ಭಾರತೀಯ ಜನತಾ ಪಾರ್ಟಿ ಉಡುಪಿ ಗ್ರಾಮಾಂತರ ವತಿಯಿಂದ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನದ ದಿನದ ಪ್ರಯುಕ್ತ ಜೂನ್ 23 ರಂದು ಪಕ್ಷದ ಕಚೇರಿಯಲ್ಲಿ ಪುಷ್ಪ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷರಾದ ರಾಜೀವ್ ಕುಲಾಲ್ ಉಪಸ್ಥಿತರಿದ್ದರು.
ಹಿರಿಯರು ಮತ್ತು ಮಂಡಲದ ಕೋಶಾಧಿಕಾರಿಯಾದ ಪ್ರವೀಣ್ ಉಪ್ಪೂರು ದೀಪ ಪ್ರಜ್ವಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಂಡಲದ ಪ್ರಧಾನ ಕಾರ್ಯದರ್ಶಿ ದೇವಾನಂದ ನಾಯಕ್, ಜಿಲ್ಲಾ ಉಪಾಧ್ಯಕ್ಷರಾದ ನಳಿನಿ ಪ್ರದೀಪ್ ರಾವ್, ಮಂಡಲ ರೈತ ಮೋರ್ಚಾ ಅಧ್ಯಕ್ಷರಾದ ಮಹೇಶ್ ಕೋಟ್ಯಾನ್, ಯುವ ಮೋರ್ಚಾದ ಅಧ್ಯಕ್ಷ ಸುಶಾಂತ್ ಎಸ್ ಪೂಜಾರಿ, ಮಂಡಲದ ಉಪಾಧ್ಯಕ್ಷರಾದ ಹರೀಶ್ ಶೆಟ್ಟಿ, ಮಂಡಲದ ಕಾರ್ಯದರ್ಶಿಯಾದ ರೇವತಿ ಆನಂದ, ಪ್ರಮುಖರಾದ ಎಸ್ ನಾರಾಯಣ್, ನಿತ್ಯಾನಂದ ಬಿ ಆರ್,ನಾಗವೇಣಿ, ಸತ್ಯರಾಜ್, ಪ್ರಸಾದ್ ಕುಮಾರ್, ಉಮಾ ಬಾಯಿ, ಮೀರಾಸದಾನಂದ,ಮಹಿಳಾ ಮೋರ್ಚೆ ಅಧ್ಯಕ್ಷೆ ರಮ್ಯಾ, ಪಕ್ಷದ ಕಾರ್ಯಕರ್ತರಾದ ಪ್ರಜ್ವಲ್ ದೇವಾಡಿಗ, ಭರತ್, ವಿಘ್ನೇಶ್ ಉಪಸ್ಥಿತರಿದ್ದರು.






