ಉಡುಪಿ: ನವೆಂಬರ್ 09:ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ 8ನೇ ಸಮ್ಮೇಳನ ಇಂದು ವಿಮಾ ನೌಕರರ ಸಂಘದ ಕಛೇರಿ ಸಭಾಂಗಣದಲ್ಲಿ ನಡೆಯಿತು ಸಮ್ಮೇಳನವನ್ನು ಬೀಡಿ ಫೆಡರೇಶನ್ ರಾಜ್ಯ ಅಧ್ಯಕ್ಷರಾದ ಜೆ.ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿ ಮಾತಾನಾಡಿದರು.
ಬೀಡಿ ಕಾರ್ಮಿಕರ ಸರಕಾರ ನಿಗದಿ ಮಾಡಿದ ತುಟ್ಟಿಭತ್ಯೆ, ಕನಿಷ್ಟಕೂಲಿಯನ್ನು ಮಾಲೀಕರು ಕಾರ್ಮಿಕರಿಗೆ ಕೊಡಲು ಹಿಂದೆಟು ಹಾಕುತ್ತಿದ್ದಾರೆ.ಕನಿಷ್ಟ ವೇತನ ಸರಕಾರ ನಿಗದಿ ಮಾಡಿದ 301 ರೂ ನೀಡದೇ 287ರೂ ನೀಡುತ್ತೆವೆ ಎಙದು ಹೇಳಿ ಅದನ್ನು ಕಾರ್ಮಿಕರಿಗೆ ಮಾಲೀಕರು ನೀಡುತ್ತಿಲ್ಲ.ಅದ್ದರಿಂದ ಕಾರ್ಮಿಕರು ಮುಂದಿನ ದಿನದಲ್ಲಿ ನಿರ್ಣಾಯಕ ವಾದ ಹೋರಾಟಕ್ಕೆ ಮುಂದಾಗಬೇಕೆಂದು ತಿಳಿಸಿದರು.ನಮ್ಮನ್ನು ಅಳುವ ಸರಕಾರದ ಪ್ರತಿನಿಧಿಗಳು ,ಶಾಸಕರು, ಸಂಸದರು ಯಾರು ಇವತ್ತು ಅಧಿವೇಶನ ದಲ್ಲಿ ಬೀಡಿ ಕಾರ್ಮಿಕರ ಬಗ್ಗೆ ಮಾತಾನಾಡುವುದಿಲ್ಲ.ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ 3ಲಕ್ಷ ಕ್ಕೂ ಮಿಕ್ಕಿ ಬೀಡಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಹಾಗಾಗಿ ನವೆಂಬರ್ 24. ರಿಂದ ಅನಿರ್ದಿಷ್ಟ ಹಗಲು ರಾತ್ರಿ ಹೋರಾಟ ಜಿಲ್ಲಾಧಿಕಾರಿ ಕಛೇರಿ ಮುಂದೆ ಮತ್ತು 28 ರಂದು ಸಹಾಯಕ ಕಮೀಷನರ್ ಕಛೇರಿ ಮುತ್ತಿಗೆ ಹಾಕಲು ಕರೆ ನೀಡಿದರು
ಮುಖ್ಯ ಅತಿಥಿಗಳಾಗಿ ಬೀಡಿ ಫೆಡರೇಶನ್ ಉಪಾಧ್ಯಕ್ಷ ರಾದ ಬಲ್ಕೀಸ್,ಕಾರ್ಕಳ ತಾಲೂಕು ಬೀಡಿ ಕಾರ್ಮಿಕ ಸಂಘದ ಅಧ್ಯಕ್ಷರಾದ ಸುನೀತಾ ಶೆಟ್ಟಿ, ಜನವಾದಿ ಮಹಿಳಾ ಸಂಘದ ಕಾರ್ಯದರ್ಶಿ ಶೀಲಾವತಿ,ಉಡುಪಿ ಬೀಡಿ ಸಂಘದ ಅಧ್ಯಕ್ಷರಾದ ನಳಿನಿ.ಎಸ್ ಇದ್ದರು ಸಮ್ಮೇಳನದ ಅಧ್ಯಕ್ಷತೆ ಯನ್ನು ಬೀಡಿ ಫೆಡರೇಶನ್ ಅಧ್ಯಕ್ಷ ರಾದ ಮಹಸಬಲ ವಡೇಯರಹೊಬಳಿ ವಹಿಸಿದ್ದರು ಸ್ವಾಗತ ಹಾಗೂ ವರದಿಮಂಡನೆಯನ್ನು ಫೆಡರೇಶನ್ ಕಾರ್ಯದರ್ಶಿ ಉಮೇಶ್ ಕುಂದರ್ ಹಾಗೂ ಕಾರ್ಯಕ್ರಮ ನಿರೂಪಣೆ ಮತ್ತು ಧನ್ಯವಾದವನ್ನು ಕವಿರಾಜ್. ಎಸ್.ಕಾಂಚನ್ ನೀಡಿದರು.
ಸಮ್ಮೇಳನದಲಿ ಮುಂದಿನ 3ವರ್ಷದ ಅವಧಿಗೆ ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ 15 ಜನರ ನೂತನ ಸಮಿತಿ ಆಯ್ಕೆ ಮಾಡಲಾಯಿತು
ಅಧ್ಯಕ್ಷ ರಾಗಿ ಉಮೇಶ್ ಕುಂದರ್ ಪ್ರಧಾನ ಕಾರ್ಯದರ್ಶಿ ಕವಿರಾಜ್. ಎಸ್.ಕಾಂಚನ್
ಕೋಶಾಧಿಕಾರಿ ಬಲ್ಕೀಸ್ ರವರನ್ನು ಸರ್ವಾನುಮತದಿಂದ ಸಮ್ಮೇಳನ ಆಯ್ಕೆ ಮಾಡಿತು








