ಕಾರ್ಕಳ :- ಅಕ್ಟೋಬರ್ 07:ದ್ರಶ್ಯ ನ್ಯೂಸ್ : ಯೂಥ್ ಫಾರ್ ಸೇವಾ ಇವರ ನೇತೃತ್ವದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಮತ್ತು ಕಾರ್ಕಳ ತಾಲೂಕು ಶಿಕ್ಷಣ ಇಲಾಖೆ ಇವರ ಸಹಕಾರದೊಂದಿಗೆ ಸರಕಾರಿ ಶಾಲಾ ಮಕ್ಕಳ ಜೊತೆಯಾಗುವ ಉದ್ದೇಶದಿಂದ ಅಂಚೆ ಸಂಪರ್ಕ ಅಭಿಯಾನ ಆಧಾರ್ ನೋಂದಾವಣಿ ಮತ್ತು ಪರಿಸ್ಕರಣ ಶಿಬಿರಕ್ಕೆ ಚಾಲನೆಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರ್ವಜೆ ಇಲ್ಲಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಅಧಿಕಾರಿಯಾಗಿರುವ ಭಾಸ್ಕರ್. ಟಿ ಅವರು ದೀಪ ಹಚ್ಚಿ ಉದ್ಘಾಟನೆ ಮಾಡುವ ಮೂಲಕ ಚಾಲನೆಯನ್ನು ನೀಡಿದರು.
ಮಕ್ಕಳ ಆಧಾರ್ ಕಾರ್ಡ್ ಪರಿಷ್ಕಾರಣಿಯು ಅಗತ್ಯವಾಗಿದ್ದು, ಮುಂದಿನ ಅವಧಿಯಲ್ಲಿ ಅವರ ಶಿಕ್ಷಣ ಸಂಬಂಧಿಸಿದ ಪರೀಕ್ಷಯ ಎಲ್ಲಾ ವ್ಯವಸ್ಥೆಗಳಿಗೆ ಆಧಾರ್ ಕಾರ್ಡ್ ಅಗತ್ಯ ಬೀಳುತ್ತದೆ ಇದನ್ನು ಮನಗಂಡು ಕಾರ್ಕಳ ತಾಲೂಕಿನ ಅದ್ಯಾದಂತ ಶಾಲಾ ಮಕ್ಕಳಿಗೆ ಈ ಯೋಜನೆಯನ್ನು ಮಾಡುವ ಉದ್ದೇಶವನ್ನು ಹೊಂದಿಕೊಂಡಿದ್ದೇವೆ ಎಂದು ಉದ್ಘಾಟನಾ ಭಾಷಣದ ಮೂಲಕ ಮಾನ್ಯ ಶಿಕ್ಷಣಾಧಿಕಾರಿಯವರು ತಿಳಿಸಿದರು.
ಅಂಚೆ ಇಲಾಖೆಯ ಸೇವೆಗಳನ್ನು ಮನೆಮನೆಗೆ ತಲುಪಿಸುವುದು ನಮ್ಮ ಆದ್ಯ ಕರ್ತವ್ಯ, ಶಾಲಾ ಮಟ್ಟದಲ್ಲಿ ಈ ಯೋಜನೆಯನ್ನು ಮಾಡುವುದರಿಂದ ಮಕ್ಕಳಿಗೆ ನೇರವಾಗಿ ಭಾರತೀಯ ಅಂಚೆ ಇಲಾಖೆ ತನ್ನ ಸೇವೆಯನ್ನು ಸಲ್ಲಿಸುತ್ತಿದೆ ಎಂದು ಅಂಚೆ ಇಲಾಖೆಯ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿರುವ ಗುರುಪ್ರಸಾದ್ ಇವರು ತಿಳಿಸಿದರು.
ವೇದಿಕೆಯಲ್ಲಿ ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯ ಅಧಿಕಾರಿ ಸಂತೋಷ್ ಶೆಟ್ಟಿ, ಸಿ ಆರ್ ಪಿ ಜ್ಯೋತಿ, ಪೆರ್ವಜೆ ಶಾಲಾ ಎಸ್ ಡಿ ಎಮ್ ಅಧ್ಯಕ್ಷರಾಗಿರುವ ವನಿತಾ ಆಚಾರ್ಯ, ಸ್ಥಳೀಯ ಪುರಸಭೆ ಸದಸ್ಯರಾಗಿರುವ ಪ್ರದೀಪ್ ರಾಣ ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಶಾಲಾ ಮುಖ್ಯೋಪಾಧ್ಯಾಯಣಿ ಆಗಿರುವ ಶ್ರೀಮತಿ ಪ್ರಮೀಳಾ ಅವರು, ಧನ್ಯವಾದ ಯೂತ್ ಫೋರ್ ಸೇವಾ ಜಿಲ್ಲಾ ಕಾರ್ಡಿನೇಟರ್ ಆಗಿರುವ ಶ್ರೀಮತಿ ರಮಿತಾ ಶೈಲೇಂದ್ರ ರಾವ್, ನಿರೂಪಣೆ ಸುಗುಣ ಅವರು ನಿರೂಪಿಸಿದರು.