ಕಾರ್ಕಳ :ಮೇ 20:ಅತ್ತೂರು ಕೃಷ್ಣಗಿರಿ ಶ್ರೀ ಕಲ್ಕುಡ ದೈವಸ್ಥಾನ ಟ್ರಸ್ಟ್(ರಿ) ಅತ್ತೂರು ಪರ್ಪಲೆಗಿರಿ ಪುನರುತ್ಥಾನ ಸಮಿತಿ ,ಹಿಂದೂ ಸಮಾಜದ ಐಕ್ಯತೆಗಾಗಿ ಸುಮಾರು 500 ವರ್ಷಗಳಿಂದ ಕಾರ್ಕಳದ ಪರ್ಪಲೆ ಗಿರಿಯಲ್ಲಿ ನೆಲೆಸಿರುವ ಶ್ರೀ ಕಲ್ಕುಡ , ಕಲ್ಲುರ್ಟಿ , ತೂಕತ್ತರಿ ಧರ್ಮದೈವಗಳ ಶಿಲಾಮಯ ಗರ್ಭಗೃಹ ಸಮರ್ಪಣೆ ಮತ್ತು ದೈವ ಬಿಂಬ ಪುನರ್ ಪ್ರತಿಷ್ಠೆ ಹಾಗೂ ಸಾನಿಧ್ಯ ಕಲಶೋತ್ಸವ ಮಹಾ ಅನ್ನಸಂತರ್ಪಣೆ,ಹಾಗೂ ವೈಭವದ ಸಿರಿ ಸಿಂಗಾರ ದ ದೈವಗಳ ನೇಮೋತ್ಸವ ದಿನಾಂಕ ಮೇ 17 ಶನಿವಾರ ದಿಂದ ಮೇ 19 ಸೋಮವಾರ ತನಕ ವಿಜೃಂಭಣೆಯಿಂದ ನಡೆಯಿತು.
ದಿನಾಂಕ ಮೇ 17 ರಂದು ಶನಿವಾರ ಅಪರಾಹ್ನ ಘಂಟೆ 3.00 ರಿಂದ ಕಾರ್ಕಳ ಬಂಡಿ ಮಠ ಮೂಡುಗಣಪತಿ ದೇವರ ಸಾನಿಧ್ಯದಿಂದ ಪರ್ಪಲೆ ಗಿರಿಯ ವರೆಗೆ ವೈಭವದ ಹಸಿರುಕಾಣಿಕೆ ಮೆರವಣಿಗೆ, ನಂತರ ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ, ನಡೆಯಿತು. ದಿನಾಂಕ 18 ಮೇ ರವಿವಾರ ಸಾಯಂಕಾಲ ಘಂಟೆ 5.00 ರಿಂದ ಋತ್ವಿಜರ ಸ್ವಾಗತ , ಶಿಲ್ಪ ಪೂಜೆ, ಆಲಯ ಪ್ರತಿಗ್ರಹ ಸಾಮೂಹಿಕ ಪ್ರಾರ್ಥನೆ , ಪುಣ್ಯಾಹ, ತೋರಣ ಮುಹೂರ್ತ,ಉಗ್ರಾಣ ಮುಹೂರ್ತ ,ಖನನಾದಿ ಭೂ ಶುದ್ಧಿ ,ಗೋ ಪ್ರವೇಶ ಸಪ್ತಶುದ್ಧಿ , ಪ್ರಾಸಾ ದ ಶುದ್ಧಿ , ವಾಸ್ತು ಪೂಜೆ,ವಾಸ್ತು ಹೋಮ , ರಾಕ್ಷೊಘ್ನಹೋಮ , ದಿಕ್ಪಾಕ ಬಲಿ, ದ್ವಾರ ಪೂಜೆ,ಧಾನ್ಯಾಧಿವಾಸ ಶಯ್ಯಾಧಿವಾಸ ರಕ್ಷೆ , ದಿನಾಂಕ ಮೇ 19 ಸೋಮವಾರ, ಘಂಟೆ 7.30 ರಿಂದ ಪುಣ್ಯಾಹ, ಮಹಾಗಣಪತಿಯಾಗ, ಅಷ್ಟೋತ್ತರ ಶತ ಕಲಶ ಪ್ರತಿಷ್ಠೆ , ಅಧಿವಾಸ ಹೋಮ,ಶಿಖರ ಪ್ರತಿಷ್ಠೆ ,ಕಲಶಾಭಿಷೇಕ ,ಶ್ರೀ ನಾಗ ಶ್ರೀ ರಕ್ತೇಶ್ವರಿ,ಶ್ರೀ ಪಂಜುರ್ಲಿ ಹಾಗೂ ಶ್ರೀ ಕಲ್ಕುಡ, ಶ್ರೀ ಕಲ್ಲುರ್ಟಿ,ಶ್ರೀ ತೂಕತ್ತರಿ ದೈವಗಳ ಪ್ರತಿಷ್ಠೆ,ಜೀವ ಕಲಶಾಭಿಷೇಕ ಶಾಂತಿ ಪ್ರಾಯಶ್ಚಿತ ಯಾಗಾದಿ ಗಳು ಬೆಳಿಗ್ಗೆ ಘಂಟೆ 10.30 ರಿಂದ 108 ಕಲಶ ಸಹಿತ ಸಾನಿಧ್ಯ ಕಲಶೋತ್ಸವ ಮಹಾಪೂಜೆ,ಮಹಾ ಪ್ರಾರ್ಥನೆ,ಪ್ರಸಾದ ವಿತರಣೆ, ನಂತರ ಬೆಳಿಗ್ಗೆ ಘಂಟೆ 11.30 ಕ್ಕೆ ನೇಮೋತ್ಸವ ಪ್ರಯುಕ್ತ ಚಪ್ಪರಾ ರೋಹಣ , ಸಾಯಂಕಾಲ ಘಂಟೆ 4ರಿಂದ ಸಮಸ್ತ ಭಗವದ್ಭಕ್ತರ ಸಮಕ್ಷಮದಲ್ಲಿ ನೇಮೋತ್ಸವ ಪ್ರಯುಕ್ತ ಭಂಡಾರ ಇಳಿಯುವುದು, ಸಾಯಂಕಾಲ ಘಂಟೆ 6 ರಿಂದ ಶ್ರೀ ವಿಠ್ಠಲ ನಾಯಕ್ ಕಲ್ಲಡ್ಕ ಇವರಿಂದ ಗೀತಾ ಸಾಹಿತ್ಯ ಸಂಭ್ರಮ ,ರಾತ್ರಿ 7.30 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ,ನಂತರ ರಾತ್ರಿ 8.30 ರಿಂದ ಶ್ರೀ ಪಂಜುರ್ಲಿ, ಶ್ರೀ ಕಲ್ಕುಡ, ಶ್ರೀ ಕಲ್ಲುರ್ಟಿ ಶ್ರೀ ತೂಕತ್ತರಿ ದೈವಗಳ ವೈಭವದ ಸಿರಿ ಸಿಂಗಾರದ ನೇಮೋತ್ಸವ,ನಂತರ ಪ್ರಸಾದ ವಿತರಣೆ, ನಡೆಯಿತು.