ಕೋಟ, ಆ. 1: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಮೊಳಹಳ್ಳಿ ಗ್ರಾಮದ ಮಾವಿನಕಟ್ಟೆಯ ಶ್ರದ್ದಾ ಸ್ಟೋರ್ ಸಮೀಪ ವಾಸವಾಗಿರುವ ಭಾರತಿ (45), ರವಿ ಕೊಠಾರಿ ಅವರ ಪತ್ನಿ, ತಮ್ಮ ಮನೆಯಲ್ಲಿ ಇರಿಸಿದ್ದ ಸುಮಾರು 320 ಗ್ರಾಂ ತೂಕದ ಚಿನ್ನಾಭರಣಗಳು ಕಳುವಾಗಿರುವುದಾಗಿ ದೂರು ನೀಡಿದ್ದಾರೆ.
ದೂರಿನ ಪ್ರಕಾರ, ಜೂನ್ 1, 2026ರಂದು ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ಅವರು ಮನೆಗೆ ಮರಳಿದ ಬಳಿಕ ಚಿನ್ನಾಭರಣಗಳನ್ನು ಮನೆಯ ಗೋಡ್ರೇಜ್ನಲ್ಲಿ ಸುರಕ್ಷಿತವಾಗಿ ಇಟ್ಟಿದ್ದರು. ಬಳಿಕ ಜುಲೈ 27ರಂದು ಬೆಳಿಗ್ಗೆ ಗೋಡ್ರೇಜ್ ತೆರೆಯಲು ಹೋಗಿದಾಗ ಚಿನ್ನಾಭರಣಗಳು ಕಾಣೆಯಾಗಿದ್ದವು. ಮನೆಯನ್ನೆಲ್ಲಾ ಹುಡುಕಿದರೂ ಅವು ಪತ್ತೆಯಾಗಿಲ್ಲ.
ಕಳುವಾದ ವಸ್ತುಗಳಲ್ಲಿ 7 ಚಿನ್ನದ ಬಳೆಗಳು, 7 ಉಂಗುರಗಳು, 7 ಜೋಡಿ ಕಿವಿಯೋಲೆಗಳು, 1 ಜೋಡಿ ಜುಮಕಿ, 3 ಬ್ರಾಸ್ ಲೈಟ್ಗಳು, 1 ಕರಿಮಣಿ ಸರ, 1 ನೆಕ್ಲೇಸ್, 1 ಮುತ್ತಿನ ಸರ, 1 ಕೆಂಪು ಹರಳಿನ ಸರ ಹಾಗೂ 2 ಚಿನ್ನದ ಚೈನ್ಗಳು ಸೇರಿದ್ದು, ಒಟ್ಟು ಸುಮಾರು ₹30 ಲಕ್ಷ ಮೌಲ್ಯದ ಆಭರಣಗಳಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೂರಿನಲ್ಲಿ, ತಮ್ಮ ಗಂಡನ ಸ್ನೇಹಿತನಾದ ಚೇತನ್ ಶೆಟ್ಟಿ ಆಗಾಗ ಮನೆಗೆ ಬಂದು ಹೋಗುತ್ತಿದ್ದ ಕಾರಣ ಮನೆಯ ಪರಿಚಯ ಹೊಂದಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆಭರಣಗಳನ್ನು ಕಳವು ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ.






