ಉಡುಪಿ : ಏಪ್ರಿಲ್ 08: ಮಣಿಪಾಲ ಕೆನರಾ ಬ್ಯಾಂಕ್ ರಸ್ತೆಯಲ್ಲಿ ಸಿಂಡಿಕೇಟ್ ಹೌಸ್ ಬಳಿ ನಗರಸಭೆಯ ಮಣಿಪಾಲ ಉಪ ಕಛೇರಿಯ ಎದುರು ಸುಮಾರು 50 ವರ್ಷಗಳಿಂದ ಮಣಿಪಾಲ ಪರಿಸರಕ್ಕೆ ನೀರುಣಿಸುತ್ತಿದ್ದ ಪ್ರಸಕ್ತ ಶಿಥಿಲಗೊಂಡಿದ್ದ ಉಡುಪಿ ನಗರಸಭೆಯ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ (ಒ.ಹೆಚ್.ಟಿ)ಅನ್ನು ಇಂದು ಧರಾಶಾಹಿ ಮಾಡಲಾಯಿತು.
ಶಿಥಿಲಾವಸ್ಥೆಯಲ್ಲಿದ್ದ ಈ ನೀರಿನ ಟ್ಯಾಂಕ್ ಅನ್ನು ಉಡುಪಿ ನಗರಸಭೆ ವತಿಯಿಂದ ಮೂರು ಕ್ರೇನ್ ಬಳಸಿ ನೆಲಸಮಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.