ಉಡುಪಿ:ಮೇ 14: ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ 19ನೇ ಪ್ರತಿಷ್ಠ ವರ್ಧಂತಿ ಮಹೋತ್ಸವದ ಪ್ರಯುಕ್ತ ಶ್ರೀ ಮಹಾ ಚಂಡಿಕಾಯಾಗವು ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನೆರವೇರಿತು..
ಅಂದು ಪ್ರಾತಃಕಾಲ ಮಹಾ ಸಂಪ್ರೋಕ್ಷಣೆ, ನಂತರ ಶ್ರೀ ಮಹಾ ಚಂಡಿಕಾಯಾಗ ನೆರವೇರಿತು.. ವೇದಮೂರ್ತಿ ರಾಘವೇಂದ್ರ ಭಟ್ ಯಾಗ ನೆರವೇರಿಸಿದರು. ಯಾಗದ ಪ್ರಯುಕ್ತ ಸುಹಾಸಿನಿ ಆರಾಧನೆ ಕನ್ನಿಕ ಆರಾಧನೆ ಆಚಾರ್ಯ ಪೂಜೆ ದಂಪತಿ ಪೂಜೆ ಮಹಾ ಅನ್ನಸಂತರ್ಪಣೆ ನೆರವೇತು..
ನಂತರ ನೆರವೇರಿದ ಮಹಾಮಂತ್ರಾಕ್ಷತೆ ಕಾರ್ಯಕ್ರಮದಲ್ಲಿ ಪರ ಊರ ಹಾಗೂ ಊರ ಭಕ್ತರಿಗೆ ಮಂತ್ರಕ್ಷತೆ ನೀಡಲಾಯಿತು..
ಐದು ದಿನಗಳ ಕಾಲ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವವನ್ನು ಶ್ರೀಯುತ ಗಣೇಶ ಸರಳಾಯ ಅವರು ಯಶಸ್ವಿಯಾಗಿ ನಿಭಾಯಿಸಿದರು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ