ಕಾರ್ಕಳ: ಮೇ 07: ಇಂದು ಇತಿಹಾಸ ಪ್ರಸಿದ್ಧ ಪಡೆದ ಮಾರಿಯಮ್ಮನ ಉತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು ಬೆಳಗಿನಿಂದಲೇ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ಕಾಯುವ ದೃಶ್ಯ ಕಂಡು ಬಂತು.
ಇಡೀ ಕರಾವಳಿಯಲ್ಲಿ ನೆಲೆಸಿರುವ ವಂತಹ ಶಕ್ತಿ ಸುರೂಪಿಣಿ ಆದಂತಹ ದುರ್ಗೆಯ ಇನ್ನೊಂದು ರೂಪವಾಗಿರುವ ಮಾರಿಕಾಂಬೆಯ ವರ್ಷ ವಧಿಯ ಎರಡು ದಿನಗಳವರೆಗೆ ಅತಿ ವಿಜೃಂಭಣೆಯಿಂದ ಮಾಡಿ ಪೂಜೆ ನಡೆಯುತ್ತಿದ್ದು ಇದರ ನಂತರ ಕಾರ್ಕಳದಲ್ಲಿ ಯಾವುದೇ ರೀತಿಯ ಉತ್ಸವಗಳು ಜರಗುವುದಿಲ್ಲ.
ಈ ಬಗ್ಗೆ ಮಾತನಾಡಿದ ಜೇಸಿ ಅಂತರಾಷ್ಟ್ರೀಯ ತರಬೇತುದಾರ ಹಾಗೂ ಶಿಕ್ಷಕರಾದ ರಾಜೇಂದ್ರ ಭಟ್ ಮಾಧ್ಯಮದೊಂದಿಗೆ ಮಾತನಾಡಿದ ಅವರು ಸಾವಿರ ವರ್ಷಗಳ ಹಿಂದಿನಇತಿಹಾಸವನ್ನು ತೆರೆದು ನೋಡಿದಾಗ ತಾಯಿಯಾಗಿ ಪಾರ್ವತಿ ಹಾಗೂ ದುರ್ಗೆ ಅವತಾರ ಹೊಂದಿರುವ ಇವಳೇ ಮಾರಿಕಾಂಬೆ ಹಿಂದಿನ ಕಾಲದಲ್ಲಿ ರಾಜರು ಯುದ್ಧ ಮಾಡಲು ಹೊರಟಾಗ ದೇವಿ ಅನುಮತಿ ಪಡೆದು ಯುದ್ಧಕ್ಕೆ ಹೊರಡುತ್ತಿದ್ದರು ಹಾಗೂ ಜಯಶಾಲಿಯಾಗಿ ಬರುತ್ತಿದ್ದರು ಎಂಬ ಮಾಹಿತಿ ಇದೆ.
ಜನರಿಂದ ಮಾತ್ರ ಸ್ವರೂಪಿಣಿ ಎಂದು ಕರೆಯಲ್ಪಡುವ ಮಾರಿಯಮ್ಮನ ಅನುಗ್ರಹ ಹಾಗೂ ಅವಳ ಆಶೀರ್ವಾದ ಎಲ್ಲರಿಗೂ ಈ ಸಂದರ್ಭದಲ್ಲಿ ಲಭಿಸಲಿ ಎಂದು ಮಾಧ್ಯಮದ ಮೂಲಕ ಹೇಳಿದರು.
ಮಾರಿಯಮ್ಮ ದೇವಸ್ಥಾನ ದ ಅರ್ಚಕರು ರಘುರಾಮ್ ಅಚಾರ್, ಆಡಳಿತ ಮೊಕ್ತಸರ ಕೆ. ಬಿ. ಗೋಪಾಲ್ ಕೃಷ್ಣ, ಸುರೇಶ್ ಹವಲ್ದಾರ್, ಕೆ. ಜೆ. ರಾಘವೇಂದ್ರ,ಹಾಗೂ ಸಮಿತಿಯ ಸರ್ವ ಸದಸ್ಯರು.ಮಾರಿಯಮ್ಮ ಜಾತ್ರೆಯಲ್ಲಿ ಸೇರಿದ್ದರು.