ಕಾರ್ಕಳ : ಜೂನ್ 02:ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕುಂದೂರು ಇಲ್ಲಿನ 2025-26ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವವು ದಿನಾಂಕ 2-6- 25ನೇ ಸೋಮವಾರದಂದು ಶಾಲಾ ಹಿತೈಷಿ ಹಾಗೂ ದಾನಿಗಳಾದ ಶ್ರೀಯುತ ಕಮಲಾಕ್ಷ ಕಾಮತ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳನ್ನು ಹಾಗೂ ಅತಿಥಿಗಳನ್ನು ಬ್ಯಾಂಡ್ಸೆಟ್ ನೊಂದಿಗೆ ಸಮಾರಂಭಕ್ಕೆ ಬರಮಾಡಿಕೊಳ್ಳಲಾಯಿತು.
ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಗಿರಿಜಮ್ಮ, ರಾಜಪುರ ಸೊಸೈಟಿಯ ಅಧ್ಯಕ್ಷರಾದ ರವೀಂದ್ರ ಪ್ರಭು, ದಾನಿಗಳಾದ ಎಡ್ವಾರ್ಡ್ ಡಿಸೋಜಾ ಬೋರ್ಕರ್ ದರ್ಕಾಸು ರಸ್ತೆ ತುಂಬೆ ಹಿತ್ತಲು ರಸ್ತೆ ಶಾಲಾ ಹಳೆ ವಿದ್ಯಾರ್ಥಿ ಹಾಗೆಯೇ ಭುವನೇಂದ್ರ ಕಾಲೇಜಿನಲ್ಲಿ ಉಪನ್ಯಾಸಕರಾದ ಶ್ರೀಮತಿ ಶಕುಂತಲಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವೃಷಭ ರಾಜ ಕಡಂಬ , ನಿವೃತ್ತ ಮುಖ್ಯ ಶಿಕ್ಷಕರಾದ ಸತೀಶ್ ಶೆಟ್ಟಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇವರೆಲ್ಲರನ್ನು ಶಾಲಾ ಮುಖ್ಯ ಶಿಕ್ಷಕರಾದ ಜಗದೀಶ್ ಹೆಗ್ಡೆ ಯವರು ಸ್ವಾಗತಿಸಿದರು ಸಮಾರಂಭದ ಉದ್ಘಾಟನೆಯನ್ನು ಶ್ರೀಮತಿ ಗಿರಿಜಮ್ಮನವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಇಲಾಖಾ ವತಿಯಿಂದ ನೀಡಲಾದ ಪಠ್ಯಪುಸ್ತಕ, ನಂದಕುಮಾರ್ ಶೆಟ್ಟಿ ಮುಂಬೈ ರವರು ನೀಡಿದ ನೋಟ್ ಪುಸ್ತಕ, ಶಕುಂತಲಾ ರವರು ನೀಡಿದ ಉಚಿತ ಬ್ಯಾಗ್ ಹಾಗೂ ಕಮಲಾಕ್ಷ ಕಾಮತ್ ರವರು ನೀಡಿದ ಉಚಿತ ಕೊಡೆಯನ್ನು ಪ್ರಾಯೋಜಕರ ಉಪಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಕುಂತಲಾ ಹಾಗೂ ಗಿರಿಜಮ್ಮನವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಅಧ್ಯಕ್ಷರ ಭಾಷಣದ ನಂತರ ಸಹ ಶಿಕ್ಷಕರಾದ ಸುದರ್ಶನ್ ಅವರು ಧನ್ಯವಾದ ನೀಡಿದರು. ಸಹ ಶಿಕ್ಷಕರಾದ ಉಮೇಶ್ ರವರು ಕಾರ್ಯಕ್ರಮ ಸಂಯೋಜನೆ ಮಾಡಿದರು.
ಮಕ್ಕಳಿಗೆ ಸಿಹಿ ಊಟದ ವ್ಯವಸ್ಥೆ ಹಾಗೂ ಕಮಲಾಕ್ಷ ಕಾಮತ್ ರವರ ವತಿಯಿಂದ ಲಾಡಿನ ವ್ಯವಸ್ಥೆಯನ್ನು ಮಾಡಲಾಗಿತ್ತು.