:ಉಡುಪಿ ಜಿಲ್ಲೆಯ ಕೆಳಾರ್ಕಳಬೆಟ್ಟಿನ ನಿವಾಸಿ ಪ್ರಜ್ವಲ್ ಕಾಮತ್ (37) ಅವರು ಸ್ನೇಹಿತರೊಂದಿಗೆ ಕ್ರಿಕೆಟ್ ಆಟವಾಡುತ್ತಿರುವ ಸಂದರ್ಭದಲ್ಲಿ ಅಸ್ವಸ್ಥಗೊಂಡು ಸಾವನ್ನಪ್ಪಿದ ದುರ್ಘಟನೆ ಫೆಬ್ರವರಿ 22ರಂದು ಸಂಭವಿಸಿದೆ.
ಕಿನ್ನಿಗೋಳಿಯ ಶ್ರೀದುರ್ಗಾ ಇಂಡಸ್ಟ್ರೀಸ್ನಲ್ಲಿ ಪ್ಯಾಕಿಂಗ್ ಲೇಬರ್ ಡಿಸೈನರ್ ಇನ್ಚಾರ್ಜ್ ಆಗಿ ಕೆಲಸ ಮಾಡುತ್ತಿದ್ದ ಪ್ರಜ್ವಲ್, ಪ್ರತೀ ಭಾನುವಾರ ಬೆಳಿಗ್ಗೆ ಊರಿಗೆ ಬಂದು ಸಂಜೆ ವೇಳೆಗೆ ಮರುಕಳಿಸುತ್ತಿದ್ದರು. ಫೆಬ್ರವರಿ 21ರ ರಾತ್ರಿ ಮನೆಗೆ ಆಗಮಿಸಿದ್ದ ಅವರು, ಫೆಬ್ರವರಿ 22ರಂದು ಸಂಬಂಧಿಕರೊಬ್ಬರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಧ್ಯಾಹ್ನ ಮನೆಗೆ ವಾಪಸ್ಸಾಗಿದ್ದರು.
ಸಂಜೆ ವೇಳೆಗೆ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ತೆರಳಿದ ವೇಳೆ ಏಕಾಏಕಿ ದೌರ್ಬಲ್ಯ ಅನುಭವಿಸಿ ಮೈದಾನದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯರು ಪರಿಶೀಲನೆ ನಡೆಸಿದ ಬಳಿಕ ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.







