ಉಡುಪಿ: ನಗರದ ಕಲ್ಯಾಣ್ ಜ್ಯುವೆಲ್ಲರಿ ಜಂಕ್ಷನ್ ಬಳಿ ಟ್ರಾಫಿಕ್ ಸಿಗ್ನಲ್ ಅಳವಡಿಕೆಗಾಗಿ ಇರಿಸಲಾಗಿದ್ದ ಸುಮಾರು ₹8 ಲಕ್ಷ ಮೌಲ್ಯದ ಬಿಡಿಭಾಗಗಳು ಕಳವಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ACS ಟೆಕ್ನಾಲಜಿ ಲಿಮಿಟೆಡ್ ಸಂಸ್ಥೆಯ AVP ಆಪರೇಷನ್ಸ್ ಶ್ರೀನಿವಾಸ ಏಲೂರಿ ಅವರು ನೀಡಿದ ದೂರಿನಂತೆ, ಸಂಸ್ಥೆಯಿಂದ ಟ್ರಾಫಿಕ್ ಸಿಗ್ನಲ್ ಅಳವಡಿಕೆಗಾಗಿ 2023ರ ಜುಲೈ 18ರಂದು ಅಗತ್ಯ ಬಿಡಿಭಾಗಗಳನ್ನು ಕಲ್ಯಾಣ ಜ್ಯುವೆಲ್ಲರಿ ಜಂಕ್ಷನ್ ಬಳಿ ತಂದು ಇರಿಸಲಾಗಿತ್ತು.
ಪ್ರಾಜೆಕ್ಟ್ನಲ್ಲಿ ವಿಳಂಬವಾಗಿದ್ದ ಹಿನ್ನೆಲೆಯಲ್ಲಿ ಉಡುಪಿ ನಗರಸಭೆ ಅಧಿಕಾರಿಗಳು ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಹೀಗಾಗಿ ಬಿಡಿಭಾಗಗಳನ್ನು ಸ್ಥಳದಲ್ಲಿಯೇ ಇರಿಸಲಾಗಿತ್ತು.
ಬಳಿಕ 2026ರ ಆಗಸ್ಟ್ 22ರಂದು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ, ಸುಮಾರು ₹8 ಲಕ್ಷ ಮೌಲ್ಯದ ಸೊತ್ತುಗಳು ಕಳವಾಗಿರುವುದು ಗಮನಕ್ಕೆ ಬಂದಿದೆ.
ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.






