ಉಡುಪಿ:ಮೇ 17:ಉಡುಪಿ ಜಿಲ್ಲೆಯ ಹಿರಿಯಡ್ಕ ಪರಿಸರದಲ್ಲಿ ಕಳೆದ ಮೂರೂವರೆ ತಿಂಗಳ ಹಿಂದೆ ಮಾನಸಿಕ ಅಸ್ವಸ್ಥ ಯುವಕನೊಬ್ಬ ಮಕ್ಕಳು , ಮಹಿಳೆಯರು , ವೃದ್ದರೆನ್ನದೆ ಎಲ್ಲರಿಗೂ ತೊಂದರೆಕೊಡುತ್ತಿದ್ದು, ಹಲ್ಲೆಗೂ ಯತ್ನಿಸಿದ್ದ ಮಾನಸಿಕ ಅಸ್ವಸ್ಥ ಯುವಕನನ್ನು ಯನ್ನು ಸಾರ್ವಜನಿಕರ ಕರೆಯ ಮೇರೆಗೆ ವಿಶು ಶೆಟ್ಟಿ ಅಂಬಲಪಾಡಿ ಹಾಗೂ ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ ಜಂಟಿಯಾಗಿ ಮಾನಸಿಕ ಅಸ್ವಸ್ಥ ಯುವಕನನ್ನುಹಿಡಿದು ಉಡುಪಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿ , ಚಿಕಿತ್ಸೆ ಕೊಡಿಸಿ, ನಂತರ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ ಮಂಗಳೂರು ಮಂಜೇಶ್ವರದಲ್ಲಿರುವ ಸ್ನೇಹಾಲಯಕ್ಕೆ ಸೇರಿಸಿದ್ದರು. ಅತಿಯಾದ ಮೊಬೈಲ್ ನ ಗೀಳು ಈತನನ್ನು ಈ ಪರಿಸ್ಥಿತಿಗೆ ಕೊಂಡೊಯ್ದಿದೆ ಎನ್ನಲಾಗಿದೆ.
ಸದ್ಯ ಈ ಯುವಕನು ಗುಣಮುಖನಾಗಿದ್ದು , ಸ್ನೇಹಾಲಯ ಸಂಸ್ಥೆಯು ಯುವಕನ ಮನೆಯ ವಿಳಾಸ ಹುಡುಕಿ, ಈತನು ತನ್ನ ಕುಟುಂಬದೊಂದಿಗೆ ಸೇರುವ ಮಹತ್ಕಾರ್ಯವನ್ನು ಮಾಡಿದೆ.
ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ ಹಾಗೂ ವಿಶುಶೆಟ್ಟಿ ಅಂಬಲಪಾಡಿ ಹಾಗೂ ಸ್ನೇಹಾಲಯ ಸಂಸ್ಥೆಯ ಪ್ರಯತ್ನ , ಇಂದು ಈ ಯುವಕನ ಬದುಕಿಗೆ ಹೊಸ ಅಧ್ಯಾಯವನ್ನು ಸೃಷ್ಟಿಸಿದೆ.