Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ತೇಜಸ್ F404-IN20 ಇಂಜಿನ್‌ ನಿರ್ವಹಣೆಗೆ ದೇಶೀಯ ಡಿಪೋ: ಜಿಇ–ವಾಯುಪಡೆ ಒಪ್ಪಂದ..!

ತೇಜಸ್ ಎಲ್‌ಸಿಎ ಯುದ್ಧ ವಿಮಾನಗಳಿಗೆ ಶಕ್ತಿ ತುಂಬುವ F404-IN20 ಇಂಜಿನ್‌ ಗಳ ಲಭ್ಯತೆ ಮತ್ತು ನಿರ್ವಹಣೆಯನ್ನು ಸುಲಭಗೊಳಿಸುವ ಉದ್ದೇಶದಿಂದ ಈ ಘಟಕವನ್ನು ಸ್ಥಾಪಿಸಲಾಗುತ್ತಿದೆ.

Dhrishya News by Dhrishya News
15/04/2026
in ಮುಖಪುಟ
0
ತೇಜಸ್ F404-IN20 ಇಂಜಿನ್‌ ನಿರ್ವಹಣೆಗೆ ದೇಶೀಯ ಡಿಪೋ: ಜಿಇ–ವಾಯುಪಡೆ ಒಪ್ಪಂದ..!
0
SHARES
7
VIEWS
Share on FacebookShare on Twitter

ಬೆಂಗಳೂರು, ಭಾರತ, ಏಪ್ರಿಲ್ 15, 2026:ಭಾರತೀಯ ವಾಯುಪಡೆಯ ಲಘು ಯುದ್ಧ ವಿಮಾನ ‘ತೇಜಸ್’ ನಲ್ಲಿ ಬಳಕೆಯಾಗುವ F404-IN20 ಇಂಜಿನ್‌ ಗಳ ಲಭ್ಯತೆ ಮತ್ತು ನಿರ್ವಹಣೆಯನ್ನು ಉತ್ತಮಗೊಳಿಸುವ ಉದ್ದೇಶದಿಂದ ದೇಶದಲ್ಲಿ ಡಿಪೋ ಸೌಲಭ್ಯವನ್ನು ಸ್ಥಾಪಿಸಲು ಜಿಇ ಏರೋಸ್ಪೇಸ್ ಇಂದು ವಾಯುಪಡೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಈ ಘಟಕವನ್ನು ಜಿಇ ಏರೋಸ್ಪೇಸ್‌ ನ ತಾಂತ್ರಿಕ ನೆರವಿನೊಂದಿಗೆ ಭಾರತೀಯ ವಾಯುಪಡೆಯು ಸ್ಥಾಪಿಸಲಿದ್ದು, ಇದು ಭಾರತದ ಸ್ವದೇಶಿ ರಕ್ಷಣಾ ವ್ಯವಸ್ಥೆಗೆ ಹೆಚ್ಚಿನ ಬಲ ನೀಡುವ ನಿರೀಕ್ಷೆಯಿದೆ. ಈ ಘಟಕವು ಕಾರ್ಯಾರಂಭ ಮಾಡಿದ ನಂತರ, ದುರಸ್ತಿಗಾಗಿ ವಿದೇಶಿ ಕೇಂದ್ರಗಳ ಮೇಲೆ ಅವಲಂಬಿತವಾಗುವ ಅಗತ್ಯವಿರುವುದಿಲ್ಲ, ಇದು ಇಂಜಿನ್ ದುರಸ್ತಿಯ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.

 

ಈ ಡಿಪೋ ಘಟಕದ ಮಾಲೀಕತ್ವ, ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಭಾರತೀಯ ವಾಯುಪಡೆಯೇ ನಿರ್ವಹಿಸಲಿದ್ದು, ಜಿಇ ಏರೋಸ್ಪೇಸ್ ತಾಂತ್ರಿಕ ಮಾಹಿತಿ, ತರಬೇತಿ, ಪೂರಕ ಸಿಬ್ಬಂದಿ ಹಾಗೂ ಅಗತ್ಯ ಬಿಡಿಭಾಗಗಳು ಮತ್ತು ವಿಶೇಷ ಉಪಕರಣಗಳನ್ನು ಒದಗಿಸಲಿದೆ. ಈ ಸಹಯೋಗವು ಜಿಇ ಏರೋಸ್ಪೇಸ್ ಮತ್ತು ಭಾರತೀಯ ವಾಯುಪಡೆಯ ನಡುವಿನ ನಾಲ್ಕು ದಶಕಗಳ ಸುದೀರ್ಘ ಪಾಲುದಾರಿಕೆಯ ಮುಂದಿನ ಮಹತ್ವದ ಹೆಜ್ಜೆಯಾಗಿದೆ.

 

ಈ ಕುರಿತು ಮಾತನಾಡಿರುವ ಜಿಇ ಏರೋಸ್ಪೇಸ್‌ ನ ಡಿಫೆನ್ಸ್ ಆಂಡ್ ಸಿಸ್ಟಮ್ಸ್ ವಿಭಾಗದ ಮಾರಾಟ ಮತ್ತು ವ್ಯವಹಾರ ಅಭಿವೃದ್ಧಿ ಉಪಾಧ್ಯಕ್ಷೆ ರೀಟಾ ಫ್ಲಾಹರ್ಟಿ ಅವರು, “ಭಾರತೀಯ ಸಶಸ್ತ್ರ ಪಡೆಗಳನ್ನು ಬೆಂಬಲಿಸುವ ನಿಟ್ಟಿನಲ್ಲಿ ನಾವು ಬದ್ಧರಾಗಿದ್ದು, ತೇಜಸ್ ವಿಮಾನಗಳನ್ನು ಸ್ಥಳೀಯವಾಗಿ ನಿರ್ವಹಿಸುವ ಸಾಮರ್ಥ್ಯ ಹೆಚ್ಚಿಸಲು ಮಾರ್ಗದರ್ಶನ ನೀಡುತ್ತಲೇ ಇರುತ್ತೇವೆ. ಮುಂಬರುವ ಡಿಪೋ ಘಟಕದ ಮೂಲಕ, ನಾವು ಭಾರತೀಯ ವಾಯುಪಡೆಗೆ F404-IN20 ಇಂಜಿನ್‌ ಗಳು ನಿರಂತರವಾಗಿ ಲಭ್ಯವಾಗುವಂತೆ ನೋಡಿಕೊಳ್ಳಲಿದ್ದೇವೆ ಮತ್ತು ಅವರ ರಕ್ಷಣಾ ಅಗತ್ಯಗಳಿಗೆ ಪೂರಕವಾದ ಅತ್ಯಾಧುನಿಕ ತಂತ್ರಜ್ಞಾನವು ಅವರಿಗೆ ಸುಲಭವಾಗಿ ಸಿಗುವಂತೆ ಮಾಡುತ್ತೇವೆ” ಎಂದು ಹೇಳಿದರು.

 

ಜಿಇ ಏರೋಸ್ಪೇಸ್ ಸಂಸ್ಥೆಯು ವಾಣಿಜ್ಯ ಮತ್ತು ಮಿಲಿಟರಿ ವಿಮಾನಯಾನ ಕ್ಷೇತ್ರಗಳ ವಿನ್ಯಾಸ, ಅಭಿವೃದ್ಧಿ, ಉತ್ಪಾದನೆ ಮತ್ತು ನಿರ್ವಹಣೆ ಸೇರಿದಂತೆ ಭಾರತದ ಏರೋಸ್ಪೇಸ್ ವಿಭಾಗವನ್ನು ಅಭಿವೃದ್ಧಿಪಡಿಸಲು ಬದ್ಧವಾಗಿದೆ. ಉದಾಹರಣೆಗೆ, ಎಂಜಿನಿಯರಿಂಗ್ ನಾಯಕರನ್ನು ರೂಪಿಸುವ ಕಂಪನಿಯ ಎರಡು ವರ್ಷಗಳ ‘ಎಡಿಸನ್ ಎಂಜಿನಿಯರಿಂಗ್ ಡೆವಲಪ್‌ ಮೆಂಟ್ ಪ್ರೋಗ್ರಾಂ’ನಿಂದ ಈಗಾಗಲೇ 150 ಎಂಜಿನಿಯರ್‌ ಗಳು ತೇರ್ಗಡೆ ಹೊಂದಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಕೈಗೊಂಡ ಹಲವು ಕೌಶಲ್ಯ ಅಭಿವೃದ್ಧಿ ಯೋಜನೆಗಳು ಪುಣೆಯಲ್ಲಿರುವ ಕಂಪನಿಯ ಕಾರ್ಖಾನೆಯಲ್ಲಿ 5,000ಕ್ಕೂ ಹೆಚ್ಚು ಜನರಿಗೆ ಪ್ರಮುಖ ಉತ್ಪಾದನಾ ಕೌಶಲ್ಯಗಳಲ್ಲಿ ತರಬೇತಿ ನೀಡಲು ಸಹಾಯ ಮಾಡಿವೆ. ಸೆಪ್ಟೆಂಬರ್ 2025 ರಲ್ಲಿ, ಜಿಇ ಏರೋಸ್ಪೇಸ್ ಫೌಂಡೇಶನ್ ಯುನೈಟೆಡ್ ವೇ ಸಹಭಾಗಿತ್ವದಲ್ಲಿ ಬೆಂಗಳೂರಿನಲ್ಲಿ ‘ನೆಕ್ಸ್ಟ್ ಎಂಜಿನಿಯರ್ಸ್’ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಈ ನಾಲ್ಕು ವರ್ಷಗಳ ಕಾಲೇಜು ಮತ್ತು ವೃತ್ತಿ ಸಿದ್ಧತೆ ಯೋಜನೆಯು 4,000 ಯುವ ಎಂಜಿನಿಯರಿಂಗ್ ಆಕಾಂಕ್ಷಿಗಳಿಗೆ ನೆರವಾಗಲಿದೆ.

 

ತೇಜಸ್ ವಿಮಾನಗಳಲ್ಲದೆ, ಜಿಇ ಏರೋಸ್ಪೇಸ್ ಇಂಜಿನ್‌ ಗಳು ಭಾರತೀಯ ನೌಕಾಪಡೆಯ P-8I ಕಡಲ ಗಸ್ತು ವಿಮಾನಗಳು ಮತ್ತು MH60R ಹೆಲಿಕಾಪ್ಟರ್‌ ಗಳಿಗೆ ಹಾಗೂ ಭಾರತೀಯ ವಾಯುಪಡೆಯ AH-64 ಅಪಾಚೆ ಹೆಲಿಕಾಪ್ಟರ್‌ ಗಳಿಗೆ ಶಕ್ತಿ ತುಂಬುತ್ತಿವೆ. ಹಾಗೆಯೇ, ವಾಯುಪಡೆಯ LM2500 ಮರೈನ್ ಗ್ಯಾಸ್ ಟರ್ಬೈನ್‌ ಗಳು ಐಎನ್‌ಎಸ್ ವಿಕ್ರಾಂತ್ ಯುದ್ಧ ವಿಮಾನ ವಾಹಕ ನೌಕೆ ಮತ್ತು P-17 ಶಿವಾಲಿಕ್ ಯುದ್ಧನೌಕೆಗಳಿಗೆ ಕೂಡ ಶಕ್ತಿ ನೀಡುತ್ತಿವೆ.

Previous Post

ಉಡುಪಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣ ಹೆಚ್ಚಿಸಲು: ಆಗ್ರಹಿಸಿ ಸಿಪಿಎಂ ಮನವಿ

Next Post

ಕರಾಯ ಬ್ರಹ್ಮಕಲಶೋತ್ಸವ: ದ್ವಾದಶ ಜ್ಯೋತಿರ್ಲಿಂಗ ದರ್ಶನ ಮೇಳಕ್ಕೆ ಚಾಲನೆ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಕರಾಯ ಬ್ರಹ್ಮಕಲಶೋತ್ಸವ: ದ್ವಾದಶ ಜ್ಯೋತಿರ್ಲಿಂಗ ದರ್ಶನ ಮೇಳಕ್ಕೆ ಚಾಲನೆ

ಕರಾಯ ಬ್ರಹ್ಮಕಲಶೋತ್ಸವ: ದ್ವಾದಶ ಜ್ಯೋತಿರ್ಲಿಂಗ ದರ್ಶನ ಮೇಳಕ್ಕೆ ಚಾಲನೆ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕರಾಯ ಬ್ರಹ್ಮಕಲಶೋತ್ಸವ: ದ್ವಾದಶ ಜ್ಯೋತಿರ್ಲಿಂಗ ದರ್ಶನ ಮೇಳಕ್ಕೆ ಚಾಲನೆ

ಕರಾಯ ಬ್ರಹ್ಮಕಲಶೋತ್ಸವ: ದ್ವಾದಶ ಜ್ಯೋತಿರ್ಲಿಂಗ ದರ್ಶನ ಮೇಳಕ್ಕೆ ಚಾಲನೆ

15/04/2026
ತೇಜಸ್ F404-IN20 ಇಂಜಿನ್‌ ನಿರ್ವಹಣೆಗೆ ದೇಶೀಯ ಡಿಪೋ: ಜಿಇ–ವಾಯುಪಡೆ ಒಪ್ಪಂದ..!

ತೇಜಸ್ F404-IN20 ಇಂಜಿನ್‌ ನಿರ್ವಹಣೆಗೆ ದೇಶೀಯ ಡಿಪೋ: ಜಿಇ–ವಾಯುಪಡೆ ಒಪ್ಪಂದ..!

15/04/2026
ಉಡುಪಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣ ಹೆಚ್ಚಿಸಲು: ಆಗ್ರಹಿಸಿ ಸಿಪಿಎಂ ಮನವಿ

ಉಡುಪಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣ ಹೆಚ್ಚಿಸಲು: ಆಗ್ರಹಿಸಿ ಸಿಪಿಎಂ ಮನವಿ

15/04/2026
ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಏಪ್ರಿಲ್ 15 ಬುಧವಾರ  )

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಏಪ್ರಿಲ್ 15 ಬುಧವಾರ  )

15/04/2026

Recent News

ಕರಾಯ ಬ್ರಹ್ಮಕಲಶೋತ್ಸವ: ದ್ವಾದಶ ಜ್ಯೋತಿರ್ಲಿಂಗ ದರ್ಶನ ಮೇಳಕ್ಕೆ ಚಾಲನೆ

ಕರಾಯ ಬ್ರಹ್ಮಕಲಶೋತ್ಸವ: ದ್ವಾದಶ ಜ್ಯೋತಿರ್ಲಿಂಗ ದರ್ಶನ ಮೇಳಕ್ಕೆ ಚಾಲನೆ

15/04/2026
ತೇಜಸ್ F404-IN20 ಇಂಜಿನ್‌ ನಿರ್ವಹಣೆಗೆ ದೇಶೀಯ ಡಿಪೋ: ಜಿಇ–ವಾಯುಪಡೆ ಒಪ್ಪಂದ..!

ತೇಜಸ್ F404-IN20 ಇಂಜಿನ್‌ ನಿರ್ವಹಣೆಗೆ ದೇಶೀಯ ಡಿಪೋ: ಜಿಇ–ವಾಯುಪಡೆ ಒಪ್ಪಂದ..!

15/04/2026
ಉಡುಪಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣ ಹೆಚ್ಚಿಸಲು: ಆಗ್ರಹಿಸಿ ಸಿಪಿಎಂ ಮನವಿ

ಉಡುಪಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣ ಹೆಚ್ಚಿಸಲು: ಆಗ್ರಹಿಸಿ ಸಿಪಿಎಂ ಮನವಿ

15/04/2026
ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಏಪ್ರಿಲ್ 15 ಬುಧವಾರ  )

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಏಪ್ರಿಲ್ 15 ಬುಧವಾರ  )

15/04/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved