ಕಾಪು: ಮಾರ್ಚ್ 20: ಕಾಪು ವಿಧಾನಸಭಾ ಕ್ಷೇತ್ರದ ಕುಕ್ಕೆಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು 35 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಕಾಮಗಾರಿಗಳಿಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿದರು.
ಶಾಸಕರ ಶಿಫಾರಸ್ಸಿನ ಮೇರೆಗೆ ಮಂಜೂರಾದ ಅನುದಾನದಡಿ ಬೆಳ್ಳಂಪಳ್ಳಿ 1ನೇ ವಾರ್ಡಿನ ತೆಂಕು ಮನೆ ರಸ್ತೆ ಅಭಿವೃದ್ಧಿಗೆ 10 ಲಕ್ಷ ರೂ., ಬೆಳ್ಳಂಪಳ್ಳಿ 2ನೇ ವಾರ್ಡಿನ ಗುಲಾಬಿ ಕಾಂಚನ್ ಮನೆದಿಂದ ವಾದಿರಾಜ ಕಾಂಚಾನ್ ಮನೆವರೆಗೆ ರಸ್ತೆ ಅಭಿವೃದ್ಧಿಗೆ 10 ಲಕ್ಷ ರೂ., ಬೆಳ್ಳಂಪಳ್ಳಿ ಮಹಾಲಕ್ಷ್ಮಿ ಭಜನಾ ಮಂದಿರದ ಹಿಂಭಾಗದ ರಸ್ತೆ ಅಭಿವೃದ್ಧಿಗೆ 10 ಲಕ್ಷ ರೂ., ಹಾಗೂ ಪುಂಚೂರು ಲಕ್ಷೀ ಬಾಯಿ ಮನೆ ಸಮೀಪ ಬ್ರಿಡ್ಜ್ ರಸ್ತೆ ಅಭಿವೃದ್ಧಿಗೆ 5 ಲಕ್ಷ ರೂ. ಸೇರಿದಂತೆ ಒಟ್ಟು 35 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಕುಕ್ಕೆಹಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪುರಂದರ ಕೋಟ್ಯಾನ್, ಮಾಜಿ ಸದಸ್ಯರಾದ ಶಂಕರ್ ಸಾಲ್ಯಾನ್, ಜಯಾನಂದ ನಾಯಕ್, ಉಷಾ, ಸೌಮ್ಯ, ಪ್ರೇಮಾ, ಸುನಿತಾ ನಾಯಕ್, ಹರೀಶ್ ನಾಯ್ಕ್, ಪೆರ್ಡೂರು ಮಹಾಶಕ್ತಿ ಕೇಂದ್ರ ಅಧ್ಯಕ್ಷ ಜೀಯಾನಂದ ಹೆಗಡೆ, ಪ್ರಧಾನ ಕಾರ್ಯದರ್ಶಿ ಶಿಲ್ಪಾ ಸಾಲ್ಯಾನ್ ಸೇರಿದಂತೆ ಸ್ಥಳೀಯರಾದ ಹರಿಜೀವನ್ ಹೆಗ್ಡೆ, ಕೃಷ್ಣ ನಾಯ್ಕ್, ಅರವಿಂದ್ ಆಚಾರ್ಯ, ದಿಲೇಶ್ ಶೆಟ್ಟಿ, ಗಿರೀಶ್, ಜಗದೀಶ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.







