Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಕಾರ್ಕಳ : ಹಿಂದು ಜಾಗರಣ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ಬೃಹತ್ ಪಂಜಿನ ಮೆರವಣಿಗೆ..!!

Dhrishya News by Dhrishya News
15/08/2023
in ಕರಾವಳಿ, ಸುದ್ದಿಗಳು
0
0
SHARES
0
VIEWS
Share on FacebookShare on Twitter

ಕಾರ್ಕಳ ಹಿಂದು ಜಾಗರಣ ವೇದಿಕೆ ಕಾರ್ಕಳದ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ಬೃಹತ್ ಪಂಜಿನ ಮೆರವಣಿಗೆ ಹಾಗೂ ಸಾರ್ವಜನಿಕ ಸಭೆ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನ ಗಾಂಧಿ ಮೈದಾನದಲ್ಲಿ ಅಗಸ್ಟ್ 14ರ ಸಂಜೆ ನಡೆಯಿತು.

 

ಕಾರ್ಕಳ ಅನಂತಶಯನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಂಜನ್ನು ದೇವಳದ ಅರ್ಚಕರು ಬಾಲಾಜಿ ಅಯ್ಯಪ್ಪ ಶಿಬಿರದ ಪೂಜ್ಯ ಗುರುಸ್ವಾಮಿ ಶ್ರೀ ಬಾಲಕೃಷ್ಣ ಹೆಗ್ಡೆ, ಶ್ರೀ ಬೋಳ ಶ್ರೀನಿವಾಸ ಕಾಮತ್, ಶ್ರೀ ಗಿರಿಧರ್ ನಾಯಕ್ ಇವರಿಗೆ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.

 

ಕಾರ್ಕಳ ಅನಂತಶಯನ ವೃತ್ತದಿಂದ ಹೊರಟ ಬೃಹತ್ ಪಂಜಿನ ಮೆರವಣಿಗೆ ರಥಬೀದಿಯಲ್ಲಿ ಸಾಗಿ ಕಾರ್ಕಳ ಗಾಂಧಿ ಮೈದಾನದ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದಲ್ಲಿ ಸಮಾಪನಗೊಂಡಿತು.

ಅಭೂತಪೂರ್ವವಾಗಿ ಸಾಗಿದ ಪಂಜಿನ ಮೆರವಣಿಗೆಯಲ್ಲಿ ಕಾರ್ಕಳದ ಸುಮಾರು 800ಕ್ಕೂ ಮಿಕ್ಕಿ ದೇಶಭಕ್ತ ಹಿಂದೂ ಬಂಧು ಬಗಿನಿಯರು ಭಾಗಿಯಾದರು.

 

ಆ ನಂತರ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದ ಸಭಾಂಗಣದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಸಾರ್ವಜನಿಕ ಸಭೆ ನಡೆಯಿತು.

 

ಶ್ರೀಮತಿ ಪ್ರಮೀಳಾ ದಾನಸಾಲೆ ಇವರ ವಂದೇ ಮಾತರಂ ಗೀತೆಯೊಂದಿಗೆ ಶುಭ ಆರಂಭಗೊಂಡ ಸಭಾ ಕಾರ್ಯಕ್ರಮಕ್ಕೆ ಕಾರ್ಕಳದ ಖ್ಯಾತ ಉದ್ಯಮಿ, ಅಖಂಡ ರಾಷ್ಟ್ರದ ಕನಸುಗಾರ ಶ್ರಿ ನಿತ್ಯಾನಂದ ಪೈ ಇವರು ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.

ಆ ನಂತರ

ಭಾರತ ಮಾತೆಯ ವರ್ಣಚಿತ್ರಕ್ಕೆ ವೇದಿಕೆಯಲ್ಲಿದ್ದ ಗಣ್ಯರು ಪುಷ್ಪ ವೃಷ್ಟಿ ಮಾಡಿದರು.

 

ಹಿಂದು ಜಾಗರಣ ವೇದಿಕೆಯ ಪ್ರಾಂತ ಸಹಸಂಚಾಲಕರಾಗಿರುವ ಶ್ರೀ ಮಹೇಶ್ ಕಡಗದಾಳು ಇವರು ದಿಕ್ಸೂಚಿ ಭಾಷಣ ಮಾಡಿದರು.

 

ಸಭಾ ಅಧ್ಯಕ್ಷತೆಯನ್ನು ಕೊಡುಗೈ ದಾನಿ, ಖ್ಯಾತ ಧಾರ್ಮಿಕ ಮುಂದಾಳು,ಪ್ರಖರ ರಾಷ್ಟ್ರವಾದಿ, ಕರ್ನಾಟಕ ರಾಜ್ಯ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ (ರಿ)ಇದರ ರಾಜ್ಯ ಅಧ್ಯಕ್ಷರಾದ ಶ್ರೀ ರವೀಂದ್ರ ಶೆಟ್ಟಿ ಬಜಗೋಳಿ ಇವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಉದ್ಯಮಿ, ಅಪ್ರತಿಮ ದೇಶಭಕ್ತ ಹಿಂದೂ ಸಂಘಟನೆಗಳ ಬೆನ್ನೆಲುಬಾಗಿರುವ ಶ್ರೀ ಅರುಣ್ ನಿಟ್ಟೆ ಇವರು ಆಗಮಿಸಿದ್ದರು.

 

ಹಿಂಜಾವೇ ಜಿಲ್ಲಾ ಸಮಿತಿ ಸದಸ್ಯರಾಗಿರುವ ಶ್ರೀ ರಮೇಶ್ ಕಲ್ಲೊಟ್ಟೆ ಇವರು ಸ್ವಾಗತ ಭಾಷಣ ಮಾಡಿದರು.

 

ಪ್ರತಿಜ್ಞಾ ವಿಧಿಯನ್ನು ಶ್ರೀ ಸಂತೋಷ್ ಕುಲಾಲ್ ಗುಂಡ್ಯಡ್ಕ ಇವರು ನೆರವೇರಿಸಿದರು.

 

ಖ್ಯಾತ ನ್ಯಾಯವಾದಿಗಳಾದ ಶ್ರೀ ಮಣಿರಾಜ್ ಶೆಟ್ಟಿ, ಶ್ರೀ ರವೀಂದ್ರ ಮೊಯ್ಲಿ, ನಿಟ್ಟೆ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಸುಭಾಷ್ ಚಂದ್ರ ಹೆಗ್ಡೆ,ಪುರಸಭಾ ಸದಸ್ಯರುಗಳಾದ ಶ್ರೀಮತಿ ಭಾರತಿ ಅಮೀನ್, ನೀತಾ ಆಚಾರ್ಯ, ಹಿಂಜಾವೇ ಜಿಲ್ಲಾ ಪ್ರಮುಖರಾದ ಶ್ರೀ ಪ್ರಶಾಂತ್ ನಾಯಕ್, ಶ್ರೀ ಚಂದ್ರಶೇಖರ ಶೆಟ್ಟಿ (ದಾಮಣ್ಣ) ಸಂತೋಷ್ ಕುಕ್ಕುದಕಟ್ಟೆ, ಹಿಂದೂ ಮುಖಂಡರಾದ ಶ್ರೀ ಸಂತೋಷ್ ರಾವ್ ಕಾಳಿಕಾಂಬ, ಶ್ರೀ ಅವಿನಾಶ್ ಶೆಟ್ಟಿ, ಯುವರಾಜ್ ಶೆಟ್ಟಿ ಇವರ ಉಪಸ್ಥಿತಿಯಲ್ಲಿ ನಡೆದ ಈ ಒಂದು ಯಶಸ್ವೀ ಕಾರ್ಯಕ್ರಮ

ಹಿಂದು ಜಾಗರಣ ವೇದಿಕೆಯ ತಾಲೂಕು ಸಂಚಾಲಕರಾದ ಶ್ರೀ ಗುರುಪ್ರಸಾದ್ ನಾರಾವಿ ಇವರ ನೇತೃತ್ವದಲ್ಲಿ ನಡೆಯಿತು.

ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಸತೀಶ್ ಹೊಸ್ಮಾರು ಇವರು ನೆರವೇರಿಸಿದರು.

 

ಕಾರ್ಯಕ್ರಮದ ಯಶಸ್ಸಿಗೆ ಕಾರ್ಕಳ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಶ್ರಮಿಸಿದರು.

Previous Post

ಸ್ವಾತಂತ್ರ್ಯ ಹೋರಾಟಗಾರನ್ನು ಸ್ಮರಿಸುವುದು ನಮ್ಮ ಕರ್ತವ್ಯ : ಕೆ. ಜಯರಾಮ ಪ್ರಭು..!!

Next Post

ಬೈಲೂರು: ತರಕಾರಿ ಅಂಗಡಿಗೆ ನುಗ್ಗಿದ ಕಾರು – ಪಾನಮತ್ತ ಯುವಕನಿಂದ ವಾಹನ ಚಾಲನೆ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಬೈಲೂರು: ತರಕಾರಿ ಅಂಗಡಿಗೆ ನುಗ್ಗಿದ ಕಾರು - ಪಾನಮತ್ತ ಯುವಕನಿಂದ ವಾಹನ ಚಾಲನೆ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಸಮಗ್ರ ಶಿಕ್ಷಣ ಸಿಬ್ಬಂದಿಗೆ ಸಿಹಿ ಸುದ್ದಿ: ₹14.21 ಕೋಟಿ ಅನುದಾನ ಬಿಡುಗಡೆ…!

ಸಮಗ್ರ ಶಿಕ್ಷಣ ಸಿಬ್ಬಂದಿಗೆ ಸಿಹಿ ಸುದ್ದಿ: ₹14.21 ಕೋಟಿ ಅನುದಾನ ಬಿಡುಗಡೆ…!

17/03/2026
ಮೊಟ್ಟೆ ಮಾರಾಟಕ್ಕೆ ಹೊಸ ನಿಯಮ: ಏಪ್ರಿಲ್ 1ರಿಂದ ದಿನಾಂಕ ಮುದ್ರೆ ಕಡ್ಡಾಯ…!

ಮೊಟ್ಟೆ ಮಾರಾಟಕ್ಕೆ ಹೊಸ ನಿಯಮ: ಏಪ್ರಿಲ್ 1ರಿಂದ ದಿನಾಂಕ ಮುದ್ರೆ ಕಡ್ಡಾಯ…!

17/03/2026
ಎಲ್‌ಪಿಜಿ ಕೊರತೆಯ ನಡುವೆ ಬೆಂಗಳೂರಿನ ಯುವಕನ ‘ರಾಕೆಟ್ ಸ್ಟವ್’ ಸಂಚಲನ…!

ಎಲ್‌ಪಿಜಿ ಕೊರತೆಯ ನಡುವೆ ಬೆಂಗಳೂರಿನ ಯುವಕನ ‘ರಾಕೆಟ್ ಸ್ಟವ್’ ಸಂಚಲನ…!

17/03/2026
ಬಾವಿ ಸ್ವಚ್ಛತೆ ವೇಳೆ ಅವಘಡ: ಹಗ್ಗ ತುಂಡಾಗಿ ಬಾವಿಗೆ ಬಿದ್ದ  ವ್ಯಕ್ತಿಯ ರಕ್ಷಣೆ….!

ಬಾವಿ ಸ್ವಚ್ಛತೆ ವೇಳೆ ಅವಘಡ: ಹಗ್ಗ ತುಂಡಾಗಿ ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ….!

17/03/2026

Recent News

ಸಮಗ್ರ ಶಿಕ್ಷಣ ಸಿಬ್ಬಂದಿಗೆ ಸಿಹಿ ಸುದ್ದಿ: ₹14.21 ಕೋಟಿ ಅನುದಾನ ಬಿಡುಗಡೆ…!

ಸಮಗ್ರ ಶಿಕ್ಷಣ ಸಿಬ್ಬಂದಿಗೆ ಸಿಹಿ ಸುದ್ದಿ: ₹14.21 ಕೋಟಿ ಅನುದಾನ ಬಿಡುಗಡೆ…!

17/03/2026
ಮೊಟ್ಟೆ ಮಾರಾಟಕ್ಕೆ ಹೊಸ ನಿಯಮ: ಏಪ್ರಿಲ್ 1ರಿಂದ ದಿನಾಂಕ ಮುದ್ರೆ ಕಡ್ಡಾಯ…!

ಮೊಟ್ಟೆ ಮಾರಾಟಕ್ಕೆ ಹೊಸ ನಿಯಮ: ಏಪ್ರಿಲ್ 1ರಿಂದ ದಿನಾಂಕ ಮುದ್ರೆ ಕಡ್ಡಾಯ…!

17/03/2026
ಎಲ್‌ಪಿಜಿ ಕೊರತೆಯ ನಡುವೆ ಬೆಂಗಳೂರಿನ ಯುವಕನ ‘ರಾಕೆಟ್ ಸ್ಟವ್’ ಸಂಚಲನ…!

ಎಲ್‌ಪಿಜಿ ಕೊರತೆಯ ನಡುವೆ ಬೆಂಗಳೂರಿನ ಯುವಕನ ‘ರಾಕೆಟ್ ಸ್ಟವ್’ ಸಂಚಲನ…!

17/03/2026
ಬಾವಿ ಸ್ವಚ್ಛತೆ ವೇಳೆ ಅವಘಡ: ಹಗ್ಗ ತುಂಡಾಗಿ ಬಾವಿಗೆ ಬಿದ್ದ  ವ್ಯಕ್ತಿಯ ರಕ್ಷಣೆ….!

ಬಾವಿ ಸ್ವಚ್ಛತೆ ವೇಳೆ ಅವಘಡ: ಹಗ್ಗ ತುಂಡಾಗಿ ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ….!

17/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved