ಕುಂದಾಪುರ : ಜೂನ್ 13: ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ಮಂಜುನಾಥ ಕಾಂಪ್ಲೆಕ್ಸ್ ಕಟ್ಟಡದ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ದಿನಾಂಕ 12/06/2025 ರಂದು ಸಂಘಟಿತರಾಗಿ ಹಣವನ್ನು ಪಣವಾಗಿರಿಸಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಟ ಅಡುತ್ತಿದ್ದ ಬಗ್ಗೆ ದೊರೆತ ಮಾಹಿತಿಯಂತೆ ಶಂಭುಲಿಂಗಯ್ಯ ಎಮ್.ಇ, ಪೊಲೀಸ್ ಉಪನಿರೀಕ್ಷಕರು, ಶಂಕರನಾರಾಯಣ ಪೊಲೀಸ್ ಠಾಣೆ ಇವರು ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ ಆರೋಪಿತರಾದ 1) ಸುಬ್ರಹ್ಮಣ್, 2) ಅಶ್ರಫ್ , 3) ಸುನೀಲ್ , 4) ಧೀರಜ್ , 5) ಶಂಕರ , 6) ಸುಧೀರ್ ಕುಮಾರ, 7) ಮಧುಕರ,, 8) ಮನೋಹರ , 9) ಗಣೇಶ, 10) ರಾಮ ರವರುಗಳನ್ನು ದಸ್ತಗಿರಿ ಮಾಡಿ ಅಂದರ್ – ಬಾಹರ್ ಆಟಕ್ಕೆ ಬಳಸಿದ ನಗದು ಹಣ 8,810/- ರೂಪಾಯಿ, 10 ಮೊಬೈಲ್ ಪೋನ್ ಗಳು, ಇಸ್ಪೀಟ್ ಜೂಜಾಟ ಆಡಲು ಬಂದಿದ್ದ KA-20-EH-1107 HERO ಕಂಪನಿಯ ಮೋಟಾರು ಸೈಕಲ್, KA-19-EM-6793 HERO SPLENDER ಮೋಟಾರು ಸೈಕಲ್ , KA-20-EL-3575 YAMAHA ಕಂಪನಿಯ ಮೋಟಾರು ಸೈಕಲ್,ಇಸ್ಪೀಟ್ ಎಲೆಗಳು, ಲಾಸ್ಟೀಕ್ ಕುರ್ಚಿಗಳು, ಒಂದು ಪ್ಲಾಸ್ಟೀಕ್ ಟೇಬಲ್, ಕಪ್ಪು ಮತ್ತು ಕೇಸರಿ ಬಣ್ಣ ಮಿಶ್ರಿತ -ಬಟ್ಟೆ ಹಾಗೂ ಒಂದು ಮೇಣದ ಬತ್ತಿಯನ್ನು ಸ್ವಾಧೀನಪಡಿಸಿಕೊಂರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 57/2025 ಕಲಂ: 112 ಬಿ ಎನ್ ಎಸ್ & ಕಲಂ: 87 ಕರ್ನಾಟಕ ಪೊಲೀಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದಲ್ಲಿ ಒಟ್ಟು 10 ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ.