ಮಂಜೇಶ್ವರ ಫೆ. 03: ಕುಂಜತ್ತೂರು ತೂಮಿನಕಾಡು ಹಿಲ್ ಟಾಪ್ನಲ್ಲಿ ಸೋಮವಾರ ಸಂಜೆ ನಡೆದ ಭೀಕರ ಘಟನೆಯಲ್ಲಿ, ಮಾದಕ ವ್ಯಸನಕ್ಕೆ ಒಳಗಾದ ತಂದೆಯೇ ತನ್ನ ಪ್ರೀತಿಯ ಮಗಳನ್ನು ಕತ್ತಿಯಿಂದ ಇರಿದು ಅಮಾನವೀಯವಾಗಿ ಹತ್ಯೆಗೈದಿರುವುದು ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.
ತಂದೆ ಉಮ್ಮರ್ ನಿಂದ ತೀವ್ರ ರೀತಿಯ ಇರಿತಕ್ಕೊಳಗಾಗಿ ರಕ್ತದ ಮಡುವಿನಲ್ಲಿದ್ದ ಜುಮೈಲಾ (18) ಆಸ್ಪತ್ರೆ ತಲುಪುವ ಮೊದಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಜುಮೈಲಾ ಅವರ ದೊಡ್ಡಪ್ಪ ಶೇಕುಂಞ ( 65) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮನೆಯಲ್ಲಿ ಕಿರುಚಾಟ ಕೇಳಿ ಪರಿಸರದ ಜನರು ಸ್ಥಳಕ್ಕೆ ಧಾವಿಸಿದಾಗ ಜುಮೈಲಾ ರಕ್ತದ ಮಡುವಿನಲ್ಲಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಮನೆಯ ಆಸ್ತಿ ಮತ್ತು ಚಿನ್ನ ಸಂಬಂಧಿಸಿ ಕುಟುಂಬದಲ್ಲಿ ಕೌಟುಂಬಿಕ ಕಲಹವಿತ್ತು. ಈ ಸಂಬಂಧ ಸಂಜೆ ಮಾತುಕತೆ ನಡೆಯುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.
ಉಮರ್ ಅವರ ಪತ್ನಿ ಅವರು ಚಿನ್ನವನ್ನು ಎಲ್ಲ ಪತಿಯ ಮುಂದಿಟ್ಟು ನನಗೆ ನೀನು ಬೇಡ. ಕೊಂಡುಹೋಗು ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಾತುಕತೆ ನಡೆದು ಉಮರ್ ಶೇಕುಂಞ ಅವರಿಗೆ ಇರಿದಿದ್ದಾರೆ. ಈ ಸಂದರ್ಭದಲ್ಲಿ ದೊಡ್ಡಪ್ಪ… ಎಂದು ಉದ್ಘಾರ ತೆಗೆದ ಜುಮೈಲಾ ಅಡ್ಡಬಂದಿದ್ದಾರೆ ಉಮರ್ ಅವರ ಕೈಯಲ್ಲಿದ್ದ ಕತ್ತಿ ಮಗಳ ಕತ್ತನ್ನು ಸೀಳಿಕೊಂಡು ಹೋಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಒಬ್ಬಳೇ ಮಗಳು
ಕೊಲೆಯಾದ ಜುಮೈಲಾ ಅವರು ಉಮ್ಮರ್ ದಂಪತಿಯ ಏಕೈಕ ಮಗಳಾಗಿದ್ದರು. ಪ್ರೀತಿಯ ಅತ್ಯಂತ ಮುದ್ದಿನ ಮಗಳು ಕೂಡ ಆಗಿದ್ದರು ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ.
ಕೊಲೆಯಾದ ಬಳಿಕ ಸ್ಥಳದಲ್ಲೇ ಇದ್ದ ಉಮರ್ ನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ.
ಕೊಲೆಯಾದ ಬಳಿಕ ಸ್ಥಳದಲ್ಲೇ ಇದ್ದ ಉಮರ್ ನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಕೊಲೆಕೃತ್ಯ ಎಸಗಿದ ಉಮರ್ ಮಾದಕ ವ್ಯಸನಿಯಾಗಿದ್ದ. ಊರಿನಲ್ಲಿ ಮಾದಕ ವ್ಯಸನ ದಿಂದ ತುಂಬಾ ಸಮಸ್ಯೆಗಳು ಸೃಷ್ಟಯಾಗುತ್ತಿದ್ದರು ಪೊಲೀಸರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒಂಭತ್ತನೇ ವಾರ್ಡ್ ಸದಸ್ಯ ಶರೀಫ್ ಪಾವೂರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
ಉಮರ್ ಕಳೆದ ಐದು ವರ್ಷಗಳಿಂದ ದುಬೈನಲ್ಲಿ ಉದ್ಯೋಗದಲ್ಲಿ ಇದ್ದು, ಒಂದೂವರೆ ತಿಂಗಳ ಹಿಂದೆಯಷ್ಟೆ ಊರಿಗೆ ಬಂದಿದ್ದರು ಎಂದು ತಿಳಿದು w໖໖.
ಪಾಸ್ ಪೋರ್ಟ್ ಸಂಬಂಧಿಸಿ ಉಮ್ಮರ್ ಮೇಲೆ ಕರ್ನಾಟಕದಲ್ಲಿ ಕೇಸು ಇದೆ ಎಂದು ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ.






