Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ದೊಡ್ಡಣ್ಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಶರನ್ನವರಾತ್ರಿ 18ರ ಸಂಭ್ರಮ..!!

Dhrishya News by Dhrishya News
05/10/2024
in ಮುಖಪುಟ
0
0
SHARES
12
VIEWS
Share on FacebookShare on Twitter

ಉಡುಪಿ : ಅಕ್ಟೋಬರ್ 04:ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿಸಿ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ 18ನೇ ವರ್ಷದ ಶರನ್ನವರಾತ್ರಿ ಮಹೋತ್ಸವವನ್ನು ಬಹು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.

 ಶ್ರೀ ಕ್ಷೇತ್ರವನ್ನು ಶೂನ್ಯದಿಂದ ಅನಂತದೆಡೆಗೆ ಕೊಂಡೊಯ್ಯುತ್ತಿರುವ ಶ್ರೀ ಗುರೂಜಿಯವರು ಆತ್ಮಸ್ಥೈರ್ಯದ ಪ್ರತೀಕ ಕ್ಷೇತ್ರದ ನಡೆದಾಡುವ ದೇವರಾದ ಶ್ರೀ ಗುರೂಜಿಯವರನ್ನು ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ಶ್ರೀ ರಮಾನಂದ ಗುರೂಜಿ ಶಿಷ್ಯ ಬಳಗ ಆಯೋಜಿಸಿದ ವಿಶೇಷ ಕಾರ್ಯಕ್ರಮದಲ್ಲಿ ಗೌರವಿಸಿ ಸನ್ಮಾನಿಸಲಾಯಿತು..

ರಾತ್ರಿಯ ರಂಗ ಪೂಜಾ ಸಹಿತ ಕಲ್ಪೋಕ್ತ ಪೂಜೆಯ ನಂತರ ಶ್ರೀ ಕ್ಷೇತ್ರದಿಂದ ಗುರೂಜಿಯವರನ್ನು ಚೆಂಡೆನಾದ ಮಂಗಳವಾದ್ಯ ನೃತ್ಯಸಹಿತವಾಗಿ ವೇದಘೋಷಗಳೊಂದಿಗೆ ನವಶಕ್ತಿ ವೇದಿಕೆಯಲ್ಲಿ ಬರಮಾಡಿಕೊಳ್ಳಲಾಯಿತು.

ಶ್ರೀ ಗುರೂಜಿಯವರಿಗಾಗಿ ಭಕ್ತ ಸಮೂಹ ವಿಶೇಷವಾಗಿ ರಚಿಸಿದ್ದ ಹೂವಿನ ಮಂಟಪದಲ್ಲಿ ಕುಳ್ಳಿರಿಸಿ ಪಾದಪೂಜೆ ನೆರವೇರಿಸಲಾಯಿತು.

 ಮುತ್ತಿನ ಪೇಟವನ್ನು ತೊಡಿಸಿ,ಬೃಹತ್ ಗುಲಾಬಿಯ ಹಾರ ವನ್ನು ಅಲಂಕರಿಸಿ, ರೇಷ್ಮೆಯಾ ವಸ್ತ್ರವನ್ನು ಉಡುಗೊರೆಯನ್ನಾಗಿಸಿ, ಚಿನ್ನದ ಉಂಗುರವನ್ನು ತೊಡಿಸಿ, ತಮಗೆ ಉತ್ತಮ ಜೀವನವನ್ನು ಕರುಣಿಸಿದ ಗುರೂಜಿಯವರಿಗೆ ಧನ್ಯವಾದ ಸಮರ್ಪಿಸಿದರು..

 

ಯೋಗ ಗುರು ಸ್ವಸ್ತಿಕ್ ಆಚಾರ್ಯ ಅವರು ಸಂಖ್ಯೆ 18ರ ಮಹತ್ವವನ್ನು ವಿವರಿಸಿದರು..

 ಸನ್ಮಾನ ಸ್ವೀಕರಿಸಿ ಮಾತನಾಡಿದ ಗುರೂಜಿ ಅವರು ದೇವರನ್ನು ಪ್ರೀತಿಸಿ, ಮೋಹಿಸಿ, ದೇವರು ನಮ್ಮನ್ನು ಪ್ರೀತಿಸುತ್ತಾರೆ. ದೃಢ ಚಿತ್ತ ಸಂಕಲ್ಪವನ್ನು ಹೊಂದಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದಾಗ ಯಶಸ್ಸು ಸಾಧ್ಯ ಎಂದರು. ನಾನೊಬ್ಬ ಸಾಮಾನ್ಯ ಮನುಷ್ಯ ಇದು ನನಗೆ ಸಂದ ಗೌರವವಲ್ಲ ಈ ಕ್ಷೇತ್ರದ ಮಾತೆಗೆ ಸಂದ ಗೌರವ ಎಲ್ಲವೂ ತಾಯಿಯ ಪ್ರೇರಣೆಯಂತೆ ನೆರವೇರುತ್ತಿದೆ ಆಕೆ ನಡೆಸಿದಂತೆ ನಾನು ನಡೆಯುತ್ತೆನೆ ಎಂದು ಭಾವನಾತ್ಮಕವಾಗಿ ನುಡಿದರು

 ಈ ಶುಭ ಸಂದರ್ಭದಲ್ಲಿ 18ನೇ ವರ್ಷದ ಶರನ್ನವರಾತ್ರಿಯ ಸವಿ ನೆನಪಿಗಾಗಿ ಅತಿರಸ ಮಹಾಪ್ರಸಾದವನ್ನು ಲೋಕಾರ್ಪಣೆಗೊಳಿಸಿದರು.

ನಿತ್ಯವೂ ಭಕ್ತರಿಗೆ ಲಭ್ಯವಿರುವಂತೆ ಸಿಹಿ ಭಕ್ಷಗಳಲ್ಲಿ ಅತಿ ಶ್ರೇಷ್ಠವೆನಿಸಿದ ಶ್ರೀ ಚಕ್ರಪೀಠ ಸುರಪೂಜಿತೆಗೆ ಅತಿಪ್ರಿಯವೆನಿಸಿದ ಅತಿರಸ ಕ್ಷೇತ್ರದ ಪ್ರಧಾನ ಪ್ರಸಾದವಾಗಿ ಇನ್ನು ಮುಂದೆ ಭಕ್ತರಿಗೆ ಲಭ್ಯವಿರುತ್ತದೆ ಇದು ಐತಿಹಾಸಿಕವೆನಿಸಲಿದೆ ಎಂದರು..

ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ಕ್ಷೇತ್ರ ರಚನೆಯ 18 ವರ್ಷಗಳ ಪರಿಶ್ರಮ ನೋವು ನಲಿವುಗಳ ಚಿತ್ರಣವನ್ನು ಪ್ರಾಸ್ತಾವಿಸಿದರು.

 ಕ್ಷೇತ್ರದ ಅರ್ಚಕ ವರ್ಗ ಪುರೋಹಿತ ವರ್ಗ, ಪರಿಚಾರಿಕ ವರ್ಗ, ಪಾಕಶಾಸ್ತ್ರಜ್ಞರು,ಹಾಗೂ ಪ್ರಜ್ಞ ಶಾಲೆಯ ಶಿಕ್ಷಕ ಶಿಕ್ಷಕಿಯರು, ಪ್ರಜ್ಞ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪೋಷಕರು ಹಾಗೂ ಕ್ಷೇತ್ರದ ಭಕ್ತರುಗಳು ಈ ಶುಭ ಸಂದರ್ಭದಲ್ಲಿ ಉಪಸ್ಥಿತರಿದ್ದರು…

Previous Post

ಬೈಂದೂರು : ಕಲುಷಿತ ನೀರು ಸೇವನೆ, ಸಾವಿರಕ್ಕೂ ಅಧಿಕ ಮಂದಿ ಅಸ್ವಸ್ಥ..!!

Next Post

ನೇತ್ರಶಾಸ್ತ್ರದ ಅಗತ್ಯತೆಗಳು – ಭಾರತೀಯ ಸಾಮರ್ಥ್ಯ-ಆಧಾರಿತ ವೈದ್ಯಕೀಯ ಪಠ್ಯಕ್ರಮದ ಪ್ರಕಾರ” ಪಠ್ಯಪುಸ್ತಕ ಕೆಎಂಸಿ ಮಣಿಪಾಲದಲ್ಲಿ ಬಿಡುಗಡೆ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ನೇತ್ರಶಾಸ್ತ್ರದ ಅಗತ್ಯತೆಗಳು - ಭಾರತೀಯ ಸಾಮರ್ಥ್ಯ-ಆಧಾರಿತ ವೈದ್ಯಕೀಯ ಪಠ್ಯಕ್ರಮದ ಪ್ರಕಾರ" ಪಠ್ಯಪುಸ್ತಕ ಕೆಎಂಸಿ ಮಣಿಪಾಲದಲ್ಲಿ ಬಿಡುಗಡೆ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಅಸಹಾಯಕ ಸ್ಥಿತಿಯಲ್ಲಿ ವೃದ್ಧೆಯ ರಕ್ಷಣೆ: ಸಮಾಜಸೇವಕ ನಿತ್ಯಾನಂದ ಒಳಕಾಡುವರಿಂದ ಸಮಯೋಚಿತ ನೆರವು..!!

ಅಸಹಾಯಕ ಸ್ಥಿತಿಯಲ್ಲಿ ವೃದ್ಧೆಯ ರಕ್ಷಣೆ: ಸಮಾಜಸೇವಕ ನಿತ್ಯಾನಂದ ಒಳಕಾಡುವರಿಂದ ಸಮಯೋಚಿತ ನೆರವು..!!

31/01/2026
ಕಾರ್ಕಳ :ಕಾಂಗ್ರೆಸ್ ಕಚೇರಿಯಲ್ಲಿ ಮಹಾತ್ಮಾ ಗಾಂಧಿ ಪುಣ್ಯಸ್ಮರಣೆ..

ಕಾರ್ಕಳ :ಕಾಂಗ್ರೆಸ್ ಕಚೇರಿಯಲ್ಲಿ ಮಹಾತ್ಮಾ ಗಾಂಧಿ ಪುಣ್ಯಸ್ಮರಣೆ..

31/01/2026
ಆರೋಗ್ಯಕ್ಕಿಂತ ದೊಡ್ಡ ಭಾಗ್ಯ ಬೇರೊಂದಿಲ್ಲ – ಆರೋಗ್ಯ ವಿಮೆಯ ಮಹತ್ವದ ಕುರಿತು ಕಾರ್ಯಕ್ರಮ

ಆರೋಗ್ಯಕ್ಕಿಂತ ದೊಡ್ಡ ಭಾಗ್ಯ ಬೇರೊಂದಿಲ್ಲ – ಆರೋಗ್ಯ ವಿಮೆಯ ಮಹತ್ವದ ಕುರಿತು ಕಾರ್ಯಕ್ರಮ

31/01/2026
ಉಡುಪಿ :ಸೌದಾಮಿನಿ ರಾವ್ ಅವರ ಭರತನಾಟ್ಯಂ ಮಾರ್ಗಂ ಪ್ರದರ್ಶನ..!!

ಉಡುಪಿ :ಸೌದಾಮಿನಿ ರಾವ್ ಅವರ ಭರತನಾಟ್ಯಂ ಮಾರ್ಗಂ ಪ್ರದರ್ಶನ..!!

31/01/2026

Recent News

ಅಸಹಾಯಕ ಸ್ಥಿತಿಯಲ್ಲಿ ವೃದ್ಧೆಯ ರಕ್ಷಣೆ: ಸಮಾಜಸೇವಕ ನಿತ್ಯಾನಂದ ಒಳಕಾಡುವರಿಂದ ಸಮಯೋಚಿತ ನೆರವು..!!

ಅಸಹಾಯಕ ಸ್ಥಿತಿಯಲ್ಲಿ ವೃದ್ಧೆಯ ರಕ್ಷಣೆ: ಸಮಾಜಸೇವಕ ನಿತ್ಯಾನಂದ ಒಳಕಾಡುವರಿಂದ ಸಮಯೋಚಿತ ನೆರವು..!!

31/01/2026
ಕಾರ್ಕಳ :ಕಾಂಗ್ರೆಸ್ ಕಚೇರಿಯಲ್ಲಿ ಮಹಾತ್ಮಾ ಗಾಂಧಿ ಪುಣ್ಯಸ್ಮರಣೆ..

ಕಾರ್ಕಳ :ಕಾಂಗ್ರೆಸ್ ಕಚೇರಿಯಲ್ಲಿ ಮಹಾತ್ಮಾ ಗಾಂಧಿ ಪುಣ್ಯಸ್ಮರಣೆ..

31/01/2026
ಆರೋಗ್ಯಕ್ಕಿಂತ ದೊಡ್ಡ ಭಾಗ್ಯ ಬೇರೊಂದಿಲ್ಲ – ಆರೋಗ್ಯ ವಿಮೆಯ ಮಹತ್ವದ ಕುರಿತು ಕಾರ್ಯಕ್ರಮ

ಆರೋಗ್ಯಕ್ಕಿಂತ ದೊಡ್ಡ ಭಾಗ್ಯ ಬೇರೊಂದಿಲ್ಲ – ಆರೋಗ್ಯ ವಿಮೆಯ ಮಹತ್ವದ ಕುರಿತು ಕಾರ್ಯಕ್ರಮ

31/01/2026
ಉಡುಪಿ :ಸೌದಾಮಿನಿ ರಾವ್ ಅವರ ಭರತನಾಟ್ಯಂ ಮಾರ್ಗಂ ಪ್ರದರ್ಶನ..!!

ಉಡುಪಿ :ಸೌದಾಮಿನಿ ರಾವ್ ಅವರ ಭರತನಾಟ್ಯಂ ಮಾರ್ಗಂ ಪ್ರದರ್ಶನ..!!

31/01/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved