ಉಡುಪಿ: ಜೂನ್ 02:ಕೆಮ್ಮಣ್ಣು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಜ್ಜರಬೆಟ್ಟುವಿನ ಲಕ್ಷ್ಮೀ ನಾರಾಯಣ ಭಜನಾ ಮಂದಿರ ಹಾಗೂ ಗುರು ರಾಘವೇಂದ್ರ ಭಜನಾ ಮಂದಿರ ಬಳಿಯ ಕಡಲ್ಕೊರೆತ ಪೀಡಿತ ಭಾಗಗಳಿಗೆ ಶಾಸಕರ ಶಿಫಾರಸ್ಸಿನ ಮೇರೆಗೆ ಮಂಜೂರಾದ ₹ 1 ಕೋಟಿ ವೆಚ್ಚದ ಕಡಲ್ಕೊರೆತ ಪ್ರತಿಬಂಧಕ ಕಾಮಗಾರಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಚಾಲನೆ ನೀಡಿದರು.
ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ಕಳೆದ ಮಳೆಗಾಲದ ಸಂದರ್ಭದಲ್ಲಿ ತೀವ್ರ ಕಡಲ್ಕೊರೆತ ಉಂಟಾದ ಗುಜ್ಜರಬೆಟ್ಟು ಭಾಗದ ಪ್ರದೇಶಗಳಿಗೆ ಮೀನುಗಾರಿಕಾ ಮತ್ತು ಬಂದರು ಇಲಾಖೆಯ ಮೂಲಕ 1 ಕೋಟಿ ಅನುದಾನ ಒದಗಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರ ಒದಗಿಸಲು ವಿಶೇಷ ಮುತುವರ್ಜಿ ವಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕೆಮ್ಮಣ್ಣು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕುಸುಮ ರವೀಂದ್ರ, ಉಪಾಧ್ಯಕ್ಷರಾದ ಅರುಣ್, ಲಕ್ಷ್ಮೀ ನಾರಾಯಣ ಭಜನಾ ಮಂದಿರದ ಅಧ್ಯಕ್ಷರಾದ ಶ್ರೀ ರತ್ನಾಕರ ಸಾಲ್ಯಾನ್, ಗುರು ರಾಘವೇಂದ್ರ ಭಜನಾ ಮಂದಿರದ ಅಧ್ಯಕ್ಷರಾದ ಸುಂದರ ಗುಜ್ಜರಬೆಟ್ಟು, ಕೆಮ್ಮಣ್ಣು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಸತೀಶ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಪ್ರಶಾಂತ್ ಕೆಮ್ಮಣ್ಣು ,ಪುರಂದರ ಕುಂದರ್ ಗುಜ್ಜರಬೆಟ್ಟು, ಸಂಧ್ಯಾ ಕೆಮ್ಮಣ್ಣು, ಧೀರೇಂದ್ರ ನಾಯ್ಕ್ ಬೆಂಗ್ರೆ, ಲೋಕೇಶ್ ಸಾಲ್ಯಾನ್ ಬೆಂಗ್ರೆ,ಪ್ರತಿಭಾ ಭಾಸ್ಕರ್ ಬೆಂಗ್ರೆ, ವತ್ಸಲಾ, ಸ್ಥಳೀಯ ಮುಖಂಡರಾದ ಪ್ರಶಾಂತ್ ಕಾಂಚನ್ ಬೆಂಗ್ರೆ, ಶ್ರೀಮತಿ ಮಾಲತಿ ಶ್ರೀಯಾನ್, ಮುತ್ತಪ್ಪ ಮೇಸ್ತ್ರಿ, ರವೀಂದ್ರ ಶ್ರೀಯಾನ್, ವಿಶು ಕುಮಾರ್ ಗುಜ್ಜರಬೆಟ್ಟು, ರವಿ ಸನಿಲ್ ಹೂಡೆ, ದಿನೇಶ್ ಮೇಸ್ತ್ರಿ, ಗಂಗಾಧರ ಪಾಲನ್, ಶೇಖರ ಶ್ರೀಯಾನ್ ಬೆಂಗ್ರೆ, ರಾಘು ಕುಂದರ್, ಲತೇಶ್ ಗುಜ್ಜರಬೆಟ್ಟು, ಪುರುಷೋತ್ತಮ ಗುಜ್ಜರಬೆಟ್ಟು, ರವಿ ಕುಂದರ್ ಗುಜ್ಜರಬೆಟ್ಟು, ಸತೀಶ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.