ಕಾರ್ಕಳ, ಪೆರ್ವಾಜೆ ಸುವರ್ಣ ಭೂಮಿ ಸಾಯಿಬಾಬಾ ಮಂದಿರದಲ್ಲಿ ವರ್ಷಂಪ್ರತಿ ನಡೆಯುವ ಗುರುಪೂರ್ಣಿಮ ಪ್ರಯುಕ್ತ ವಿಶೇಷ ಪೂಜೆ ಹಾಗೂ ನಿರಂತರ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಮದ್ಯಾಹ್ನ ಮಹಾಪೂಜೆ ಮಂಗಳಾರತಿ ಹಾಗು ಅನ್ನ ಸಂತರ್ಪಣೆ ನಡೆಯಿತು, ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅನ್ನ ಪ್ರಸಾದ ಸ್ವೀಕರಿಸಿದರು. ಗೌರವಾಧ್ಯಕ್ಷರು ಸಿ. ಎ. ಕಮಲಾಕ್ಷ ಕಾಮತ್ ಮತ್ತು ದಿವಂಗತ ಚಂದ್ರಹಾಸ ಸುವರ್ಣ ರ ಪುತ್ರ ಅಭಿಷೇಕ್ ಸುವರ್ಣ, ಲಲಿತ ಸುವರ್ಣ ಪ್ರಫುಲ್ಲ ಶೆಟ್ಟಿ, ಆಡಳಿತ ಮಂಡಳಿಯ ಸರ್ವ ಸದಸ್ಯರು ಅರ್ಚಕ ವೃಂದ ಮುಂತಾದವರು ಉಪಸ್ತಿತರಿದ್ದರು.







