Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಸುಧಾರಿತ ರೆಟಿನಲ್ ಇಮೇಜಿಂಗ್ ಟೆಕ್ನಾಲಜಿ: ಕ್ಲಾರಸ್ 700 ಕ್ಯಾಮೆರಾ ಉದ್ಘಾಟನೆ..!!

Dhrishya News by Dhrishya News
28/08/2024
in ಸುದ್ದಿಗಳು
0
0
SHARES
26
VIEWS
Share on FacebookShare on Twitter

ಮಣಿಪಾಲ, 28 ಆಗಸ್ಟ್ 2024: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ನೇತ್ರವಿಜ್ಞಾನ ವಿಭಾಗವು ಕ್ಲಾರಸ್ 700 – HD ಅಲ್ಟ್ರಾ-ವೈಡ್‌ಫೀಲ್ಡ್ ಫಂಡಸ್ ಇಮೇಜಿಂಗ್‌ ಮತ್ತು ಫ್ಲೋರೆಸ್ಸಿನ್ ಆಂಜಿಯೋಗ್ರಫಿ ಕ್ಯಾಮೆರಾ ದ ಉದ್ಘಾಟನೆಯೊಂದಿಗೆ ರೋಗಿಗಳ ಆರೈಕೆಯಲ್ಲಿ ಗಮನಾರ್ಹ ಮುನ್ನಡೆ ಸಾಧಿಸಿದೆ. ಝೈಸ್ ಕಂಪನಿ ಅಭಿವೃದ್ಧಿಪಡಿಸಿದ ಈ ಅತ್ಯಾಧುನಿಕ ರೆಟಿನಲ್ ಇಮೇಜಿಂಗ್ ಸಿಸ್ಟಮ್, ವಿಶೇಷವಾಗಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳಿಗೆ ಕಣ್ಣಿನ ಆರೈಕೆಯಲ್ಲಿ ಕ್ರಾಂತಿಯನ್ನುಂಟು ಮಾಡುವ ಭರವಸೆ ನೀಡುತ್ತದೆ.

ಕ್ಲಾರಾಸ್ 700 ಸುಧಾರಿತ ಉಪಕರಣವನ್ನು ಮಾಹೆ ಮಣಿಪಾಲದ ಆರೋಗ್ಯ ವಿಜ್ಞಾನಗಳ ಸಹ ಕುಲಪತಿ ಡಾ. ಶರತ್ ಕುಮಾರ್ ರಾವ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಶರತ್ ಕೆ ರಾವ್ ಅವರು ರೋಗಿಗಳ ಆರೈಕೆಯಲ್ಲಿ ಇತ್ತೀಚಿನ ಹೊಸ ತಂತ್ರಜ್ಞಾನವನ್ನು ಬಳಸುಕೊಳ್ಳುವ ಆಸ್ಪತ್ರೆಯ ಬದ್ಧತೆಯನ್ನು ಒತ್ತಿ ಹೇಳುತ್ತಾ, “ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ರೋಗಿಗಳ ಆರೈಕೆಗಾಗಿ ಸುಧಾರಿತ ತಂತ್ರಜ್ಞಾನವನ್ನು ಪರಿಚಯಿಸುವಲ್ಲಿ ಯಾವಾಗಲೂ ಮುಂಚೂಣಿಯಲ್ಲಿದೆ. ನಮ್ಮ ನೇತ್ರಶಾಸ್ತ್ರ ವಿಭಾಗಕ್ಕೆ ಕ್ಲಾರಾಸ್ 700 ಅನ್ನು ಸೇರಿಸುವುದು ಅತ್ಯುನ್ನತ ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು ಒದಗಿಸುವ ನಮ್ಮ ಧ್ಯೇಯವನ್ನು ಒತ್ತಿಹೇಳುತ್ತದೆ. ಈ ನವೀನ ತಂತ್ರಜ್ಞಾನವು ನಮ್ಮ ರೋಗಿಗಳಿಗೆ ಕಣ್ಣಿನ ಆರೈಕೆಯಲ್ಲಿ ಹೊಸ ಯುಗವನ್ನು ಗುರುತಿಸುತ್ತದೆ, ವಿಶೇಷವಾಗಿ ಮಧುಮೇಹ ರೆಟಿನೋಪತಿ, ವಯಸ್ಸಿಗೆ ಸಂಬಂಧಿಸಿದ ರೆಟಿನಾದ ಕಾಯಿಲೆಗಳು ಮತ್ತು ಇತರ ರೆಟಿನಾದ ಅಸ್ವಸ್ಥತೆಗಳಿಗೆ ಇದು ಬಹುವಾಗಿ ಅನೂಕೂಲವಾಗಲಿದೆ” ಎಂದರು.    

ಕಾರ್ಯಕ್ರಮದಲ್ಲಿ ಕೆ ಎಂ ಸಿ ಮಣಿಪಾಲದ ಡೀನ್ ಡಾ.ಪದ್ಮರಾಜ್ ಹೆಗ್ಡೆ, ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ , ಕೆ ಎಂ ಸಿ ಮಣಿಪಾಲದ ಸಹ ಡೀನ್ ಡಾ ನವೀನ್ ಎಸ್ ಸಾಲಿನ್ಸ್, ನೇತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ ಯೋಗೀಶ್ ಕಾಮತ್ ಮತ್ತು ಹಿರಿಯ ನೇತ್ರ ತಜ್ಞರು ಉಪಸ್ಥಿತರಿದ್ದರು.  

ಡಾ. ಶೈಲಜಾ ಎಸ್, ನೇತ್ರಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರು, ಕ್ಲಾರಾಸ್ 700 ಅಲ್ಟ್ರಾ-ವೈಡ್‌ಫೀಲ್ಡ್ ರೆಟಿನಾಲ್ ಕ್ಯಾಮೆರಾ ಮತ್ತು ಪ್ರಯೋಜನದ ಕುರಿತು ಅವಲೋಕನ ನೀಡುತ್ತಾ, “ಝೈಸ್ ಕ್ಲಾರಾಸ್ 700 ಅನ್ನು ಸಾಟಿಯಿಲ್ಲದ ಗುಣಮಟ್ಟದ ಚಿತ್ರದೊಂದಿಗೆ ನಿಜವಾದ ಬಣ್ಣದಲ್ಲಿ ಅಲ್ಟ್ರಾ-ವೈಡ್‌ಫೀಲ್ಡ್ ಚಿತ್ರಗಳನ್ನು ಸೆರೆಹಿಡಿಯಲು ವಿನ್ಯಾಸಗೊಳಿಸಲಾಗಿದೆ. ಇದು ಫ್ಲೋರೆಸೀನ್ ಆಂಜಿಯೋಗ್ರಫಿ ಸೇರಿದಂತೆ ಸಂಪೂರ್ಣ ಎಲ್ಲಾ ವಿಧಾನಗಳ ಚಿತ್ರಗಳನ್ನು ನಿಖರವಾಗಿ ನೀಡುತ್ತದೆ. ಈ ಮೂಲಕ ನೇತ್ರತಜ್ಞರು ಸಂಪೂರ್ಣ ರೆಟಿನಾದ ಪರೀಕ್ಷೆಗಳನ್ನು ನಡೆಸಲು ಅನುವು ಮಾಡಿಕೊಡುತ್ತದೆ ಎಂದರು.”

ಈ ಸುಧಾರಿತ ಚಿತ್ರಣ ವ್ಯವಸ್ಥೆಯು ಅಕ್ಷಿಪಟಲದ ಸಾಟಿಯಿಲ್ಲದ ನೋಟವನ್ನು ಒದಗಿಸುತ್ತದೆ, ಕಣ್ಣಿನ ಕಾಯಿಲೆಗಳ ಆರಂಭಿಕ ಪತ್ತೆ ಮತ್ತು ಮೇಲ್ವಿಚಾರಣೆಗೆ ನಿರ್ಣಾಯಕವಾದ ವಿವರವಾದ ಚಿತ್ರಗಳನ್ನು ಸೆರೆಹಿಡಿಯುತ್ತದೆ. ಮಧುಮೇಹ ಅಥವಾ ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ, ಇದು ಡೈಲೇಷನ್ (ವಿಸ್ತರಣೆ) ಇಲ್ಲದೆ ಸಮಗ್ರ ರೆಟಿನಾದ ಪರೀಕ್ಷೆಗಳಿಗೆ ಅನುಮತಿಸುತ್ತದೆ, ಮತ್ತು ರೋಗಿಗಳಿಗೆ ಹೆಚ್ಚು ಆರಾಮದಾಯಕವಾಗಿಸುತ್ತದೆ.

ಕಸ್ತೂರ್ಬಾ ಆಸ್ಪತ್ರೆಯಲ್ಲಿ ಕ್ಲಾರಾಸ್ 700 ಕ್ಯಾಮೆರಾ ದ ಪರಿಚಯವು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ರೋಗಿಗಳ ಆರೈಕೆಯನ್ನು ಹೆಚ್ಚಿಸಲು ಆಸ್ಪತ್ರೆಯ ನಿರಂತರ ಪ್ರಯತ್ನಗಳಲ್ಲಿ ಮಹತ್ವದ ಮೈಲಿಗಲ್ಲು ಸೂಚಿಸುತ್ತದೆ.

Previous Post

ಉಚ್ಚಿಲ : ಶ್ರೀಮಹಾಲಕ್ಷ್ಮಿ ದೇವಸ್ಥಾನದಲ್ಲಿ  “ಉಚ್ಚಿಲ ದಸರಾ-2024” ಆಮಂತ್ರಣ ಪತ್ರಿಕೆ  ಬಿಡುಗಡೆ ..!!

Next Post

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನಿಂದ ಉಡುಪಿ ಟೌನ್ ಪೊಲೀಸ್ ಠಾಣೆಗೆ ಕಂಪ್ಯೂಟರ್ ಗಳ ಕೊಡುಗೆ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನಿಂದ ಉಡುಪಿ ಟೌನ್ ಪೊಲೀಸ್ ಠಾಣೆಗೆ ಕಂಪ್ಯೂಟರ್ ಗಳ ಕೊಡುಗೆ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಅಗ್ನಿಪಥ್ ನೇಮಕಾತಿ ರ‍್ಯಾಲಿ: ಸ್ವರಾಜ್ಯ ಮೈದಾನದಲ್ಲಿ ಜ.30ರಿಂದ ಆರಂಭ, 15,000 ಅಭ್ಯರ್ಥಿಗಳು ಪಾಲು…!!

ಅಗ್ನಿಪಥ್ ನೇಮಕಾತಿ ರ‍್ಯಾಲಿ: ಸ್ವರಾಜ್ಯ ಮೈದಾನದಲ್ಲಿ ಜ.30ರಿಂದ ಆರಂಭ, 15,000 ಅಭ್ಯರ್ಥಿಗಳು ಪಾಲು…!!

30/01/2026
ಮಲೆನಾಡಿನಲ್ಲಿ ಮಂಗನಕಾಯಿಲೆ ಭೀತಿ: ಶಿವಮೊಗ್ಗದಲ್ಲಿ ಮೊದಲ ಬಲಿ, ಚಿಕ್ಕಮಗಳೂರಿನಲ್ಲಿ 9 ಪ್ರಕರಣಗಳು ದಾಖಲು…!!

ಮಲೆನಾಡಿನಲ್ಲಿ ಮಂಗನಕಾಯಿಲೆ ಭೀತಿ: ಶಿವಮೊಗ್ಗದಲ್ಲಿ ಮೊದಲ ಬಲಿ, ಚಿಕ್ಕಮಗಳೂರಿನಲ್ಲಿ 9 ಪ್ರಕರಣಗಳು ದಾಖಲು…!!

30/01/2026
ಕೊಡಗು ಸಂಪಾಜೆ ಗೇಟ್‌ನಲ್ಲಿ ಭೀಕರ ಅಪಘಾತ: ಅಟೋ ಚಾಲಕ ಸ್ಥಳದಲ್ಲೇ ಮೃತ…!!

ಕೊಡಗು ಸಂಪಾಜೆ ಗೇಟ್‌ನಲ್ಲಿ ಭೀಕರ ಅಪಘಾತ: ಅಟೋ ಚಾಲಕ ಸ್ಥಳದಲ್ಲೇ ಮೃತ…!!

30/01/2026
ಕೊಪ್ಪಳ: KIMS ಬಿ. ಕಲ್ಲೇಶ್ ಮೇಲೆ ಐದು ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ…!!

ಕೊಪ್ಪಳ: KIMS ಬಿ. ಕಲ್ಲೇಶ್ ಮೇಲೆ ಐದು ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ…!!

30/01/2026

Recent News

ಅಗ್ನಿಪಥ್ ನೇಮಕಾತಿ ರ‍್ಯಾಲಿ: ಸ್ವರಾಜ್ಯ ಮೈದಾನದಲ್ಲಿ ಜ.30ರಿಂದ ಆರಂಭ, 15,000 ಅಭ್ಯರ್ಥಿಗಳು ಪಾಲು…!!

ಅಗ್ನಿಪಥ್ ನೇಮಕಾತಿ ರ‍್ಯಾಲಿ: ಸ್ವರಾಜ್ಯ ಮೈದಾನದಲ್ಲಿ ಜ.30ರಿಂದ ಆರಂಭ, 15,000 ಅಭ್ಯರ್ಥಿಗಳು ಪಾಲು…!!

30/01/2026
ಮಲೆನಾಡಿನಲ್ಲಿ ಮಂಗನಕಾಯಿಲೆ ಭೀತಿ: ಶಿವಮೊಗ್ಗದಲ್ಲಿ ಮೊದಲ ಬಲಿ, ಚಿಕ್ಕಮಗಳೂರಿನಲ್ಲಿ 9 ಪ್ರಕರಣಗಳು ದಾಖಲು…!!

ಮಲೆನಾಡಿನಲ್ಲಿ ಮಂಗನಕಾಯಿಲೆ ಭೀತಿ: ಶಿವಮೊಗ್ಗದಲ್ಲಿ ಮೊದಲ ಬಲಿ, ಚಿಕ್ಕಮಗಳೂರಿನಲ್ಲಿ 9 ಪ್ರಕರಣಗಳು ದಾಖಲು…!!

30/01/2026
ಕೊಡಗು ಸಂಪಾಜೆ ಗೇಟ್‌ನಲ್ಲಿ ಭೀಕರ ಅಪಘಾತ: ಅಟೋ ಚಾಲಕ ಸ್ಥಳದಲ್ಲೇ ಮೃತ…!!

ಕೊಡಗು ಸಂಪಾಜೆ ಗೇಟ್‌ನಲ್ಲಿ ಭೀಕರ ಅಪಘಾತ: ಅಟೋ ಚಾಲಕ ಸ್ಥಳದಲ್ಲೇ ಮೃತ…!!

30/01/2026
ಕೊಪ್ಪಳ: KIMS ಬಿ. ಕಲ್ಲೇಶ್ ಮೇಲೆ ಐದು ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ…!!

ಕೊಪ್ಪಳ: KIMS ಬಿ. ಕಲ್ಲೇಶ್ ಮೇಲೆ ಐದು ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ…!!

30/01/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved