Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಶರನ್ನವರಾತ್ರಿ ಸಂಭ್ರಮಕ್ಕೆ ನೃತ್ಯೋತ್ಸವ ವೈಭವ..!!

Dhrishya News by Dhrishya News
25/10/2023
in ಕರಾವಳಿ, ಸುದ್ದಿಗಳು
0
ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಶರನ್ನವರಾತ್ರಿ ಸಂಭ್ರಮಕ್ಕೆ ನೃತ್ಯೋತ್ಸವ ವೈಭವ..!!
0
SHARES
23
VIEWS
Share on FacebookShare on Twitter

ಉಡುಪಿ, ಅ. 25:ದ್ರಶ್ಯ ನ್ಯೂಸ್:ದೊಡ್ಡಣಗುಡ್ಡೆ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವ ಪ್ರಯುಕ್ತ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿಯವರ ಮಾರ್ಗದರ್ಶನದಲ್ಲಿ ನಿರಂತರ ಜೋಡಿ ಚಂಡಿಕಾಯಾಗ, ದೀಪಾರಾಧನೆ ಸಹಿತ ರಂಗಪೂಜೆ, ವಿವಿಧೆಡೆಗಳ ಪ್ರಸಿದ್ಧ ಕಲಾವಿದರ ಸಾಂಸ್ಕೃತಿಕ ವೈಭವಗಳು ಹಾಗೂ ನೃತ್ಯೋತ್ಸವವು ವೈಭವದಿಂದ ನೆರವೇರಿತು.

ಸಾತ್ವಿಕ್ ಪ್ರಭು ಉಡುಪಿ ಮತ್ತು ಮುಂಬಯಿಯ ಶ್ರದ್ಧಾ ಅವರ ಸೇವಾರ್ಥವಾಗಿ ಜೋಡಿ ಚಂಡಿಕಾಯಾಗ ಸೋಮವಾರ ಸಮರ್ಪಿಸಲ್ಪಟ್ಟಿತು. ಬೆಂಗಳೂರಿನ ಅನಿಲ್ ಅವರ ಸೇವಾರ್ಥವಾಗಿ ಕಲ್ಪೋಕ್ತ ಸಹಿತ ದುರ್ಗಾನಮಸ್ಕಾರ ಪೂಜೆ ನಡೆಯಿತು.

ಕ್ಷೇತ್ರದ ಅಲಂಕಾರ ತಜ್ಞ ಆನಂದ ಬಾಯರಿಯವರು ಸ್ವಸ್ತಿಕ್ ಆಚಾರ್ಯರ ಸಹಕಾರದೊಂದಿಗೆ ಶ್ರೀ ದೇವಿಯನ್ನು ಸಿದ್ಧಿಧಾತ್ರಿಯಾಗಿ ಅಲಂಕರಿಸಿದ್ದರು. ಅರ್ಚಕ ಅನೀಶ್ ಭಟ್ ಪೂಜಾ ವಿಧಿವಿಧಾನ ನಡೆಸಿದರು.

ಕ್ಷೇತ್ರದ ವಿಶೇಷ ಸೇವೆಯಾದ ನೃತ್ಯ ಸೇವೆಯನ್ನು ರಿದ್ದಿ, ಯಶಸ್ವಿನಿ, ಅನ್ನಪೂರ್ಣಿ, ಅಂಶಿಕಾ, ಅದ್ವಿತಾ, ಸುಫಲತಾ ದೇವಿ, ಹರಿಪ್ರಿಯಾ, ಮಣಿಪಾಲ ಎಂಐಟಿ ವಿದ್ಯಾಾರ್ಥಿ ಈಶಾನ್ ಕೌಂಡಿನ್ಯ ಹಾಗೂ ಪ್ರಸಿದ್ಧ ನೃತ್ಯ ಸಂಸ್ಥೆಗಳ ನೃತ್ಯಾರ್ಥಿಗಳು ದೇವಿಗೆ ಅಭಿಮುಖವಾಗಿ ಸಮರ್ಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ನವಶಕ್ತಿ ವೇದಿಕೆಯಲ್ಲಿ ಬೆಂಗಳೂರಿನ ಶಾಂತಲಾ ಆರ್ಟ್ಸ್‌ ಅಕಾಡೆಮಿಯ ಶ್ರವಣ್ ಯು.ಬಿ. ಅವರಿಂದ ನೃತ್ಯ ವೈವಿಧ್ಯ, ಕಾಸರಗೋಡು ದುರ್ಗಾ ಅಕಾಡೆಮಿಯ ಕಲಾವಿದರಿಂದ ಬೆಳಗ್ಗಿನಿಂದ ಸಂಜೆಯ ತನಕ ಸಾಂಸ್ಕೃತಿಕ ವೈಭವ ಜರಗಿತು.

ಗಾನ ನಾಟ್ಯ ಪ್ರಿಯಳಾದ ಶ್ರೀದೇವಿಗೆ ಈ ಬಾರಿ ಸೇವಾರ್ಥಿಗಳಿಂದ ನಾದ ಸೇವೆಯೂ ಸಮರ್ಪಿಸಲ್ಪಟ್ಟಿತು. ವಿ ನಿಕ್ಷಿತ್ ಪುತ್ತೂರು ಅವರಿಂದ ಮೃದಂಗ ವಾದನ, ಅದಿತಿ ಮತ್ತು ಮಹತಿ ಅವರಿಂದ ವಯೋಲಿನ್ ವಾದನ, ನಿರೀಕ್ಷಾ ಅವರಿಂದ ವೀಣಾ ವಾದನ, ವಿಜಯ ಶೇರಿಗಾರ್ ಅವರಿಂದ ಸ್ಯಾಕ್ಸೋಫೋನ್ ವಾದನ, ಮುರಳೀಧರ ಮುದ್ರಾಡಿ ಅವರಿಂದ ನಾದಸ್ವರ, ವಿವಿಧ ಸಿಂಗಾರಿ ಮೇಳಗಳಿಂದ ಚೆಂಡೆ ವಾದನ ಹಾಗೂ ವಿವಿಧ ಭಜನ ಮಂಡಳಿಯಿಂದ ಕುಣಿತ ಭಜನೆ ಜರಗಿತು ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.

ಪ್ರತ್ಯಕ್ಷ ರಾಜೋಪಚಾರ ಪೂಜೆ
ನೃತ್ಯ, ಗೀತಾ, ಸ್ತೋತ್ರ, ವಾದ್ಯ, ವಾಹನಾದಿಗಳು ರಾಜೋಪಚಾರ ಪೂಜೆ ಎನಿಸಲ್ಪಡುತ್ತವೆ. ವೇದ ಕಾಲದಿಂದಲೇ ಸೃಷ್ಟಿಯಾದ ರಾಜೋಪಚಾರ ಪೂಜೆಗಳು ಬಹುತೇಕ ಕಡೆಗಳಲ್ಲಿ ಮಂತ್ರೋಚ್ಛಾರಗಳಿಂದ ನಡೆದರೆ ಈ ಕ್ಷೇತ್ರದಲ್ಲಿ ‘ಪ್ರತ್ಯಕ್ಷ ರಾಜೋಪಚಾರ ಪೂಜೆ’ಯಾಗಿ ಸಮರ್ಪಿಸಲ್ಪಡುತ್ತಿದೆ. ಕಲಿಯುಗದಲ್ಲಿ ದೇವರನ್ನು ಮುದಗೊಳಿಸಲು, ಸಂಪ್ರೀತಿಗೊಳಿಸಲು ಇರುವ ಸುಲಭವಾದ ಸಾಧನವಾಗಿ ಇದು ಪರಿಗಣಿಸಲ್ಪಟ್ಟಿದೆ.

ಕಲಾವಿದರು ತಮ್ಮ ಕಲಾ ಸಾಧನೆ ಮತ್ತು ಯಶಸ್ಸಿಗಾಗಿ ಕ್ಷೇತ್ರಕ್ಕೆ ಬಂದು ಸೇವೆ ಸಲ್ಲಿಸಿ ಬದುಕಿನಲ್ಲಿ ಮನದಿಚ್ಛೆಯನ್ನು ಈಡೇರಿಸಿಕೊಳ್ಳುತ್ತಿದ್ದಾರೆ ಎಂದು ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ತಿಳಿಸಿದ್ದಾರೆ.

Tags: #ಉಡುಪಿ#ದೊಡ್ಡಣಗುಡ್ಡೆ#ನ್ಯೂಸ್
Previous Post

ಮೈಸೂರು ದಸರಾ : ಜಾನಪದ ನೃತ್ಯದ 40 ಪ್ರಕಾರಗಳ ಪ್ರದರ್ಶನ..!!

Next Post

ಉಚ್ಚಿಲ : ಗ್ರಾಮ ಪಂಚಾಯತ್ ಗೆ ಆಂಬುಲೆನ್ಸ್ ಹಸ್ತಾಂತರ ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಉಚ್ಚಿಲ : ಗ್ರಾಮ ಪಂಚಾಯತ್ ಗೆ ಆಂಬುಲೆನ್ಸ್ ಹಸ್ತಾಂತರ ..!!

ಉಚ್ಚಿಲ : ಗ್ರಾಮ ಪಂಚಾಯತ್ ಗೆ ಆಂಬುಲೆನ್ಸ್ ಹಸ್ತಾಂತರ ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023
ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿ:ನಿಯಂತ್ರಣ ತಪ್ಪಿ ರಸ್ತೆಬದಿಯ ಚರಂಡಿಗೆ ಉರುಳಿ ಬಿದ್ದ ಕಾರು: ವಾಹನದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯ..!!

ಉಡುಪಿ:ನಿಯಂತ್ರಣ ತಪ್ಪಿ ರಸ್ತೆಬದಿಯ ಚರಂಡಿಗೆ ಉರುಳಿ ಬಿದ್ದ ಕಾರು: ವಾಹನದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯ..!!

06/12/2025
ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದಲ್ಲಿಡಿಸೆಂಬರ್ 7ರಂದು ಗೀತೋತ್ಸವ ಸಮಾರೋಪ..!!

ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದಲ್ಲಿಡಿಸೆಂಬರ್ 7ರಂದು ಗೀತೋತ್ಸವ ಸಮಾರೋಪ..!!

06/12/2025
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ: ಫಲಾನುಭವಿಗಳಿಗೆ ಯೋಜನೆಯ ಕಿಟ್ ವಿತರಣೆ..!!

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ: ಫಲಾನುಭವಿಗಳಿಗೆ ಯೋಜನೆಯ ಕಿಟ್ ವಿತರಣೆ..!!

06/12/2025
ಮಂಗಳೂರು-ನವಿ ಮುಂಬೈ ನಡುವೆ ಡಿ.25ರಿಂದ ಇಂಡಿಗೋ ವಿಮಾನ ಸೇವೆ ಆರಂಭ..!!

ಸಾವಿರಕ್ಕೂ ಅಧಿಕ ಇಂಡಿಗೊ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ – ಪ್ರಯಾಣಿಕರ ತೀವ್ರ ಪರದಾಟ..!!

05/12/2025

Recent News

ಉಡುಪಿ:ನಿಯಂತ್ರಣ ತಪ್ಪಿ ರಸ್ತೆಬದಿಯ ಚರಂಡಿಗೆ ಉರುಳಿ ಬಿದ್ದ ಕಾರು: ವಾಹನದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯ..!!

ಉಡುಪಿ:ನಿಯಂತ್ರಣ ತಪ್ಪಿ ರಸ್ತೆಬದಿಯ ಚರಂಡಿಗೆ ಉರುಳಿ ಬಿದ್ದ ಕಾರು: ವಾಹನದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯ..!!

06/12/2025
ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದಲ್ಲಿಡಿಸೆಂಬರ್ 7ರಂದು ಗೀತೋತ್ಸವ ಸಮಾರೋಪ..!!

ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದಲ್ಲಿಡಿಸೆಂಬರ್ 7ರಂದು ಗೀತೋತ್ಸವ ಸಮಾರೋಪ..!!

06/12/2025
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ: ಫಲಾನುಭವಿಗಳಿಗೆ ಯೋಜನೆಯ ಕಿಟ್ ವಿತರಣೆ..!!

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ: ಫಲಾನುಭವಿಗಳಿಗೆ ಯೋಜನೆಯ ಕಿಟ್ ವಿತರಣೆ..!!

06/12/2025
ಮಂಗಳೂರು-ನವಿ ಮುಂಬೈ ನಡುವೆ ಡಿ.25ರಿಂದ ಇಂಡಿಗೋ ವಿಮಾನ ಸೇವೆ ಆರಂಭ..!!

ಸಾವಿರಕ್ಕೂ ಅಧಿಕ ಇಂಡಿಗೊ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ – ಪ್ರಯಾಣಿಕರ ತೀವ್ರ ಪರದಾಟ..!!

05/12/2025
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved