ಬ್ರಹ್ಮಾವರ: ಏಪ್ರಿಲ್ 01:ಒಂದು ಸಾವಿರ ವರ್ಷ ಸನಿಹದ ಇತಿಹಾಸ ಇರುವ ಹಾಸನ ಅರೆಮಾದನ ಹಳ್ಳಿಯಲ್ಲಿರುವ ವಿಶ್ವಬ್ರಾಹಣ ಮಹಾಸಂಸ್ಥಾನದಪರಮಪೂಜ್ಯ ಅನಂತಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿಯವರಿಂದಫೆಬ್ರವರಿ 26 ರಂದು ಸನ್ಯಾಸ ದೀಕ್ಷೆ ಮತ್ತು ಶಿಷ್ಯ ಸ್ವೀಕಾರ ಪಡೆದ ಪರಮಪೂಜ್ಯ ಅನಂತಶ್ರೀ ವಿಭೂಷಿತ ಜ್ಞಾನ ಘನ ವಿದ್ಯಾತೀರ್ಥ ಮಹಾಸ್ವಾಮೀಜಿಗಳವರು ಪ್ರಥಮ ಬಾರಿಗೆ ಉಡುಪಿ ಜಿಲ್ಲೆಯಲ್ಲಿರುವ ಕಜ್ಕೆ ಶಾಖಾ ಮಠಕ್ಕೆ ಎಪ್ರಿಲ್ 05 ಭಾನುವಾರ ಬೆಳಿಗ್ಗೆ 11 ಗಂಟೆಗೆ ಪುರಪ್ರವೇಶಮಾಡಲಿದ್ದಾರೆ.

ಅಂದು ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿಯವರ ತಪೋಬಲದಿಂದಭೂಗತವಾಗಿದ್ದ ಶ್ರೀ ಅನ್ನಪೂರ್ಣೇಶ್ವರೀ ಸಾನ್ನಿಧ್ಯವು ಮರು ನಿರ್ಮಾಣಗೊಂಡ ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಆಗಮಿಸಿ ಬಳಿಕ ಗುರುವಂದನಾ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಲಿದೆ.

ಇದೇ ಸಂದರ್ಭದಲ್ಲಿ ಗುರುಗಳ ಪಾದಪೂಜೆ ಮಾಡಲು ಅವಕಾಶವಿದ್ದು ಭಗವದ್ಬಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರುಗಳ ಮತ್ತು ದೇವರ ಕೃಪೆಗೆ ಪಾತ್ರರಾಗುವಂತೆ ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.








