ಕಾರ್ಕಳ :ಮಾರ್ಚ್ 07: ಪರಶುರಾಮ ಥೀಮ್ ಪಾರ್ಕ್ ವಿಷಯದಲ್ಲಿ ಕಾಂಗ್ರೆಸ್ ಸರಕಾರದ ನಿಲುವು ವಿರೋಧಿಸಿ ಬೈಲೂರು ಪೇಟೆಯಲ್ಲಿ ಬಿಜೆಪಿ ಯುವ ಮೋರ್ಚ ವತಿಯಿಂದ ಬೃಹತ್ ಪ್ರತಿಭಟನೆ ಮಾರ್ಚ್ 06ರಂದು ಜರುಗಿತು.
ಈ ಸಂದರ್ಭದಲ್ಲಿ ಬಿಜೆಪಿ ಕಾರ್ಕಳ ಮಂಡಲದ ಅಧ್ಯಕ್ಷ ನವೀನ್ ನಾಯಕ್ ಮಾತನಾಡಿ ಕಾಂಗ್ರೆಸ್ ಸರಕಾರಕ್ಕೆ ಅಭಿವೃದ್ಧಿಯ ಯಾವುದೇ ಕಲ್ಪನೆ ಇಲ್ಲ ಡಿ ಸಿಎಂ .ಡಿಕೆ ಶಿವಕುಮಾರ್ ಕಳೆದ ಭಾನುವಾರ ಬಂದಾಗ ಅಭಿವೃದ್ಧಿ ಬಗ್ಗೆ ಮಾತನಾಡುವ ಬದಲು ಥೀಮ್ ಪಾರ್ಕ್ ಬಗ್ಗೆ ಮಾತನಾಡಿರುವುದು ತುಂಬಾ ವಿಷಾಧಿನಿಯ ಎಂದು ಆರೋಪಿಸಿದ್ದರು.
ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಖ್ಯಾತ ಶೆಟ್ಟಿ ಮನಿರಾಜಶೆಟ್ಟಿ ಮುಟ್ಲುಪಾಡಿ ಸತೀಶ್ ಶೆಟ್ಟಿ ಮುಖಂಡರಾದ ಜಯರಾಮ ಸಾಲಿಯನ್ ಉದಯಕೋಟಿಯನ್, ಸತೀಶ್, ಹರೀಶ್ ನಾಯಕ್, ಗುರುಪ್ರಸಾದ್ ಶೆಟ್ಟಿ, ಮಹಿಳಾ ಮೋರ್ಚಾ ಅಧ್ಯಕ್ಷ ವಿನಯ ಬಂಗೇರ, ವಿವಿಧ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು, ಯುವ ಮೋರ್ಚ ದ ಪದಾಧಿಕಾರಿಗಳು ಪಕ್ಷದ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದು, ರಾಕೇಶ್ ಶೆಟ್ಟಿ ಕಾರ್ಯಕ್ರಮ ಪ್ರಸ್ತಾವಿಸಿದರು