Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ಮಾಹೆಯಲ್ಲಿ ಎಸ್‌ಎಸಿಪಿ ಅಂತಾರಾಷ್ಟ್ರೀಯ ವಾರ್ಷಿಕ ಸಮಾವೇಶ : ಕುಲಪತಿ ಡಾ. ಶರತ್‌ ರಾವ್‌ ಅವರಿಂದ ಉದ್ಘಾಟನೆ..!

Dhrishya News by Dhrishya News
22/05/2026
in ಮುಖಪುಟ
0
ಮಾಹೆಯಲ್ಲಿ ಎಸ್‌ಎಸಿಪಿ ಅಂತಾರಾಷ್ಟ್ರೀಯ ವಾರ್ಷಿಕ ಸಮಾವೇಶ : ಕುಲಪತಿ ಡಾ. ಶರತ್‌ ರಾವ್‌ ಅವರಿಂದ ಉದ್ಘಾಟನೆ..!

Dr Sharath K Rao, Vice Chancellor, MAHE, being welcomed to the inauguration of the SACP Annual Conference by Dr Gayathri Prabhu, Director, Manipal Institute of Social Sciences, Humanities and Arts.

0
SHARES
2
VIEWS
Share on FacebookShare on Twitter

ಮಣಿಪಾಲ, ಮೇ 21 : ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಸಂಸ್ಥೆಯ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್, ಆರ್ಟ್ಸ್ ಅಂಡ್ ಹ್ಯೂಮ್ಯಾನಿಟೀಸ್ (ಮಿಶ) ಹಾಗೂ ಏಷ್ಯನ್ ಮತ್ತು ತೌಲನಿಕ ತತ್ತ್ವಶಾಸ್ತ್ರದ ಅಂತರರಾಷ್ಟ್ರೀಯ ಸಂಘಟನೆ (ಇಂಟರ್‌ನ್ಯಾಶನಲ್‌ ಸೊಸೈಟಿ ಆಫ್‌ ಏಷಿಯನ್‌ ಆಂಡ್‌ ಕಂಪಾರಿಟಿವ್‌ ಫಿಲಾಸಫಿ- ಎಸ್‌ಎಸಿಪಿ] ಯ ಸಹಭಾಗಿತ್ವದಲ್ಲಿ ನಾಲ್ಕು ದಿನಗಳ ಸಮಾವೇಶವನ್ನು ಮಾಹೆಯ ಗಂಗೂಬಾಯಿ ಹಾನಗಲ್‌ ಸಭಾಗೃಹದಲ್ಲಿ ಉದ್ಘಾಟಿಸಲಾಯಿತು. ‘ಅನಿಶ್ಚಿತತೆಯ ಕಾಲದಲ್ಲಿ ಗುಣಮುಖತೆ: ಏಷ್ಯನ್ ಮತ್ತು ತೌಲನಿಕ ದೃಷ್ಟಿಕೋನಗಳು’ [ಹೀಲಿಂಗ್‌ ಇನ್‌ ಟೈಮ್ಸ್‌ ಆಫ್‌ ಪ್ರಿಕ್ಯಾರಿಟಿ : ಏಷ್ಯನ್ ಆಂಟ್‌ ಕಂಪಾರಿಟಿವ್‌ ಎಪ್ರಾಚಸ್‌] ಎಂಬುದು ಈ ಸಮಾವೇಶದ ಕೇಂದ್ರ ವಿಷಯವಾಗಿದ್ದು ಇದರಲ್ಲಿ 30 ಮಂದಿ ಅಂತಾರಾಷ್ಟ್ರೀಯ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. 

 

ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ನ ಕುಲಪತಿಗಳಾದ ಡಾ. ಶರತ್‌ ರಾವ್‌ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತ ‘ಗುಣಮುಖತೆ’ ಪರಿಕಲ್ಪನೆಯ ಪ್ರಾಮುಖ್ಯವನ್ನು ಎತ್ತಿ ಹಿಡಿದರು. ‘ಗುಣಮುಖತೆ ಎಂಬುದು ಕೇವಲ ದೈಹಿಕವಾಗಿ ಆದರೆ ಮಾತ್ರ ಸಾಲದು. ಅದಕ್ಕೆ ಮಾನಸಿಕವಾದ, ಆಧ್ಯಾತ್ಮಿಕವಾದ ಆಯಾಮವೂ ಇದೆ’ ಎಂದು ಹೇಳಿದ ಡಾ. ರಾವ್‌ ’ವೈಯಕ್ತಿಕ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ರಕ್ಷಿಸುವಲ್ಲಿ ಗುಣಮುಖತೆಯ ಕುರಿತ ತತ್ತ್ವಜ್ಞಾನ ಚಿಂತನೆಯ ಗೋಷ್ಠಿಗಳು ಮಹತ್ವ ಪಡೆಯುತ್ತವೆ’ ಎಂದರು. ಮೂಳೆ ಶಸ್ತ್ರಚಿಕಿತ್ಸ ತಜ್ಞರಾಗಿ ರೋಗನಿದಾನದ ಕುರಿತ ಸಾಂದ್ರ ಅನುಭವವನ್ನು ಹಂಚಿಕೊಂಡರು.  

 

ಎಸ್‌ಎಸಿಪಿಯ ಅಧ್ಯಕ್ಷ ಮತ್ತು ಸಮಾವೇಶದ ಸಂಚಾಲಕ, ಸ್ಯಾನ್‌ಫ್ರಾನ್ಸಿಸ್ಕೋ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಜಿಯಾಫ್ ಆಸ್ಟನ್ ಅವರು ಮಾತನಾಡಿ, ‘ಏಷ್ಯನ್ ಮತ್ತು ತೌಲನಿಕ ತತ್ತ್ವಶಾಸ್ತ್ರದ ಅಂತಾರಾಷ್ಟ್ರೀಯ ಸಂಘಟನೆ (ಇಂಟರ್‌ನ್ಯಾಶನಲ್‌ ಸೊಸೈಟಿ ಆಫ್‌ ಏಷಿಯನ್‌ ಆಂಡ್‌ ಕಂಪಾರಿಟಿವ್‌ ಫಿಲಾಸಫಿ- ಎಸ್‌ಎಸಿಪಿ] ಸ್ಥಾಪನೆಯಾದ ಕಳೆದ 58 ವರ್ಷಗಳಲ್ಲಿ ಎರಡನೆಯ ಬಾರಿಗೆ ವಾರ್ಷಿಕ ಸಮಾವೇಶ ಭಾರತದಲ್ಲಿ ನಡೆಯುತ್ತಿದೆ. ಭಾರತ ವೈವಿಧ್ಯಮಯವಾದ ದೇಶ. ಇಲ್ಲಿ ಭವ್ಯವಾದ ಆಧ್ಯಾತ್ಮಿಕ ಪರಂಪರೆ, ಶುಶ್ರೂಷಾ ಪರಂಪರೆಗಳ ತಾಯ್ನಾಡಾದ ಭಾರತದಲ್ಲಿ ಎಸ್‌ಎಸಿಪಿಯ ವಾರ್ಷಿಕ ಸಮಾವೇಶ ನಡೆಯುತ್ತಿರುವುದು ಅಭಿಮಾನದ ಸಂಗತಿಯಾಗಿದೆ’ ಎಂದರು. 

ಮಿಶದ ನಿರ್ದೇಶಕರಾಗಿರುವ ಡಾ. ಗಾಯತ್ರಿ ಪ್ರಭು ಅವರು ಮಾತನಾಡಿ, ಪ್ರಸ್ತುತ ಸಮಾವೇಶವು ಕಲೆ ಮತ್ತು ವಿಜ್ಞಾನದ ಸಮನ್ವಯವನ್ನು ಎತ್ತಿ ಹಿಡಿಯುತ್ತದೆ. ಇಂಥ ಮಹತ್ವದ ಕ್ಷೇತ್ರವನ್ನು ಕ್ರಿಯಾಶೀಲವಾಗಿ ಮುನ್ನಡೆಸಲು ಮಾಹೆ ಸದಾ ಬದ್ಧವಾಗಿದೆ’ ಎಂಬುದನ್ನು ಒತ್ತಿಹೇಳಿದರು. 

 

ಸಮಾವೇಶದ ಸಂಯೋಜಕರಲ್ಲೊಬ್ಬರಾದ ಮಿಶದ ತತ್ತ್ವಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕಾರ್ಲ್‌-ಸ್ಟೀಫನ್‌ ಬೋಥಿಲೆಟ್‌ ಅವರು ಸಮಾವೇಶ ಸಂಯೋಜನೆಯ ಔಚಿತ್ಯ ಮತ್ತು ಅಗತ್ಯವನ್ನು ವಿವರಿಸಿದರು. ತತ್ತ್ವಜ್ಞಾನ ವಿಭಾಗದ ಮುಖ್ಯಸ್ಥ ಡಾ. ಶ್ರೀನಿವಾಸ ಕುಮಾರ್‌ ಎನ್‌. ಆಚಾರ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ತತ್ತ್ವಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಕೊಲ್ಯಾಣಿ ಗುಪ್ತ ಅವರು ಕಾರ್ಯಕ್ರಮ ನಿರ್ವಹಿಸಿದರು. 

 

’ಅನಿಶ್ಚಿತತೆಯ ಕಾಲದಲ್ಲಿ ಗುಣಮುಖತೆ: ಏಷ್ಯನ್ ಮತ್ತು ತೌಲನಿಕ ದೃಷ್ಟಿಕೋನಗಳು’ ಎಂಬ ವಿಷಯವು ಇಂದಿನ ಸಂದರ್ಭಕ್ಕೆ ಹೆಚ್ಚು ಪ್ರಸ್ತುತವಾಗಿದ್ದು ಈ ಸಮಾವೇಶದಲ್ಲಿ ಚರ್ಚೆಯಾಗುವ ವಿಚಾರಗಳು ಸಮಾಜಕ್ಕೆ ಉಪಯುಕ್ತವಾಗಿವೆ. ಆರೋಗ್ಯ ಮತ್ತು ಚಿಕಿತ್ಸೆಯಲ್ಲಿ ಧಾರ್ಮಿಕ ಹಾಗೂ ತತ್ತ್ವಶಾಸ್ತ್ರೀಯ ದೃಷ್ಟಿಕೋನಗಳ ಬಳಕೆ, ಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ಸಾಮಾಜಿಕ ಮತ್ತು ಮನೋವೈಜ್ಞಾನಿಕ ಸಾಧ್ಯತೆ, ಪ್ರಾಣಾಪಾಯದಿಂದ ಪಾರಾಗುವಿಕೆ ಮತ್ತು ಆರೈಕೆಗೆ ಸಂಬಂಧಿಸಿ ಪ್ರೇರಣಾದಾಯಕ ವಿಚಾರ, ಪರಂಪರೆ, ಪುರಾಣ, ಸಾಂಸ್ಕೃತಿಕ ಆಚರಣೆಗಳ ಪಾತ್ರ, ವೈಯಕ್ತಿಕ ಹಾಗೂ ಸಾರ್ವಜನಿಕ ಆರೋಗ್ಯದಲ್ಲಿ ಧ್ಯಾನ ಮತ್ತು ಯೋಗದ ಮಹತ್ತ್ವ- ಇತ್ಯಾದಿ ವಿಷಯಗಳು ಇಲ್ಲಿ ಪ್ರಸ್ತಾವನೆಗಳೊಳ್ಳಲಿವೆ. ಭಾರತೀಯ ಜ್ಞಾನ ಪರಂಪರೆಗಳ ಜೀವಂತಿಕೆಯನ್ನು ಎತ್ತಿಹಿಡಿಯುವುದರ ಜೊತೆಗೆ, ಈ ಸಮಾವೇಶದಲ್ಲಿ ಬೌದ್ಧ, ಜೈನ ಮತ್ತು ವೈದಿಕ ಪರಂಪರೆಗಳಲ್ಲಿರುವ ಅರಿವಿನ ಸಂಪನ್ಮೂಲಗಳತ್ತ ವಿಶೇಷ ಗಮನ ಹರಿಸಲಾಗುತ್ತದೆ. ಸಮಾವೇಶದಲ್ಲಿ ಮಂಡನೆಯಾಗುತ್ತಿರುವ ಸಂಶೋಧನ ಪ್ರಬಂಧಗಳು ಮತ್ತು ಸಂವಾದಗಳ ಮೂಲಕ ಭಾರತೀಯ ಮತ್ತು ಪಾಶ್ಚಾತ್ಯ-ಪೂರ್ವ ಏಷ್ಯಾಗಳಂಥ ಜಾಗತಿಕ ಪರಂಪರೆಗಳೊಂದಿಗೆ ಇರುವ ಸಾಮ್ಯ ಮತ್ತು ಭಿನ್ನತೆಗಳನ್ನು ಪರಿಶೀಲಿಸಲಿವೆ.

Dr Sharath K Rao, Vice Chancellor, MAHE, being welcomed to the inauguration of the SACP Annual Conference by Dr Gayathri Prabhu, Director, Manipal Institute of Social Sciences, Humanities and Arts.
Previous Post

ನಾಪತ್ತೆಯಾದ ವ್ಯಕ್ತಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆ

Next Post

ಗ್ರಾಮೀಣಾಭಿವೃದ್ಧಿಗೆ ಟಾಟಾ ಮೋಟಾರ್ಸ್ ಫೌಂಡೇಶನ್ ಹೊಸ ಭಾಷ್ಯ: ಸಮಗ್ರ ಗ್ರಾಮ ವಿಕಾಸ ಯೋಜನೆ ರಾಷ್ಟ್ರಾದ್ಯಂತ 200 ಹಳ್ಳಿಗಳಿಗೆ ವಿಸ್ತರಣೆ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಗ್ರಾಮೀಣಾಭಿವೃದ್ಧಿಗೆ ಟಾಟಾ ಮೋಟಾರ್ಸ್ ಫೌಂಡೇಶನ್ ಹೊಸ ಭಾಷ್ಯ: ಸಮಗ್ರ ಗ್ರಾಮ ವಿಕಾಸ ಯೋಜನೆ ರಾಷ್ಟ್ರಾದ್ಯಂತ 200 ಹಳ್ಳಿಗಳಿಗೆ ವಿಸ್ತರಣೆ

ಗ್ರಾಮೀಣಾಭಿವೃದ್ಧಿಗೆ ಟಾಟಾ ಮೋಟಾರ್ಸ್ ಫೌಂಡೇಶನ್ ಹೊಸ ಭಾಷ್ಯ: ಸಮಗ್ರ ಗ್ರಾಮ ವಿಕಾಸ ಯೋಜನೆ ರಾಷ್ಟ್ರಾದ್ಯಂತ 200 ಹಳ್ಳಿಗಳಿಗೆ ವಿಸ್ತರಣೆ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ದಂಪತಿ ವಶಕ್ಕೆ..!

ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ದಂಪತಿ ವಶಕ್ಕೆ..!

22/05/2026
ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಹಲ್ಲೆ..!

ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಹಲ್ಲೆ..!

22/05/2026
ಮರ ಕಡಿಯುವ ವೇಳೆ ಅವಘಡ: ಕಾರ್ಮಿಕನಿಗೆ ಗಂಭೀರ ಗಾಯ

ಮರ ಕಡಿಯುವ ವೇಳೆ ಅವಘಡ: ಕಾರ್ಮಿಕನಿಗೆ ಗಂಭೀರ ಗಾಯ

22/05/2026
ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 22 ಶುಕ್ರವಾರ )

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 22 ಶುಕ್ರವಾರ )

22/05/2026

Recent News

ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ದಂಪತಿ ವಶಕ್ಕೆ..!

ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ದಂಪತಿ ವಶಕ್ಕೆ..!

22/05/2026
ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಹಲ್ಲೆ..!

ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಹಲ್ಲೆ..!

22/05/2026
ಮರ ಕಡಿಯುವ ವೇಳೆ ಅವಘಡ: ಕಾರ್ಮಿಕನಿಗೆ ಗಂಭೀರ ಗಾಯ

ಮರ ಕಡಿಯುವ ವೇಳೆ ಅವಘಡ: ಕಾರ್ಮಿಕನಿಗೆ ಗಂಭೀರ ಗಾಯ

22/05/2026
ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 22 ಶುಕ್ರವಾರ )

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 22 ಶುಕ್ರವಾರ )

22/05/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved